Thursday, January 28, 2010

ಹೋರಾಟದ ಹಾದಿ



ರಾಯರು ಫೋನ್ ಮಾಡಿದರು."ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ದಯವಿಟ್ಟು ಲೈನ್ ಹೋಲ್ಡ್ ಮಾಡಿರಿ ಇಲ್ಲವೇ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಉತ್ತರ ದೊರೆಯಿತು.೧೫ ನಿಮಿಷದ ನಂತರ ಮತ್ತೆ ರಾಯರ ಫೋನ್ ರಿಂಗ್ ಆಯಿತು.ಮತ್ತೆ ಅವರದೇ ಫೋನ್.ರಾಯರು ಫೋನ್ ಎತ್ತಿದರು."ಅದು ಮೊಬೈಲ್ ಗೆ ಸರಿಯಾಗಿ ರೇಂಜು ಸಿಗುವುದಿಲ್ಲ ಒಮ್ಮೊಮ್ಮೆ ಹೀಗೆ ಮಧ್ಯದಲ್ಲಿ ಕಟ್ ಆಗುತ್ತೆ ಎಂದರು.ಹ ಪರವಾಗಿಲ್ಲ ನಾನು ಟ್ರೈ ಮಾಡಿದೆ ಗೊತ್ತಾಯಿತು ಎಂದರು ರಾಯರು.ಅದು ಏನು ಹೇಳಿದೆ ಅಂದರೆ ನಿಮ್ಮ ಮನೆ ಆಸ್ತಿ ಎಲ್ಲವು ಸಾಕು,ನಮಗೆ ಸಂಪೂರ್ಣ ಒಪ್ಪಿಗೆ.ಎಲ್ಲವನ್ನು ಬಿಡಿಸಿ ಹೇಳುವ ನಿಮ್ಮ,ನೇರ ನಡೆ ನುಡಿ,ನಿಮ್ಮ ತಂದೆ ತಾಯಿ,ಮನೆ ಸುತ್ತ ಮುತ್ತಲ ಪರಿಸರ ಎಲ್ಲ ನಮಗೆ ಸಾಕಷ್ಟು ತೃಪ್ತಿ ನೀಡಿದೆ,ಎಂದರು.ಮನೆಗೂ ಫೋನ್ ಮಾಡಿ ತಿಳಿಸುತ್ತೇವೆ ಮೊದಲು ನಿಮಗೆ ತಿಳಿಸಿದ್ದು ಎಂದರು."ರಾಯರು ಇನ್ನೇನು ಸಂತೋಷಕ್ಕೆ ಪಾರವೇ ಇಲ್ಲ.

ಮನೆಯಲ್ಲಿ ರಾಯರ ತಾಯಿ ಫೋನ್ ಎತ್ತಿದ್ದರು.ಅವರಿಗಂತೂ ಆನಂದದಿಂದ ಕಣ್ಣು ತುಂಬಿ ಬಂತು.ಮನೆಯಲ್ಲಿ ಸುರುವಾಯಿತು ಸಡಗರ ಸಂಭ್ರಮ,ಬ್ರಹ್ಮರಾಯರು ಅವರ ಮನೆಗೆ ಹೋಗಿ ಇನ್ನೊಮ್ಮೆ ಮಾತಾಡಿಸಿ ಬಂದರು.ಹುಡುಗಿ ಕಡೆಯವರು ಔಪಚಾರಿಕವಾಗಿ ಮನೆ ನೋಡಲು ಬಂದದ್ದು ಆಯಿತು.ಎಲ್ಲೆಡೆ ಫೋಟೋ ತೆಗೆದದ್ದು,ಸಂಭ್ರಮಿಸಿದ್ದು ನೆಂಟರಿಷ್ಟರು ಮಾಡಿದ್ದೂ,ಫೋನ್ ಮಾತುಕತೆ ಸುರುವಾದದ್ದು ಎಲ್ಲವು ಆಯಿತು.

ವಿವಾಹಕ್ಕೂ,ವಿವಾದಕ್ಕೂ ಎಲ್ಲಿಲ್ಲದನಂಟು.ಸಾಮಾನ್ಯವಾಗಿ ಯಾವುದೇ ದೊಡ್ಡ ಸಮಾರಂಭ ಮಾಡುವಾಗ ಇವೆಲ್ಲ ಮಾಮೂಲಿ.ಆದರೆ ರಾಯರಿಗೆ ಎಂಗೇಜ್ಮೆಂಟ್ ಇಂದಲೇ ಪಿಕಲಾಟ ಸುರುವಾಯಿತು. ಕೆಲವರು ನಮ್ಮ ಮನೆಗೆ ರಾಯರು ಬಂದೆ ಇಲ್ಲ ಎಂದರು.ಇನ್ನು ಕೆಲವರಿಗೆ ಹೇಳಿಕೆ ಸಾಕಾಗಲಿಲ್ಲ.ಹೀಗೆ ಕುಂದು ಕೊರತೆ ಹುಡುಕುವವರಿಗೆ ಏನೇನು ಬರವಿರಲಿಲ್ಲ,ನೀವು ಎಷ್ಟೇ ಸರಿ ಮಾಡಿದರು ಅದರಲ್ಲಿ ಒಂದಾದರೂ ಹುಳುಕನ್ನು ಎತ್ತಿ ತೋರಿಸುತ್ತಿದ್ದರು.

ಮದುವೆಯ ೨ ದಿನ ಮೊದಲೇ ರಾಯರ ೩ ಜನ ಸೋದರ ಮಾವಂದಿರು ಬಂದಿದ್ದರು.ಚಿಕ್ಕಮ್ಮಂದಿರು,ಅಣ್ಣ,ತಮ್ಮಂದಿರು,ಮಕ್ಕಳು ಎಲ್ಲರು ಸೇರಿದ್ದರು.ರಾಯರ ಮನೆ ತುಂಬಾ ಗೌಜಿ.ಎಲ್ಲೆಲ್ಲು ಗಡಿಬಿಡಿ,ಗಲಾಟೆ.ಕೆಲವರು ರಾಯರನ್ನು ತಮಾಷೆ ಮಾಡುವುದರಲ್ಲಿ ತೊಡಗಿದ್ದರೆ,ಇನ್ನು ಕೆಲವರು ಪ್ರಸ್ತುತ ರಾಜಕೀಯದ ಬಗ್ಗೆ ಮಾತಾಡುತ್ತಿದ್ದರು.ವಾಜಪೇಯಿ ಸರಕಾರ ೧೬ ದಿನದಲ್ಲಿ ಬಿದ್ದು ಹೋದುದು,ದೇವೇಗೌಡ ಪ್ರಧಾನಿ ಆಗಿದ್ದು ಎಲ್ಲೆಡೆ ಬಿಸಿ ಬಿಸಿ ಚರ್ಚೆ ಆಗುತ್ತಿತ್ತು.ಇನ್ನು ಕೆಲವರು ಬಾಳೆ ಎಲೆ,ಪಾತ್ರ ಸಾಮಾನು ಮುಂತಾದವುಗಳನ್ನು ಜೋಡಿಸುತ್ತಿದ್ದರು.ಮಕ್ಕಳು "ಕಂಬಾಟ","ಹಿಡಿಯುವ ಆಟ(ಮುಟ್ಟಾಟ)" ಮುಂತಾದವುಗಳಲ್ಲಿ ಮಗ್ನರಾಗಿದ್ದರು.ಹೆಂಗಸರಿಗಂತೂ ಸೀರೆ,ಚಿನ್ನ ಒಡವೆಗಳನ್ನು ಎಷ್ಟು ನೋಡಿದರು ಸಾಕಾಗುತ್ತಿರಲಿಲ್ಲ.ಇನ್ನೊಬ್ಬರ ಕುತ್ತಿಗೆಯಲ್ಲಿ ಏನೇ ಕಂಡರೂ ಅದು ಅವರಿಗೆ ಚೆನ್ನಾಗಿ ತೋರುತ್ತಿತ್ತು.ಪರಸ್ಪರರ ಭಾಗ್ಯವನ್ನು ವರ್ಣಿಸುತ್ತ,ತಮ್ಮ ತಮ್ಮ ಕುಂದು ಕೊರತೆ ಹೇಳುತ್ತಾ,ಇನ್ನು ಕೆಲವರು ತಮ್ಮ ಮದುವೆಯಂದು ನಡೆದ ಘಟನೆಯನ್ನು ಮೆಲುಕು ಹಾಕುತ್ತಿದ್ದರು.ಮೂಲೆಯಲ್ಲಿ ಕುಳಿತಿದ್ದ ಅಜ್ಜಿಯಂದಿರಂತು ತಮ್ಮ ಸೊಸೆಯಂದಿರನ್ನು ದೂಷಿಸಲು ಶುರು ಮಾಡಿದ್ದರು.ತಮ್ಮ ಕಡೆಗೆ ಈಗ ಮಗ ಲಕ್ಷ್ಯ ಕೊಡುವುದಿಲ್ಲ,ಹೆಂಡತಿ ಹೇಳಿದ ಹಾಗೆ ಕೇಳುತ್ತಾನೆ ಹೀಗೆ ಸೊಸೆಯಂದಿರ ಜೊತೆಗೆ ತಮ್ಮ ಮಗಂದಿರಿಗೂ ಸಹಸ್ರ ನಾಮಾರ್ಚನೆ ಶುರು ಮಾಡಿದ್ದರು.ರಾಯರ ತಾಯಿಗಂತೂ ಎಲ್ಲ ಗಡಿಬಿಡಿ,ಗಡಿಬಿಡಿ ಆಗುತ್ತಿತ್ತು.ತಾನು ಇಟ್ಟ ವಸ್ತುಗಳೊಂದು ಸರಿಯಾಗಿ ಸಿಗುತ್ತಿರಲಿಲ್ಲ.ಎಲ್ಲೆಲ್ಲೋ ಮೂಲೆಯಲ್ಲಿ ಬಿದ್ದಿರುತ್ತಿದ್ದವು.ಹೊರಗಡೆ ಚಪ್ಪರದಲ್ಲಿ ವೀಳ್ಯದೆಲೆಯಂತು ಪುರುಸೊತ್ತಿಲ್ಲದೆ ಖಾಲಿಯಾಗುತ್ತಿತ್ತು."ಮಾಷ್ಟ್ರೆ ಹೊಗೆಸೊಪ್ಪು ಪ್ರಯೋಜನ ಇಲ್ಲೆ,ನಾಳಂಗೆ ಬೇರೆ ತರಕ್ಕು ಇದು ಏನು ಸಾಲ"(ಹೊಗೆಸೊಪ್ಪು ಪ್ರಯೋಜನವಿಲ್ಲ,ನಾಳೆಗೆ ಬೇರೆ ತರಬೇಕು,ಇದರ ಕ್ವಾಲಿಟಿ ಸಾಲದು)ಎಂದು ಶ್ಯಾಮ ಭಟ್ಟರು ಬ್ರಹ್ಮರಾಯರಿಗೆ ಸಲಹೆ ಕೊಟ್ಟೆ ಬಿಟ್ಟರು.ಶ್ಯಾಮ ಭಟ್ಟರು ರಾಯರ ದೊಡ್ಡಪ್ಪನ ಮಗ ಅಣ್ಣ.ಅವರೇ ಎಲ್ಲ ಕೆಲಸ ಕಾರ್ಯ ನೋಡಿಕೊಳ್ಳುತ್ತಿದ್ದರು.ಅಂಗಳಕ್ಕೆಲ್ಲ ಚಪ್ಪರ ಹಾಕಿದ್ದರು.ಜೂನ್ ತಿಂಗಳು,ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು.ಗುಡುಗು,ಮಿಂಚು ಬಂದಾಗಲಂತೂ ಮಕ್ಕಳ ಚೀರಾಟ,ಕೂಗಾಟ ಮುಗಿಲು ಮುಟ್ಟುತ್ತಿತ್ತು.ಚಾ,ಕಾಫಿ ಆಗಾಗ ಕೇಳುತ್ತಿದ್ದರು.ಇಡಿ ಮನೆಯೇ ಕಲ ಕಲ ಎನ್ನುತ್ತಿತ್ತು.

ಮದುವೆಯ ಹಿಂದಿನ ದಿನ ನಡೆಯಬಾರದ ಘಟನೆ ನಡೆದೇ ಹೋಯಿತು.ಮಳೆಯ ಅಬ್ಬರ ಮತ್ತಷ್ಟು ಜೋರಾಯಿತು.ಜೊತೆಗೆ ಗಾಳಿಯೂ ಸೇರಿದ್ದರಿಂದ ತೊಂದರೆ ಸುರುವಾಯಿತು.ಚಪ್ಪರಕ್ಕೆ ಹಾಕಿದ್ದ ೨ ಟಿನ್ ಮಧ್ಯದ್ದು ಸ್ವಲ್ಪ ಜಾರಿತು.ಶ್ಯಾಮಣ್ಣನಿಗೆ ಕೂಡಲೇ ಗೊತ್ತಾಯಿತು,ಬಂದು ಸರಿ ಮಾಡಿ ಆಗುವಷ್ಟರಲ್ಲೇ ಕಾಲ ಮಿಂಚಿತ್ತು.ತುಂಬಾ ನೀರು ಒಳಗೆ ಬಂದಿತ್ತು.ಅಂಗಳದ ಮಧ್ಯದ ಸುಮಾರು ಜಾಗ ಅದಾಗಲೇ ಒದ್ದೆ ಆಗಿತ್ತು.ನಾಳೆ ಮಾಡುವೆ,ನಾಡಿದ್ದು ಗೃಹಪ್ರವೇಶ ೧ ದಿನ ಅಂತರ.ಶ್ಯಾಮಣ್ಣ ಕೂಡಲೇ ಒಂದು ಜೀಪ್ ಮಾಡಿ ಹೋಗಿ ೪,೫ ಗೋಣಿ ಸಿಮೆಂಟಿನ ಹುಡಿ,ಮತ್ತು ಮರದ ಹುಡಿ ತೆಗೆದುಕೊಂಡು ಬಂದರು.ಸಪೂರದ ಕಣಿಯ ಮೂಲಕ ತುಂಬಿದ್ದ ನೀರನ್ನು ಹೊರಗೆ ಹಾಕಿದರು.ಅಷ್ಟು ಜಾಗವನ್ನು ಸಣ್ಣಗೆ ಅಗೆದು ಸಿಮೆಂಟಿನ ಹುಡಿಯ ಜೊತೆಗೆ ಸೇರಿಸಿ ಮತ್ತೆ ಮುಚ್ಚಿದರು.ಶ್ಯಾಮಣ್ಣ,ರಾಮಣ್ಣ ಸೇರಿ ನೆಲ ಹೊಡೆದು ಸರಿ ಮಾಡಿದರು.ಮೇಲೆ ಮರದ ಹುಡಿ ಹಾಕಿ ಬಿಟ್ಟರು.ಮತ್ತೆ ರಾತ್ರಿ ಇನ್ನೊಮ್ಮೆ ಗುಡಿಸಿ ಹೊಸ ಮರದ ಹುಡಿ ಹಾಕಿ ಬಿಟ್ಟರು.

ಅನೇಕ ಸಮಸ್ಯೆಗಳ ಸರಮಾಲೆ ಎದುರಾಯಿತು.ಆದರೆ ರಾಯರು ಪ್ರತಿಯೊಂದನ್ನು ಧನಾತ್ಮಕವಾಗಿ ತೆಗೆದುಕೊಂಡರು.ಅಣ್ಣಂದಿರ ಪೂರ್ಣ ಸಹಕಾರ ಹಿರಿಯರ ಆಶೀರ್ವಾದದಿಂದ ಬಂದ ಸಮಸ್ಯೆಗಳು ಅಷ್ಟೇ ಬೇಗ ಪರಿಹಾರವಾದವು.ರಾಯರ ಹಾಸ್ಯ ಪ್ರಜ್ಞೆ ಎಷ್ಟ್ತಿತ್ತೆಂದರೆ ಈ ವಿವಾಹದ ಗಡಿಬಿಡಿಯ ನಡುವೆಯೂ ಅವರು "ಭಟ್ಟರ ಮದುವೆಗೆ ೧೦೮ ವಿಘ್ನಗಳು" ಎಂಬ ಹಾಸ್ಯ ಲೇಖನವನ್ನು ಬರೆದರು.

ಮದುವೆ ಪುತ್ತೂರಿನ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಯಾಗಿತ್ತು.ಆದರೆ ಮದುವೆಗೆ ರಾಯರ ನಿರೀಕ್ಷೆಗೂ ಮೀರಿ ,ಅದ್ಬುತ ಸ್ಪಂದನೆ ದೊರೆಯಿತು.ಬಂಧುಗಳು,ಗುರುಗಳು,ಮಿತ್ರವೃಂದ ಹೀಗೆ ಎಲ್ಲರ ಸಮಕ್ಷಮದಲ್ಲಿ ರಾಯರ ಮದುವೆ ಅದ್ದೂರಿಯಾಗಿ ನಡೆಯಿತು.ಸಂದ್ಯ ರಾಯರ ಕೈ ಹಿಡಿದಳು.ವೇಧಘೋಷ ಮುಗಿಲು ಮುಟ್ಟಿತು.ಇತ್ತ ರಾಯರು ತಾಳಿ ಕಟ್ಟುತ್ತಿದ್ದಂತೆಯೇ,ಜ್ಯೋಯಿಷರು ರಾಮನಾಥರು ಒಂದು ನಿಟ್ಟುಸಿರನ್ನು ಬಿಟ್ಟರು.ಸಮೀಪದಲ್ಲೇ ಇದ್ದ ಗಣೇಶ ಪ್ರಸಾದರಲ್ಲಿ ನಿನ್ನ ಚಿಕ್ಕಪ್ಪನ ಜೀವನದ ಮೊದಲ ಹಂತ "ಸಂಘರ್ಷದ ಹಾದಿ"ಮುಗಿಯಿತು. ಈ ಜೀವನದಲ್ಲಿ ಆತನಿಗೆ ಎಂದೂ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲ.ಕೆಲವನ್ನು ಹೋರಾಡಿ,ಗುದ್ದಾಡಿ ಪಡೆದುಕೊಳ್ಳಬೇಕಾಯಿತು.ಇಲ್ಲಿಯವರೆಗೂ ಈತನ ಜೀವನ ಹಗ್ಗದ ಮೇಲೆ ನಡೆದಂತಿತ್ತು,ಸ್ವಲ್ಪ ಎಮಾರಿದರು ಕೆಳಗಡೆ ಉರುಳುವುದು ಗ್ಯಾರಂಟಿ.ಆದರೆ ಈತ ಬಹು ವಿಶಿಷ್ಟ,ಈ ಜೀವನವನ್ನು ಆನಂದದಿಂದಲೇ ಕಳೆದ.ಮರಳಿ ಪ್ರಯತ್ನವ ಮಾಡು ಎಂಬ ತತ್ವಕ್ಕೆ ಬದ್ದನಾಗಿ,ಕಷ್ಟಪಟ್ಟು ದುಡಿದದ್ದರಿಂದ ಏನೋ ಒಂದು ಒಳ್ಳೆಯ ಸ್ತಿತಿಯಲ್ಲಿ ಇದ್ದಾನೆ.೧೦೦ಅಂಕಕ್ಕೆ ಒಬ್ಬ ವಿದ್ಯಾರ್ಥಿ ಬರೆದರೆ ಆತನಿಗೆ ಬರಿ ೪೦ ರಿಂದ ೫೦ ಅಂಕಗಳು ಬಂದರೆ ಆತನಿಗೆ ಹೇಗಾದೀತು,ಅದಕ್ಕಿಂತಲೂ ಕಠಿಣವಾದ ಎಷ್ಟೋ ಘಟನೆಗಳು ನಿನ್ನ ಚಿಕ್ಕಪ್ಪನ ಜೀವನದಲ್ಲಿ ನಡೆದಿವೆ,ಆದರೆ ಈತ ಎಲ್ಲವನ್ನು ಗೆದ್ದಿದ್ದಾನೆ.ಅದಕ್ಕೆ ಈತ ಸಾಮಾನ್ಯನಲ್ಲ ಅಸಾಮಾನ್ಯ ಎಂದರು.ಕೆಲವೊಂದು ಘಟನೆಗಳು ಮಾತ್ರ ಗಣೇಶ ಪ್ರಸಾದರಿಗೆ ಗೊತ್ತಿತ್ತು.ಆದರೆ ಅವಷ್ಟೂ ಒಮ್ಮೆಲೇ ಕಣ್ಣ ಮುಂದೆ ಕಟ್ಟಿದಂತಾಗಿ ಪ್ರಸಾದರ ಕಣ್ಣಿಂದ ೨ ಹನಿ ಅವರಿಗೆ ಅರಿವಿಲ್ಲದಂತೆಯೇ ಜಾರಿತು.ಕಣ್ಣೋರೆಸುತ್ತ ಹಾಗಾದರೆ ಮುಂದಿನ ಜೀವನ ಹೇಗೆ ಎಂದು ಕೇಳಿದ.ಈ ಕ್ಷಣದಿಂದ ರಾಯರಿಗೆ ಜೀವನದ ೨ನೆಯ ಹಂತ ಪ್ರಾರಂಭವಾಗಿದೆ ಮುಂದೆ ಅನೇಕ ಅದ್ಬುತಗಳು ಸಂಭವಿಸಲಿವೆ ನೀನೆ ಕಣ್ಣಾರೆ ನೋಡುವಿಯಂತೆ,ಹಾ ನಿನಗೆ ರಾಯರ ಜೊತೆಗೆ ಕೆಲಸ ಮಾಡುವ ಭಾಗ್ಯ ದೊರೆಯುವುದು,ಮುಂದಿನ ಅದ್ಬುತಗಳಲ್ಲಿ ಭಾಗಿಯಾಗುವ ಸುವರ್ಣ ಅವಕಾಶ ನಿನಗೊದಗುವುದು ಎಂದರು.
ಮುಂದುವರೆಯುವುದು......

Thursday, January 21, 2010

ಹೋರಾಟದ ಹಾದಿ



ವಿಜಯ್ ಯ ಚೆಸ್ಸಿನ ಹುಚ್ಚು ಅವನ ಡಿಗ್ರೀಗೆ ಕುತ್ತು ತಂದಿತ್ತು.ಅಂದು ಡಿಗ್ರೀ ಮುಗಿಸದೆ ವಿಜಯ್ ಮನೆ ಸೇರಿದ್ದ.ವಿಜಯ್ ಮನೆಯಲ್ಲಿ ತೋಟ ನೋಡಿಕೊಂಡು,ಊರಲ್ಲಿ ಮದುವೆ,ಉಪನಯನ ,ಪೂಜೆ ಹೀಗೆ ಎಲ್ಲ ಕಾರ್ಯಕ್ರಮಗಳಿಗೆ ಹೋಗುತ್ತಾ ಇದ್ದ.ಮನೆಯಲ್ಲಿ ಬೇಕಾಷ್ಟು ತೋಟ,ಆಸ್ತಿ ಇತ್ತು.ಆದರೂ ತಂದೆಗೆ ಮಗ ಡಿಗ್ರಿ ಮುಗಿಸದ ಕುರಿತು ಭಾರಿ ಬೇಜಾರು ಇತ್ತು.ಮಗನನ್ನು ನಾನಾ ವಿಧದಲ್ಲಿ ಹೇಳಿ,ಕೇಳಿ,ಹಂಗಿಸಿ ನೋಡಿದರು.ಊಹುಂ ಏನು ಪ್ರಯೋಜನವಾಗಲಿಲ್ಲ.ಹೀಗೆ ೪ ವರುಷಗಳು ಕಳೆದವು.ಆದರೆ ದಿನ ಕಳೆದಂತೆ ವಿಜಯ್ ಗು ಹಠ ಬಂದಿತು,ತಂದೆ ನಿತ್ಯ ಬಂದವರ ಎದುರಲ್ಲಿ ಅವಮಾನ ಮಾಡುವುದು ಕಂಡು,ಕೇಳಿ ರೋಸಿ ಹೋಗಿದ್ದ.ಬೆಂಗಳೂರಲ್ಲಿದ್ದು "ಬಿ ಸಿ ಎ" ಮಾಡಬೇಕೆಂದು ಮನದಲ್ಲೇ ನಿರ್ಧರಿಸಿದ.ತನ್ನ ನಿರ್ಧಾರವನ್ನು ಅಮ್ಮನ ಮೂಲಕ ಅಪ್ಪನಿಗೆ ತಿಳಿಸಿದ.ದುಡ್ಡು ವೇಸ್ಟ್ ಇಲ್ಲೇ ತಿಂದು ಉಂಡು ಆರಾಮವಾಗಿ ಇರಬಹುದಲ್ಲ ಎಂದರು ತಂದೆ.ಕೊನೆಗೆ ಅಮ್ಮನ ಮಧ್ಯಸ್ತಿಕೆಯಲ್ಲಿ ರಾಜಿ ಪಂಚಾಯಿತಿಗೆ ನಡೆದು ವಿಜಯ್ ಗೆ ಬೆಂಗಳೂರಲ್ಲಿ "ಬಿ ಸಿ ಎ "ಮಾಡಲು ಅನುಮತಿ ದೊರೆಯಿತು.

ರಾಯರು ಬ್ಯಾಂಕಿನ ಕೆಲಸ ಎಲ್ಲ ಮುಗಿಸಿ ಬೆಂಗಳೂರಿಗೆ ಬಂದರು.ಪ್ರಸಾದ ನಾಯಕರ ಮೂಲಕ ವಿಜಯ್ ಗೆ ರಾಯರು ಬೆಂಗಳೂರಲ್ಲಿ ಕಲಿಯುವ ವಿಚಾರ ತಿಳಿಯಿತು.ರಾಯರನ್ನು ಭೇಟಿಯಾದನು.ಮಾತುಕತೆ ನಡೆಸಿದರು.ಇಬ್ಬರು ಸೇರಿ ಒಂದು ರೂಂ ಮಾಡಿದರು.ರಾಯರು "ಎಂ ಟೆಕ್",ವಿಜಯ್ ಸೆಕೆಂಡ್ ಇನ್ನಿಂಗ್ಸ್ "ಬಿ ಸಿ ಎ".ಜೊತೆ ಜೊತೆಯಲಿ ಅಡುಗೆ ಊಟ,ಕೈಅಡುಗೆಯಲಿ ವಿಜಯ್ ರಾಯರ ಕೈಕೆಳಗೆ ಪಳಗಿದ."ಎಂ ಟೆಕ್ " ಕ್ಲಾಸ್ ಸುರುವಾದ ಮೇಲಂತೂ ರಾಯರಿಗೆ ಪುರುಸೊತ್ತೇ ಸಿಗಲಿಲ್ಲ.ರಾತ್ರಿ ಮಲಗುವಾಗ ೨ ೪೫,೩ ಆಗುತ್ತಿತು.ಬೆಳಗ್ಗೆ ಮತ್ತೆ ಸ್ಟ್ಯಾಂಡರ್ಡ್ ಟೈಮ್ ೭ ೪೫.ಕಾಲೇಜು ರೂಂ,ಪಾರ್ಕ್ ಆಗಾಗ ಬಿಗ್ ಬಜಾರ್,ಪೋರಂ ಗೆ ಭೇಟಿ ನೀಡುತ್ತಿದ್ದರು.ನೋಡುವುದಕ್ಕೆನು ದುಡ್ಡು ಕೊಡುವುದು ಬೇಡವಲ್ಲ,ಮತ್ತೆ ನೋಡುವುದಕ್ಕೆನು ಎಂಬುದು ರಾಯರ ಅಭಿಪ್ರಾಯ."ಬಿ ಎಂ ಟಿ ಸಿ " ಬಸ್ ಪ್ರಯಾಣ.ವಿಜಯ್ ಮಧ್ಯೆ ಮಧ್ಯೆ ಒಮ್ಮೊಮ್ಮೆ ಥಿಯೇಟರ್ ಗೆ ಹೋಗಿ ಬರುತ್ತಿದ.ರಾಯರು ಮಾತ್ರ ಕಾಲೇಜಲ್ಲಿ ಫ್ರೆಂಡ್ಸ್ ಕೈಯಲ್ಲಿ ಸಿಕ್ಕಿದ ಮೂವಿ ಮಾತ್ರ ಕಂಪ್ಯೂಟರ್ ಲ್ಲಿ ನೋಡುತ್ತಿದ್ದರು.ಥಿಯೇಟರ್ ಗೆ ಹೋಗುವ ಪರಿಪಾಠವೇ ಬೆಳೆಸಿರಲಿಲ್ಲ.


ಅದೇ ಸಮಯಕ್ಕೆ ರಾಯರ ಅಣ್ಣನ ಮಗನಿಗೆ 'ಪಿ ಯು ಸಿ' ಮುಗಿದಿತ್ತು.ಅಲ್ಲೂ ಇದೆ ಚಿಂತೆ,ಮುಂದೇನು? 'ಬಿ ಎಸ್ ಸಿ' ಅಥವಾ 'ಇಂಜಿನೀಯರಿಂಗ್' ಅಥವಾ 'ಟಿ ಸಿ ಎಚ್' ಹೀಗೆ ಅಲ್ಲಂತೂ ಪಟ್ಟಿಗಳು ತುಂಬಾ ಉದ್ದವಾಗಿದ್ದವು.ರಾಯರು ಹೇಳಿದರು ಅಲ್ಲ ಅರ್ಥ ಆಗುವ ಹಾಗೆ ವಿವರಿಸಿದರು,ತಮ್ಮ ಉದಾಹರಣೆಯನ್ನೇ ತೆಗೆದುಕೊಂಡು ಮನದಟ್ಟು ಮಾಡಿದರು.ಎಲ್ಲದರ ಫಲವೇ ಕೊನೆಯ ಆಯ್ಕೆ "ಇಂಜಿನೀಯರಿಂಗ್"."ಸಿ ಇ ಟಿ " ಸೆಲ್ ಗೆ ಹೋಗಲು ತಂದೆ ಮಗ ಇಬ್ಬರು ರಾಯರ ರೂಮಿಗೆ ಬಂದರು.ರಾಯರು ಬೆಳಗ್ಗೆಯೇ ಬಸ್ ಸ್ಟ್ಯಾಂಡ್ಗೆ ಬಂದು ಕರೆದುಕೊಂಡು ಹೋದರು ಯಾಕೆಂದರೆ ಅವರ ಅಣ್ಣ ಮತ್ತು ಮಗ ಇಬ್ಬರು ಬೆಂಗಳೂರನ್ನು ಮೊದಲೇ ನೋಡಿದವರಲ್ಲ.ರಾಯರ ರೈಸ್ ಬಾತ್,ಅದನ್ನು ಮಾಡುವ ವೇಗ,ರಾಯರ ಅಡುಗೆ ಕ್ರಮ,ಇವೆಲ್ಲವೂ ರಾಯರ ಅಣ್ಣನ ಮಗನಲ್ಲಿ ಮುಂದೆ ನಾನೂ ಕೈ ಅಡುಗೆ ಮಾಡಬಹುದೇನೋ ಎಂಬ ಭಾವನೆ ಮೂಡಿಸಿತು.ರಾಯರು "ಸಿ ಇ ಟಿ" ಸೆಲ್ ಗೆ ಕರೆದುಕೊಂಡು ಹೋದರು.ಹೀಗೆ ಕಾಲೇಜು ಆಯ್ಕೆ ಎಲ್ಲ ಆಗಿ ಮರಳಿ ರೂಮಿಗೆ ತಲುಪುವಾಗ ಸಂಜೆ ೬ ಆಗಿತ್ತು.

ರಾಯರು ಎಸೈನ್ಮೆಂಟ್,ಸೆಮಿನಾರ್,ಪ್ರಾಜೆಕ್ಟ್ ಎಂದು ೨ ವರ್ಷ ತುಂಬಾ ಕಷ್ಟ ಪಟ್ಟರು.ಆದರೆ ಪಟ್ಟ ಕಷ್ಟಕ್ಕೆ ಫಲ ಒದಗುವ ಸಮಯ ಸನ್ನಿಹಿತವಾಯಿತು.ಕೊನೆಯ ಸೆಮಿಸ್ಟರ್ ನಲ್ಲಿರಬೇಕಾದರೆ ನಡೆದ ಕ್ಯಾಂಪಸ್ ಇಂಟರ್ವ್ಯೂನಲ್ಲಿ ರಾಯರಿಗೆ ಉದ್ಯೋಗವಾಯಿತು.ಇರುವ ೨೦ ಜನರಲ್ಲಿ ೮ ಜನರನ್ನು ಕಂಪೆನಿ ಅರಿಸಿತ್ತು ಅದರಲ್ಲಿ ನಮ್ಮ ರಾಯರು ಒಬ್ಬರು.ಬ್ರಹ್ಮರಾಯರು ಕಣ್ಣನ್ನು ಎರಡೆರಡು ಸಲ ಉಜ್ಜಿ ನೋಡಿದರು.ಕೊನೆಯ ಆಸೆಯು ಕಮರಿತು.ಇನ್ನು ಮಗನನ್ನು ಹಿಡಿಯಲು ಸಾಧ್ಯವಿಲ್ಲ.


ರಾಯರು ಕೆಲಸಕ್ಕೆ ಸೇರಿದರು,ವಿಜಯ್ ಯ "ಬಿ ಸಿ ಎ "ಯು ಒಂದು ಹಂತಕ್ಕೆ ಬಂದಿತು.ರಾಯರು ವಿಟ್ಲದ ಬ್ಯಾಂಕ್ಗೆ ಬಂದರು.ಅದೇ ಮ್ಯಾನೇಜರ್,ರಾಯರು ನನಗೆ ಕೆಲಸವಾಗಿದೆ ನಾನು ಲೋನ್ ಕಟ್ಟಲು ಪ್ರಾರಂಭಿಸುತ್ತೇನೆ ಎಂದರು.ಮ್ಯಾನೇಜರ್ ಲೆಕ್ಕ ಹಾಕಿದರು,ಕೊನೆಗೆ ಕಟ್ಟುವಾಗ ಹಣ ಅಸಲು ಬಡ್ಡಿ ಎಲ್ಲ ಸೇರಿ ಅಸಲು ಮೊತ್ತದ ಒಂದೂವರೆಯಷ್ಟಾಗಿತ್ತು.ಮೊದಲಿಗೆ ಚಕ್ರ ಬಡ್ಡಿ ಇಲ್ಲ ಎಂದಿದ್ದ ಮ್ಯಾನೇಜರ್ ಈಗ ಲೆಕ್ಕ ಹಾಕುವಾಗ ಅದು ಚಕ್ರ ಬಡ್ಡಿ ಆಗುತ್ತದೆ,ಅವತ್ತು ಹೇಳಲು ಮರೆತೆ ಎಂದರು.

ದಿನ ಕಳೆದಂತೆ ವಿಜಯ್ "ಬಿ ಸಿ ಎ " ಮುಗಿಯಿತು.ಮಗನಲ್ಲಾದ ಪರಿವರ್ತನೆ ವಿಜಯ್ ತಂದೆಗೂ ಆಶ್ಚರ್ಯ ಹುಟ್ಟಿಸಿತ್ತು.ಅವರು ರಾಯರಿಗೆ ಖುದ್ದಾಗಿ ಫೋನ್ ಮಾಡಿ ತಮ್ಮ ಕೃತಜ್ಞತೆಯನ್ನು ತಿಳಿಸಿದರು.ವಿಜಯ್ ಗು ಆತ್ಮವಿಶ್ವಾಸ ತುಂಬಿ,ಅವನನ್ನು ಒಂದು ದಾರಿಗೆ ತರಲು ರಾಯರು ಬಹಳ ಪ್ರಯತ್ನ ಪಟ್ಟಿದ್ದರು ಮತ್ತು ಅದರಲ್ಲಿ ಯಶಸ್ವಿಯಾದರು ಕೂಡ.ವಿಜಯ್ "ಎಂ ಸಿ ಎ "ಗೆ ಸೇರಿದ,ರಾಯರು ಅಲ್ಲೇ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.೩ ವರ್ಷದ "ಬಾಂಡ್" ಆಗಿತ್ತು.ರಾಯರು ಮತ್ತು ವಿಜಯ್ ಸೇರಿ ಒಂದು ಡಬಲ್ ಬೆಡ್ ರೂಂ ಇರುವ ಮನೆಗೆ ಶಿಫ್ಟ್ ಆದರು.ರಾಯರು ಬಹಳ ಯೋಚನಾಬದ್ದವಾಗಿ ಸಾಮಾನುಗಳನ್ನು ಜೋಡಿಸತೊಡಗಿದರು.ಸಣ್ಣ ರೂಮಿಂದ ಮನೆಗೆ ಶಿಫ್ಟ್ ಆದ ಹಾಗೆ ಒಂದೊಂದೇ ಸಾಮಾನುಗಳು ಸೇರತೊಡಗಿದವು.ಟಿವಿ,ಫ್ರಿಡ್ಜು ,ವಾಶಿಂಗ್ ಮೆಷಿನ್ ಹೀಗೆ ಎಲ್ಲವು ರಾಯರ ಮನೆ ಸೇರಿದವು.


ರಾಯರ ಅಮ್ಮನಿಗೆ ರಾಯರಿಗೆ ಈಗಾಗಲೇ ವಯಸ್ಸಾಯಿತು ಆದಷ್ಟು ಬೇಗ ಮದುವೆ ಮಾಡಬೇಕು ಎಂಬಾಸೆ.ಬ್ರಹ್ಮರಾಯರೋ ಗಡಿಬಿಡಿ ಇಲ್ಲ ನಿಧಾನಕ್ಕೆ ಆಲೋಚಿಸೋಣ ಎಂಬ ಮನೋಭಾವ ಹೊಂದಿದ್ದರು.ರಾಯರ ಅಮ್ಮನ ಮುಂಚೂಣಿಯಲ್ಲಿ ಕೆಲ ಸಂಬಂಧಗಳು ಬಂದವು.ಹುಡುಗಿ ಹೋಗಿ ನೋಡಿ ಬಂದರು.ಕೆಲವು ಹಿಡಿಸಲಿಲ್ಲ,ಕೆಲವು ಹುಡಿಗಿಯರಿಗೆ ಇಷ್ಟ ಆಗಲಿಲ್ಲ.ಊರಲ್ಲಿ ಎಷ್ಟು ಆಸ್ತಿ ಬದುಕು ಇದೆ ಎಂಬುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದ ಕಾಲವದು.ಕೆಲವರು ಹುಡುಗ ದೂರ ಇರುವುದು,ತಮ್ಮ ಮಗಳನ್ನು ಅಷ್ಟು ದೂರ ಕಳಿಸಲು ಅವರಿಗೆ ಇಷ್ಟ ಇರಲಿಲ್ಲ.ಇನ್ನು ಕೆಲವರು ಆಸ್ತಿ ಬದುಕು ಸಾಲದು ಎಂದರು.ಕೆಲಸವನ್ನು ಯಾರು ಅಷ್ಟು ಸೀರಿಯಸ್ ಆಗಿ ಪರಿಗಣಿಸಲಿಲ್ಲ,ಅವಾಗ ಗೊರ್ಮೆಂಟ್ ಜಾಬ್ ಎಂದರೆ ಎಲ್ಲರಿಗು ಭದ್ರತೆಯ ಭಾವನೆ,ಈ ಪ್ರೈವೇಟ್ ಕಂಪೆನಿ ಮುಂತಾದವು ಅಷ್ಟು ಸಂಪ್ರದಾಯಸ್ತರಿಗೆ ಹಿಡಿಸಲಿಲ್ಲ.

ಅದೇ ಸಮಯಕ್ಕೆ ರಾಯರ ತಾಯಿ ಒಮ್ಮೆ ಜಾತಕ ತೋರಿಸಿದರು.ಜಾತಕ ನೋಡಿದ ಜ್ಯೋಯಿಷರಿಗೆ ಕಣ್ಣೀರು ಬಂತು.ಇಂತಹ ಕಷ್ಟ ಅನುಭವಿಸಿದ ಮತ್ತು ಅದನ್ನು ಎದುರಿಸಿದ ಈ ವ್ಯಕ್ತಿ ಸಾಮಾನ್ಯನಲ್ಲ ಎಂಬ ತೀರ್ಮಾನಕ್ಕೆ ಬಂದರು.ಹುಡುಗನ ಜೀವನ ೩ ಹಂತಗಳು ಬರುವುವು.ಪ್ರತಿಯೊಂದು ಹಂತ ಕಳೆದ ಹಾಗೂ ಹುಡುಗ ಮತ್ತಷ್ಟು ಅಭಿವೃದ್ದಿ ಹೊಂದುವನು.ಈಗ ನಡೀತಾ ಇರುವುದು ಸಂಘರ್ಷದ ಹಾದಿ,ಮುಂದೆ ಬರುವುದು ಹೋರಾಟದ ಬದುಕು.ಕೊನೆಯಲ್ಲಿ ಸಿಗುವುದು ಆಳ್ವಿಕೆಯ ಭಾಗ್ಯ.ಅದ್ಬುತ ಜಾತಕ.ಇವನ ಮದುವೆ ಜಾತಕ ನೋಡದೆ ಮಾಡುವ ಹಾಗಿಲ್ಲ,ಜಾತಕ ನೋಡಲೇಬೇಕು,ಜಾತಕ ಸೇರಿದರೆ ಮಾತ್ರ ಮಾಡಬಹುದು ಎಂದರು.ರಾಮನಾಥ ಬಟ್ಟರು ಅದುವರೆಗೆ ಅಂತಹ ಜಾತಕ ನೋಡಿರಲಿಲ್ಲ.ರಾಯರ ತಾಯಿ ಹೊರಟು ಹೋದ ಮೇಲೆ ಬಟ್ಟರು ತಮ್ಮ ಶಿಷ್ಯನನ್ನು ಕರೆದು ವಿದ್ಯಾಗಿರಿಯಲ್ಲಿ ಮುಂದೊಂದು ದಿನ ಅದ್ಬುತ ಸಂಭವಿಸಲಿದೆ.ಇದನ್ನು ನೋಡುವ ಭಾಗ್ಯ ನಿನಗೆ ಇದೆ ಎಂದರು.

ಅಲ್ಲಿಗೆ ವಿವಾಹಕ್ಕೆ ಮತ್ತೊಂದು ಅಡಚಣೆ.ಈಗ ಎಲ್ಲ ಓಕೆ ಆದರೆ ಜಾತಕ ಸೇರುತ್ತಿರಲಿಲ್ಲ,ಜಾತಕ ಸೇರಿದರೆ ಕೆಲವು ರಾಯರಿಗೆ ಇಷ್ಟವಾದರೆ ಬ್ರಹ್ಮರಾಯರಿಗೆ ಹಿಡಿಸುತ್ತಿರಲಿಲ್ಲ.ಬ್ರಹ್ಮರಾಯರಿಗೆ ಹಿಡಿಸಿದ್ದು ರಾಯರಿಗೆ ಓಕೆ ಆಗುತ್ತಿರಲಿಲ್ಲ.ರಾಯರಿಗೆ ಹಿಡಿಸಿದ್ದು ತಂದೆ ,ತಾಯಿ ಇಬ್ಬರಿಗೂ ಓಕೆ ಆದರೆ ಮಾತ್ರ ರಾಯರು ಆ ಹುಡುಗಿ ನೋಡಲು ಹೋಗುತ್ತಿದ್ದರು.

ಹೀಗೆ ಎಲ್ಲವು ಓಕೆ ಆಗಿ ನೋಡಿ ಬಂದ ಕೆಲವು ಹುಡುಗಿಯವರ ಕಡೆಗೆ ಓಕೆ ಆಗುತ್ತಿರಲಿಲ್ಲ.ಅದು ಅಷ್ಟೇ ಆದರೆ ರಾಯರಿಗೆ ಬೇಜಾರು ಆಗುತ್ತಿರಲಿಲ್ಲ.ಆದರೆ ಎಲ್ಲೆಡೆಯಿಂದ ಬಂದದ್ದು ಒಂದೇ ಅಭಿಪ್ರಾಯ "ಹುಡುಗನ ಗುಣ ನಡತೆ ಬಗ್ಗೆ ೨ ಮಾತಿಲ್ಲ,ಕೆಲಸ ಎಲ್ಲ ಓಕೆ ಆದರೆ ಮನೆಯಲ್ಲಿ ಆಸ್ತಿ ಬದುಕು ಸಾಲದು,ಹಳೆ ಮನೆ,ಮನೆ ಅಂಗಳಕ್ಕೆ ವರೆಗೆ ರೋಡಿನ ವ್ಯವಸ್ತೆ ಇಲ್ಲ."ಹೀಗೆ ಯಾವುದು ಮುಖ್ಯವೋ ಅದನ್ನು ಬಿಟ್ಟು ಎಲ್ಲರು ದುಡ್ಡು,ದುಡ್ಡು ಅಂದಿದ್ದು ರಾಯರಿಗೆ ಬಹಳ ನೋವನ್ನು0ಟುಮಾಡಿತ್ತು.ಸತತವಾಗಿ ೫ ಸಂಭಂಧಗಳು ಇದೆ ಅಭಿಪ್ರಾಯಕ್ಕೆ ಮುರಿದುದು ಒಂದು ಕ್ಷಣ ರಾಯರನ್ನೇ ಅಧೀನರನ್ನಾಗಿಸಿತ್ತು.ರಾಯರು ಒಮ್ಮೆ ಇನ್ನು ಮದುವೆಯೇ ಬೇಡ,ಇನ್ನು ದೊಡ್ಡ ಆಸ್ತಿ,ಮನೆ ಮಾಡಿದ ಮೇಲೆಯೇ ಮದುವೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದರು.

ಅದೇ ಸಮಯಕ್ಕೆ ರಾಯರ, ಕಡೆಯ ಸೋದರಮಾವ ಒಂದು ಸಂಭಂದ ತಂದರು.ರಾಯರು ಆದರೆ ಆಯಿತು, ಇದೆ ಕೊನೆ,ಇಲ್ಲವಾದರೆ ಇನ್ನು ಸಧ್ಯಕ್ಕಿಲ್ಲ ಎಂದು ಹೇಳಿ ಹುಡುಗಿ ನೋಡಲು ಹೋದರು.ರಾಯರು ತುಂಬಾ ಓಪನ್ ಯಾವುದೇ ಮುಚ್ಚು ಮರೆ ಇಲ್ಲದೆ ತಮ್ಮ ಕೆಲಸ,ಮನೆಯ ಪರಿಸ್ತಿತಿ,ಎಲ್ಲ ಹೇಳಿದರು.ಯಾವುದೇ ಸಂಶಯಗಳಿದ್ದರು ಕೇಳಬಹುದು ಎಂದು ಹೇಳಿ ಬಂದರು. ರಾಯರಿಗೆ ಒಪ್ಪಿಗೆ ಆಯಿತು.ಜಾತಕವು ಸೇರಿತು,ನೋಡಿದ ಪುತ್ತೂರಿನ ರಾಮನಾಥರು ಹೇಳಿ ಮಾಡಿಸಿದ ಜೋಡಿ ಎಂದರು.ಈ ಸಲ ವಿಶೇಷವಾಗಿ ಬ್ರಹ್ಮರಾಯರು ಮನೆಯಲ್ಲಿ ಒಪ್ಪಿಗೆ ಸೂಚಿಸಿದರು.ಬ್ರಹ್ಮರಾಯರು ಅಷ್ಟು ಸುಲಭವಾಗಿ ಯಾವುದಕ್ಕೂ ಅನುಮತಿ ಕೊಡುತ್ತಿರಲಿಲ್ಲ,ಆದರೆ ಈ ಸಲ ಗ್ರೀನ್ ಸಿಗ್ನಲ್ ನೀಡಿದ್ದು ರಾಯರಿಗೆ ಆಶ್ಚರ್ಯವನ್ನುಂಟು ಮಾಡಿತು.ಹುಡುಗಿಯಮನೆಯವರ ಉತ್ತರಕ್ಕಾಗಿ ಕಾದು ಕುಳಿತರು.ಎಲ್ಲರಿಗಿಂತ ಹೆಚ್ಚಿನ ಆತಂಕ ರಾಯರ ತಾಯಿಗೆ,ಎಲ್ಲಿಯಾದರೂ ಇದು ಮತ್ತೆ ಹಿಂದಿನದಂತಾದರೆ ಏನು ಮಾಡುವುದು ಎಂಬುದೇ ಯೋಚನೆಯಾಯಿತು.೫ ದಿನ ಕಳೆಯಿತು,ಸರಿ ರಾಯರು ಆಸೆ ಬಿಟ್ಟರು.೬ನೆಯ ದಿನ ರಾಯರಿಗೆ ಹುಡುಗಿಯ ಮನೆಯಿಂದ ಫೋನ್,ಹುಡುಗಿಯ ತಂದೆ ಕಾಲ್ ಮಾಡಿದ್ದರು.ನಿಮ್ಮ ನಡೆ ನುಡಿ ನಮಗೆ ಇಷ್ಟವಾಗಿದೆ,ಆದರೆ ನಿಮ್ಮ ಮನೆ,ಆಸ್ತಿ...ರಾಯರು ಹಲೋ ಹಲೋ ಎಂದರು,ಫೋನ್ ಕಟ್ ಆಗಿತ್ತು.


ಮುಂದುವರೆಯುವುದು...


ಹೋರಾಟದ ಹಾದಿ



ರಾಯರಿಗೆ ಕೂಡಲೇ ಉದ್ಯೋಗವಾಗಲಿಲ್ಲ ಎಂಬುದು ಮನಸ್ಸಿಗೆ ಅಷ್ಟೇನೂ ನೋವನ್ನುಂಟು ಮಾಡಲಿಲ್ಲ.ಆದರೆ "ಬ್ರಹ್ಮರಾಯರ" ಉಪಟಳ ಮಾತ್ರ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿತ್ತು.ನಿತ್ಯ ಯಾವುದಾದರು ಕಾಲೇಜಿನ ಬಗ್ಗೆ ಹೇಳುವುದು,ಬಂದವರಲ್ಲಿ ನಮ್ಮ ಮೂರ್ತಿಗೆ ಪುತ್ತೂರಲ್ಲಿ ಕೆಲಸ ಸಿಕ್ಕೀತು ಆದರೆ ಟೀಚಿಂಗ್ ಗೆ ಏನು ಹೇಳಿದರು ಹೋಗುವುದಿಲ್ಲ ಎನ್ನುವುದು ಇವೆಲ್ಲ ಕೇಳಿ ಕೇಳಿ ಸಾಕಾಗಿತ್ತು.ರಾಯರು ವಿಟ್ಲದಲ್ಲಿ ಡ್ರೈವಿಂಗ್ ಕ್ಲಾಸಿಗೆ ಸೇರಿದರು.ಕೆಲವರು ಓ ಇನ್ನು ಜೀಪ್ ತೆಗೆದು ಬಾಡಿಗೆಗೆ ಓಡಿಸ್ತಾನೋ ಏನೋ ಎಂದು ಮಾತಾಡಲು ಶುರು ಮಾಡಿದರು.ಮನೆಯಲ್ಲಿ ಹೇಳಿದರೆ ತಂದೆಗೆ ಗೊತ್ತಾಗುತ್ತಿರಲಿಲ್ಲ ಮಗನ ಭಾವನೆಗಳು,ಆಸೆಗಳು ಇನ್ನು ಊರವರು ಹೇಳಿದ್ದಕ್ಕೆ ನಾನು ಯಾಕೆ ತಲೆ ಕೆಡಿಸಬೇಕು ಎಂಬಂತಿದ್ದರು ರಾಯರು.೩ ತಿಂಗಳಲ್ಲಿ ಡ್ರೈವಿಂಗ್ ಕಲಿತು,ಲೈಸನ್ಸ್ ಮಾಡಿಸಿ,ಪಾನ್ ಕಾರ್ಡ್,ಪಾಸು ಪೋರ್ಟ್ ಮುಂತಾದ ಬಾಕಿ ಇರುವ ಕೆಲಸಗಳೆಲ್ಲ ಮುಗಿಸಿ ರಾಯರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದರು.

ಇತ್ತ ಮಿತ್ರ ಪ್ರಸನ್ನನಿಗೆ ಕೆಲಸ ಸಿಕ್ಕಿತು.ಆದರೆ ಆತನಿಗೆ ದಿಡೀರಾಗಿ ಡೆಲ್ಲಿಗೆ ಹೋಗಲು ಬಂದದ್ದರಿಂದ ಅವನ ರೂಮೆ ರಾಯರಿಗೆ ಸಿಕ್ಕಿತು.ಉದ್ಯೋಗಕ್ಕಾಗಿ ಅಲೆದಾಟ,ದಿನವಿಡೀ ಓಡಾಟ ರಾಯರಿಗೆ ಬದುಕಿನ ಕರಾಳ ದರ್ಶನವಾಯಿತು.ಸಂಬಳ ಕಡಿಮೆಯಾದರೂ ಪರವಾಗಿಲ್ಲ ಕಂಪೆನಿಗೆ ಸೇರಬೇಕು ಎಂದು ರಾಯರು ಬಯಸಿದ್ದರು.ಆದರೆ ಅವರ ಕಲಿಯುವಿಕೆಗೆ,ಸಾಮರ್ಥ್ಯಕ್ಕೆ ಸೂಕ್ತ ಮನ್ನಣೆ ದೊರೆಯಲಿಲ್ಲ.ಎಲ್ಲರು ಜಾಸ್ತಿ ಇಂಜಿನಿಯರ್ ಕಲಿತವರನ್ನೇ ಆಯ್ಕೆ ಮಾಡಿದ್ದರಿಂದ ರಾಯರಿಗೆ ಉದ್ಯೋಗ ಸಿಗಲು ಕೆಲವು ಸಮಯವೇ ಹಿಡಿಯಿತು.ಕೊನೆಗೂ ರಾಯರಿಗೆ ಒಂದು ಸಣ್ಣ ಕೆಲಸ ಸಿಕ್ಕಿತು.ಇದನ್ನೇ ಬ್ರಹ್ಮರಾಯರು, ಆ ಈಗ ಖರ್ಚಿಗೆ ಕಳಿಸುವುದು ಬೇಡ ಎಂದಿದ್ದಾನೆ ಎಂದರು.ಕೆಲಸಕ್ಕಾಗಿ ರಾಯರು ಪಟ್ಟ ಕಷ್ಟ,ಇಂತ ವಿಷಮ ಪರಿಸ್ತಿತಿಯಲ್ಲೂ ರಾಯರು ತೋರಿದ ಸಂಯಮ,ತಾಳ್ಮೆ ನಿಜವಾಗಿಯೂ ಮೆಚ್ಚುವಂತದ್ದೆ.

ಕಾರ್ತಿಕನಿಗೆ ಕೋಲ್ಕತ್ತಾದಿಂದ ಮುಂಬೈಗೆ ಬಡ್ತಿ ಸಿಕ್ಕಿತು.ಆಗ ತನ್ನ ಸ್ತಾನಕ್ಕೆ ಆತ ಮೂರ್ತಿಯನ್ನು ರೆಕಮೆಂದು ಮಾಡಿದ.ಅದೇ ಸಮಯಕ್ಕೆ ರಾಯರು ಅದೇ ಕಂಪೆನಿಗೆ ಇಂಟರ್ವ್ಯೂಗೆ ಅರ್ಜಿ ಹಾಕಿದ್ದರು.ಇಂಟರ್ವ್ಯೂನಲ್ಲಿ ರಾಯರು ತಮ್ಮ ಪ್ರತಿಭೆಯನ್ನು ದರ್ಶನ ಮಾಡಿ ಕೊಟ್ಟರು.ರಾಯರು ಓಕೆ ಆದರು.ರಾಯರು ತಮ್ಮ ಪ್ರಯಾಣವನ್ನು ಸೀದಾ ಕೋಲ್ಕತ್ತಾಗೆ ಬೆಳೆಸಿದರು.ಕೊನೆಗೂ ರಾಯರ ಮನಸ್ಸಿಗೆ ಓಕೆ ಅನ್ನುವಂಥ ಕೆಲಸ ಸಿಕ್ಕಿತು.

ರಾಯರು ಸೆಮಿನಾರ್ ನಡಿಸಿಕೊಡುವ ರೀತಿ,ಅವರ ಮಾತುಗಾರಿಕೆ ಕಂಪೆನಿಗೆ ಹಿಡಿಸಿತು.ಅವರನ್ನು ನಾಸಿಕದಲ್ಲಿರುವ ಘಟಕಕ್ಕೆ ತರಬೇತಿ ಕೊಡಲು ಕಳಿಸಿತು.ಸಾಮಾನ್ಯವಾಗಿ ಹೊಸದಾಗಿ ಸೇರಿದವರನ್ನು ತರಬೇತಿಗೆ ಕಳಿಸುತ್ತಾರೆ.ಆದರೆ ರಾಯರು ತರಬೇತಿ ಕೊಡಲು ಬಂದಿದ್ದರು.ಅಲ್ಲಿರುವಾಗ ರಾಯರು "ಆಗ್ರಾ","ತಾಜ್ ಮಹಲ್ " ವೀಕ್ಷಿಸಿದರು.ಸುತ್ತ ಮುತ್ತ ಇರುವ ಎಲ್ಲ ಪ್ರವಾಸ ತಾಣಗಳನ್ನು ಸಂದರ್ಶಿಸಿದರು.ಮುಂಬೈ,ನಾಸಿಕ ಸುತ್ತ ಮುತ್ತ ಎಲ್ಲ ಕಡೆ ಹೋದರು.ಅವುಗಳನ್ನು ಬ್ಲಾಗಲ್ಲಿ ಇತರರಿಗಾಗಿ ಬರೆದರು.ಫೋಟೋ ತೆಗೆದರು,ನೆಟ್ಟಲ್ಲಿ ಪಬ್ಲಿಶ್ ಮಾಡಿದರು.ಷೇರ್ಖಾನ್ ಮೂಲಕ ಹೂಡಿಕೆ ಪ್ರಪಂಚಕ್ಕೆ ಕಾಲಿಟ್ಟರು.ಶೇರು ಲೋಕದ ಒಳ ಹೊರ ಪರಿಚಯ ಮಾಡಿಕೊಂಡರು.ಟೆಕ್ನಿಕಲ್ ಬ್ಲಾಗ್ ಗಳು ಹೊರಬಂದವು.ಹೀಗೆ ಸಾಹಿತ್ಯ ಮತ್ತು ವಿಜ್ಞಾನ ಎರಡನ್ನು ಬರೆದರು.


ಮಗ ಲೆಕ್ಚರ್ ಆಗುತ್ತಾನೆ ಎಂದು ಕನಸು ಕಟ್ಟಿಕೊಂಡಿದ್ದ ಬ್ರಹ್ಮರಾಯರಿಗೆ ಭಾರಿ ನಿರಾಸೆಯಾಯಿತು.ಮೊದಲಿಗೆ ಕೆಲಸ ಸಿಗಲಿಲ್ಲ ಎನ್ನುವಾಗ "ಬ್ರಹ್ಮರಾಯರಿಗೆ " ಮನದಲ್ಲಿ ಒಳಗೊಳಗೇ ಖುಷಿ ಆಗುತ್ತಿತ್ತು,ಮಗ ಇನ್ನಾದರೂ ಮನಸ್ಸು ಬದಲಾಯಿಸಬಹುದು,ಇಲ್ಲೇ ಎಲ್ಲಾದರೂ ಟೀಚಿಂಗ್ ಗೆ ಸೇರಬಹುದು ಎಂಬ ಭಾರಿ ನಿರೀಕ್ಷೆ ಇತ್ತು.ಆದರೆ ಇವ ಹಠ ಬಿಡದೆ ಕಂಪೆನಿ ಸೇರಿದ,ಇನ್ನು ಹೇಗೂ ಅದು ಬಿಟ್ಟು ಬರುವ ಹಾಗಿಲ್ಲ ಎಂದು ಬ್ರಹ್ಮರಾಯರು ಯೋಚಿಸಿದರು.ಅದರೂ ರಾಯರು ಊರಿಗೆ ಬಂದಾಗ ಒಮ್ಮೆ ಹೇಳಿ ನೋಡುವುದುಂಟು,ಎಲ್ಲಿಯಾದರೂ ಮನಸ್ಸು ಬದಲಾಯಿಸಿದರೆ ಎಂಬ ಒಂದು ಸಣ್ಣ ಅಸೆ.ಇತ್ತ ರಾಯರ ತಾಯಿಗೆ ಈಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು.ರಾಯರು ಸಂಕಟ ಪಡುವುದನ್ನು,ಕಷ್ಟ ಅನುಭವಿಸುವುದನ್ನು ತಾಯಿಗೆ ನೋಡಲು ಆಗುತ್ತಿರಲಿಲ್ಲ.ನಿತ್ಯ ದೇವರಿಗೆ ಒಮ್ಮೆ ನಮಸ್ಕಾರ ಮತ್ತೊಮ್ಮೆ ಬೈಗುಳ ಎರಡೂ ಒತ್ತೊತಿಗೆ ಸಿಗುತ್ತಿತ್ತು.ಒಮ್ಮೆ ನನಗೇನೂ ಕೊಡುವುದು ಬೇಡ,ಮೂರ್ತಿಗೆ ಒಂದು ದೊಡ್ಡ ಕೆಲಸ ಕೊಟ್ಟರೆ ಸಾಕು,ಅವ ಪಾಪ ಎಷ್ಟು ಕಷ್ಟ ಪಡುತ್ತಿದ್ದಾನೆ ಎಂದರೆ ಮತ್ತೊಮ್ಮೆ ದೇವರೇ ಇಲ್ಲ ದೇವರು ಇರುವುದು ನಿಜವಾದರೆ ಮೂರ್ತಿಗೆ ಹೀಗೆ ಆಗುತ್ತಿರಲಿಲ್ಲ,ಅವ ಯಾರಿಗೂ ಕೆಡುಕುಂಟು ಮಾಡಿದವನಲ್ಲ ಅವನಿಗೆ ಯಾಕೆ ಹೀಗೆ ಕಷ್ಟ ಕೊಡುವುದು,ದೇವರು ಎಂಬುವನು ಇದ್ದರೆ ಹೀಗೆ ಆಗುತ್ತಿರಲಿಲ್ಲ, ಎಲ್ಲ ಸುಳ್ಳು ,ನಾವು ಸುಮ್ಮನೆ ನಂಬುವುದು ಎಂದು ಬೈಯುತ್ತಿದ್ದರು .ಆದರೆ ಯಾರೇನೆ ಹೇಳಲಿ ರಾಯರು ಮಾತ್ರ ದೇವರಿಂದ ಸಮದೂರದಲ್ಲಿದ್ದರು.ಜಾಸ್ತಿ ನಂಬುತ್ತಿರಲಿಲ್ಲ,ಜಾಸ್ತಿ ಬೈಯುತ್ತಿರಲಿಲ್ಲ,ತಮ್ಮ ಪಾಡಿಗೆ ತಾವಿದ್ದರು.

ರಾಯರು ಯಾವುದೇ ಆದರು ಸಣ್ಣದರಲ್ಲೇ ತೃಪ್ತಿ ಹೊಂದುತ್ತಿರಲಿಲ್ಲ.ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದರು.ಇಲ್ಲೇ ಇದ್ದರೆ ಜಾಸ್ತಿ ಅಭಿವೃದ್ದಿ ಇಲ್ಲ ಎಂದು ಅನಿಸತೊಡಗಿತು."ಎಂ ಟೆಕ್ "ಮಾಡುವುದೆಂದು ಮನದಲ್ಲೇ ನಿರ್ಧರಿಸಿದರು.ಮನೆಯಲ್ಲಿ ತಿಳಿಸಿದರು."ಬ್ರಹ್ಮರಾಯರ " ತಲೆ ಕೂಡಲೇ ಓಡಿತು.ಬಹುಶ: ಮಗನಿಗೆ ಕಂಪೆನಿಯಲ್ಲಿ ಕೆಲಸ ಮಾಡಿ ಬೊಡಿಯಿತು.ಇನ್ನು "ಎಂ ಟೆಕ್ "ಮಾಡಿ ಇಲ್ಲೇ ಎಲ್ಲಾದರೂ "ಲೆಕ್ಚರ್"ಆಗಿ ಸೇರಬಹುದು ಮನದಲ್ಲಿ ಹೊಸ ಅಸೆ ಚಿಗುರಿತು.ಕೂಡಲೇ ಒಪ್ಪಿಗೆ ಕೊಟ್ಟರು.ಕೊನೆಗೆ ರಾಯರು ಫೆಬ್ರವರಿಯಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು.ಮತ್ತೆ ಬೆಂಗಳೂರಿಗೆ ಹಿಂದಿರುಗಿದರು.ಕಾಲೇಜಿನ ಹುಡುಕಾಟ, ಫೀಸ್,ಕೋರ್ಸ್ ,ಸಿಲ್ಲೆಬಸ್ ಮುಂತಾದ ವಿವರ ಸಂಗ್ರಹಿಸಿದರು.

ಮೇ ತಿಂಗಳಲ್ಲಿ ರಾಯರ ಅಣ್ಣನ ಮಗಂದು ಉಪನಯನ ಕಾರ್ಯಕ್ರಮವಿತ್ತು.ರಾಯರು ಬಂದರು.ಉಪನಯನ ಗೌಜಿಯೋ ಗೌಜಿ,ಏನು ಸಂಬ್ರಮ ಏನು ಗಲಾಟೆ.ಕಾರ್ಯಕ್ರಮದಲ್ಲಿ ಸುಧರಿಕೆ ಮಾಡಿದ್ದೂ,ಹೋಳಿಗೆ ಹೊಡೆದದ್ದು ಆಯಿತು.ಎಲ್ಲ ಮುಗಿದು ಮಧ್ಯಾನ್ನ ಮೇಲೆ ಹಾಗೆ ಸೋಫಾಕ್ಕೆ ಒರಗಿ ರಾಯರು,ಸಂಭಂಧಿಕರಾದ ಭರತನು ಕೂತಿದ್ದರು.ಮುದ್ದಿನ ಸೊಸೆ ಭವ್ಯಳ ಕೈಯಲ್ಲಿ ಒಂದು ಹಾಡು ಹಾಡಿಸಬೇಕೆಂದು ಬಹಳ ಪ್ರಯತ್ನ ಪಡುತ್ತಿದ್ದರು.ಅವಳು ಹೇಳುತ್ತಿರಲಿಲ್ಲ ಸಾಕಸ್ಟು ಸತಾಯಿಸುತ್ತಿದ್ದಳು.ಆಗ ಅಲ್ಲಿಗೆ ಬಂದ ಒಂದಿಬ್ಬರು ನೆಂಟರಿಸ್ತರು ಅಲ್ಲ ಮೂರ್ತಿ ಈಗಿನ ಕಾಲದಲ್ಲಿ ಒಂದು ಕೆಲಸಾಂತ ಆಗುವುದೇ ಕಷ್ಟ,ಅಂಥದುದರಲ್ಲಿ ಇದ್ದ ಕೆಲಸವೆ ಬಿಟ್ಟು ಬಂದಿದ್ದಿಯಲ್ಲ,"ಎಂ ಟೆಕ್ "ಮಾಡಬಾರದು ಅಂತ ಹೇಳುವುದಲ್ಲ ಸ್ವಲ್ಪ ನೋಡಿಕೊಳ್ಳಬೇಕು ಎಂದರು.ರಾಯರು ಏನು ಹೇಳಲಿಲ್ಲ.ಯಾಕೆಂದರೆ ಆಗ ಏನು ಹೇಳಿದರು ಅವರು ಕೇಳಿಸಿಕೊಳ್ಳುವ ಹಾಗಿರಲಿಲ್ಲ.ಹಾಗಾಗಿ ರಾಯರು ಮುಂದೆ ದೊಡ್ಡ ಕೆಲಸವಾಗಬಹುದು ನೋಡುವ ಎಂದು ಹಾರಿಕೆಯ ಉತ್ತರ ಕೊಟ್ಟರು.
ನಿಧಾನವಾಗಿ ಒಬ್ಬೊಬ್ಬರೇ ಚದುರತೊಡಗಿದರು.ಜ್ಯೂಸಿಗೆಂದು ತಂದಿದ್ದ ಕಲ್ಲಂಗಡಿ ಹಣ್ಣು ಉಳಿದಿತ್ತು ಅದನ್ನು ತಿನ್ನುತ್ತ ರಾಯರು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು,ಅಲ್ಲಲ್ಲ ಹಾಡಿಕೊಂಡರು."ಯಾರೇನೆ ಹೇಳಲಿ ನಾ ಎಂ ಟೆಕ್ ಮಾಡುವೆ ".ಮುಖದಲ್ಲೊಂದು ವಿಷಾದದ ನಗೆ ಚಿಮ್ಮಿತು.ಸೋಫಾಗೆ ಒರಗಿ ಹಾಗೆ ಯೋಚನಾಮಗ್ನರಾದರು.

ರಾಯರು ತಮ್ಮ ಮುಂದಿನ ೨ ವರ್ಷಗಳಿಗೆ ಬೇಕಾಗುವಷ್ಟು ಹಣ ಹೊಂದಿಸಿದ್ದರು.ಆದರೆ ಕಾಲೇಜು ಫೀಸ್ ಗೆ ಬೇಕಾದ ದುಡ್ಡಿಗೆ "ಎಜುಕೇಶನ್ ಲೋನ್" ಮಾಡುವುದೆಂದು ನಿರ್ಧರಿಸಿದರು."ಬ್ರಹ್ಮರಾಯರ " ಒಪ್ಪಿಗೆಯೂ ಆಯಿತು.ವಿಟ್ಲದ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೇಳಿದರು.ಮ್ಯಾನೆಜೆರ್ ಚೆನ್ನಾಗಿ ಮಾತಾಡಿ ಒಂದು ಫಾರಂ ಕೊಟ್ಟು ಫಿಲ್ ಮಾಡಿ,ನಿಮ್ಮದು ಮತ್ತು ತಂದೆಯದು ಸಹಿ ಹಾಕಿ ತನ್ನಿ,ಎಲ್ಲ ವ್ಯವಸ್ತೆ ಮಾಡುವ ಎಂದರು.ಸರಿ ರಾಯರು ವಿವರ ಕೇಳಿದರು.ಚಕ್ರಬಡ್ಡಿ ಎಲ್ಲ ಏನು ಇಲ್ಲ.ನೀವು ಕಲಿಯುವಾಗ ಏನು ಕಟ್ಟುವುದು ಇರುವುದಿಲ್ಲ,ಕಲಿತು ೧ ವರ್ಷ ಟೈಮ್ ಇದೆ,ಆಮೇಲೆ ೫ ವರ್ಷ ಅವಧಿ ಇದೆ,ಕಂತುಗಳಲ್ಲಿ ಕಟ್ಟಿದರೆ ಆಯಿತು ಎಂಬ ಉತ್ತರ ಸಿಕ್ಕಿತು.ಮೊದಲಿಗೆ ನಿಮ್ಮದು ಒಂದು ಅಕೌಂಟ್ ಓಪನ್ ಮಾಡಬೇಕು ಎಂದರು.ಅದಕ್ಕೆ ಬೇಕಾದ ಫಾರಂ ಎಲ್ಲ ತೆಗೆದುಕೊಂಡು ರಾಯರು ಮನೆಗೆ ಬಂದರು.


ತಂದೆಗೆ ಎಲ್ಲ ವಿಷಯ ತಿಳಿಸಿದರು.ರಾಯರತಂದೆಯ"ಪೆನ್ಶನ್ ಹಣ "ಬರುತ್ತಿದ್ದುದು ಅದೇಬ್ಯಾಂಕ್ಗೆ .ಹಾಗಾಗಿ ಇಂಟ್ರೋಡ್ಯುಸರ್ ಬ್ರಹ್ಮರಾಯರೇ.ಅವರ ಸಹಿ,ಅಕೌಂಟ್ ನಂಬರ್ ಬರೆದು ಫಾರಂ ಫಿಲ್ ಮಾಡಿ,ರಾಯರು ಮರುದಿನ ವಿಟ್ಲಕ್ಕೆ ಹೋದರು.ಅಲ್ಲಿ ಫಾರಂ ಪರಿಶೀಲನೆ ಮಾಡಿದ ನಂತರ ಇದು ಇಂಟ್ರೋಡ್ಯುಸೆರ್ ಸಹಿ ಮ್ಯಾಚ್ ಆಗುವುದಿಲ್ಲ ಎಂದಾಯಿತು.ಬ್ರಹ್ಮರಾಯರು ತಾವು ಅಕೌಂಟ್ ಓಪನ್ ಮಾಡುವಾಗ ಪೂರ್ಣ ಸಹಿ ಹಾಕಿದ್ದರು.ಇಲ್ಲಿ ಶಾರ್ಟ್ ಫಾರಂ ಹಾಕಿದ್ದರು.ರಾಯರಿಗೆ ಸಿಟ್ಟು, ಮತ್ತು ಬೇಜಾರು ಒಟ್ಟಿಗೆ ಆಯಿತು,ಇನ್ನು ಪುನ: ಮನೆಗೆ ಹೋಗಿ ಬದಲಾಯಿಸುವುದು ಯಾರು?ಇಲ್ಲೇ ಯಾರಾದರು ಅಕೌಂಟ್ ಇರುವವರು ಪರಿಚಯದವರು ಸಿಗುತ್ತಾರೆಯೇ ಎಂದು ಹಾಗೆ ಪೇಟೆಗೆ ಬಂದರು.ಅದೃಷ್ಟಕ್ಕೆ ಸ್ಟುಡಿಯೋದವರೊಬ್ಬರು ರಾಯರಿಗೆ ಪರಿಚಯವಿರುವವರು ಸಿಕ್ಕಿದರು,ಅವರ ಸಹಿ ಹಾಕಿಸಿ ಮತ್ತೆ ಬ್ಯಾಂಕಿಗೆ ಬಂದು ಕೊಟ್ಟರು.ಅಕೌಂಟ್ ಓಪನ್ ಆಯಿತು.ಈಗ ಮ್ಯಾನೇಜರ್ ನೀವು ಮತ್ತು ತಂದೆ ನಾಳೆ ಒಟ್ಟಿಗೆ ಬನ್ನಿ ಇನ್ನು ಒಂದೆರಡು ಸಹಿ,ಫಾರಂ ಫಿಲ್ ಮಾಡುವುದಿದೆ ಎಂದರು.ರಾಯರು ಮನೆಗೆ ಬಂದು ವಿಷಯ ಹೇಳಿ ಸಹಿ ತಪ್ಪಿದರ ಬಗ್ಗೆ ತಿಳಿಸಿದಾಗ,ಬ್ರಹ್ಮರಾಯರು ಹಾ ನೀನು ಹೇಳಿದ್ದು ಸರಿ,ನಾನು ೨,೩ ರೀತಿ ಸಹಿ ಮಾಡುತ್ತೇನೆ,ಎಲ್ಲಿ ಯಾವುದನ್ನೂ ಹಾಕಿದ್ದೇನೆ ಎಂದು ನೆನಪಿಲ್ಲ,ಹಿಂದೆ ಒಮ್ಮೆ ಅದೇ ಬ್ಯಾಂಕ್ ಲ್ಲಿ ಹಣ ತೆಗೆಯಲು ಹಾಗೆ ಆಗಿತ್ತು,ಆಮೇಲೆ ಅವರ ಹತ್ತಿರ ಕೇಳಿ ಸರಿಯಾದ ಸಹಿ ಹಾಕಿದ ಮೇಲೆಯೇ ಕೊಟ್ಟದ್ದು ಎಂದರು.

ಬ್ರಹ್ಮರಾಯರು ಮತ್ತು ರಾಯರು ಒಟ್ಟಿಗೆ ಬ್ಯಾಂಕಿಗೆ ಹೋದದ್ದೇ ಇಲ್ಲ.ರಾಯರು ೧೦ ಗಂಟೆಗೆ ಮನೆಯಿಂದ ಹೊರಟರೆ ಬ್ರಹ್ಮರಾಯರು ನೀನು ಹೋಗು ನಾನೀಗ ಬರುತ್ತೇನೆ ಎನ್ನುವುದು.ಸರಿ ಎಂದು ರಾಯರು ಬ್ಯಾಂಕಿಗೆ ಹೋಗಿ ೧ ಗಂಟೆವರೆಗೆ ಕಾದರು.ಬ್ರಹ್ಮರಾಯರ ಪತ್ತೆಯೇ ಇಲ್ಲ,ಆಮೇಲೆ ರಾಯರು ತಾವು ಎಲ್ಲೆಲ್ಲ ಫಿಲ್ ಮಾಡಬೇಕೆಂದು ಕೇಳಿ ಮಾಡಿ,ತಮ್ಮ ಸಹಿ ಹಾಕಿ ತಂದೆ ಇನ್ನೇನು ಬರಬಹುದು ಎಂದು ಹೇಳಿ ಅಲ್ಲಿಂದ ಬಂದರು.ರಾಯರ ಬಸ್ ವಿಟ್ಲದಿಂದ ಹೊರಟ ಕೂಡಲೇ ಬ್ರಹ್ಮರಾಯರು ವಿಟ್ಲ ತಲುಪಿದರು.ಬ್ಯಾಂಕಿಗೆ ಹೋಗಿ ಮ್ಯಾನೇಜರ್ ಹತ್ತಿರ ಅದು ಇದು ಮಾತನಾಡಿ ಒಂದೆರಡು ಕಡೆ ಸಹಿ ಹಾಕಿ ಬ್ರಹ್ಮರಾಯರು ಬಂದರು.

ಮರುದಿನ ರಾಯರು ಹೋದರೆ,ನಿಮ್ಮ ತಂದೆಯದು ಇನ್ನು ೨,೩ ಕಡೆ ಸಹಿ ಆಗಬೇಕಿತ್ತು,ನಾವು ಅವರು ಹಾಕಿರಬಹುದು ಎಂದು ಆಗ ನೋಡಲಿಲ್ಲ ಎಂದರು.ರಾಯರಿಗೆ ತಂದೆಯ ಸ್ವಭಾವದ ಪರಿಚಯ ನಿಧಾನವಾಗಿ ಆಗತೊಡಗಿತು.ಯಾಕೆಂದರೆ ಸಣ್ಣದಾಗಿರುವಗಲೇ ತಂದೆ ದೂರ ಇದ್ದುದು.ಅಮ್ಮನೇ ಎಲ್ಲ ಕೆಲಸ ನೋಡಿಕೊಂಡಿದ್ದುದು,ಹಾಗಾಗಿ ತಂದೆಯದು ದೊಡ್ಡ ಟಚ್ ಇರಲಿಲ್ಲ.ಏನು ಮಾಡಲು ಸಾಧ್ಯವಿಲ್ಲ,ರಾಯರು ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದರು.ತಂದೆ ನಾನು ಬರ್ತೇನೆ ನೀನು ನಿನ್ನ ಕೆಲಸ ಮುಗಿಸಿ ಬಾ ಗಡಿಬಿಡಿ ಇಲ್ಲ ಎಂದರು.ಇನ್ನು ಇವತ್ತು ಕಾಯುವುದು ವೇಸ್ಟ್ ಎಂದು ರಾಯರು ಹಿಂದಿರುಗಿದರು.

ಮರುದಿನ ಮ್ಯಾನೇಜರ್ ಸಹಿ ಎಲ್ಲ ಸರಿಯಾಗಿದೆ,ಇನ್ನು ಒಂದೆರಡು ಸ್ಟಾಂಪ್ ಪೇಪರ್ ಬೇಕಿತ್ತು,ಅಗ್ರೀಮೆಂಟ್ ಮಾಡಲು ಎಂದರು.ಸ್ಟಾಂಪ್ ಪೇಪರ್ ಗೆ ಆಗ ಬಿ ಸಿ ರೋಡ್ ಗೆ ಹೋಗಬೇಕಿತ್ತು.ರಾಯರು ಅಲ್ಲಿಗೆ ಹೋಗಿ ೨ ಸ್ಟಾಂಪ್ ಪೇಪರ್ ತೆಗೆದುಕೊಂಡು ಬರುವಾಗ ಮಧ್ಯಾನವಾಗಿತ್ತು.ಮೂರ್ತಿ ನೀವು ನಾಳೆ ಇದನ್ನು ತೆಗೆದುಕೊಂಡು ಬನ್ನಿ,ಇವತ್ತು ಸ್ವಲ್ಪ ಬ್ಯುಸಿ ಇದ್ದೇವೆ ಎಂದರು ಮ್ಯಾನೆಜೆರ್.ಮತ್ತೂ ಒಂದು ದಿನ ಮುಂದೆ ಹೋಯಿತು.

ಮರುದಿನ ಸ್ಟಾಂಪ್ ಪೇಪರ್ ನಲ್ಲಿ ಬರೆಯಬೇಕಾದ ಒಪ್ಪಂದವನ್ನೆಲ್ಲಾ ಬರೆದಾಯಿತು.ಆದರೆ ತಂದೆ,ಮಗ ಇಬ್ಬರು ಒಟ್ಟಿಗೆ ಮ್ಯಾನೆಜೆರ್ ಮುಂದೆ ಸಹಿ ಹಾಕಬೇಕೆಂದು ಹೇಳಿದರು.ಇವತ್ತು ರಾಯರು ಕೇಳಿದರು,ಇನ್ನು ಬೇರೆ ಯಾವುದಾದರು ಫಾರಂ ಫಿಲ್ ಮಾಡುವುದು ಇದೆಯಾ,ಇನ್ನು ಮತ್ತೆ ನಾಳೆ ಬಂದಾಗ ಇನ್ನೊಂದನ್ನು ಹೇಳಬೇಡಿ.ಈಗಾಗಲೇ ನಾನು ಲೋನ್ ಗೋಸ್ಕರ ಓಡಾಡುವುದು ಒಂದು ವಾರವಾಯಿತು,ಇನ್ನು ಒಂದು ಹಂತ ತಲುಪಿಲ್ಲ ಎಂದು ಸ್ವಲ್ಪ ಖಾರವಾಗಿ ಮಾತಾಡಿದರು.ಬಿಸಿಯಾಗದೆ ಬೆಣ್ಣೆ ಕರಗದು ಎಂಬಂತೆ ರಾಯರು ಮಾತಾಡುವವರೆಗೂ ಮ್ಯಾನೇಜರ್ ಆಟ ಅಡಿಸಿದ್ದರು.ದಿನ ಒಂದೊಂದೇ ಹೇಳುವುದು,ಬೊಡಿಸುವುದು,ಯಾರೇ ಆದರು ಲೋನ್ ಬೇಡ ಎಂಬಂತೆ ಮ್ಯಾನೆಜೆರ್ ವರ್ತಿಸಿದ್ದರು.ಕೊನೆಗೆ ಮತ್ತೂ ೨ ಅರ್ಜಿ ತುಂಬುವುದು ಬಾಕಿ ಇತ್ತು.ಅದನ್ನು ಮುಗಿಸಿ ರಾಯರು ಮನೆಗೆ ಬಂದರು.

ಇವತ್ತು ನಾನು,ನೀವು ಜೊತೆಗೆ ಹೋಗುವುದು ಎಂದು ರಾಯರು ಬ್ರಹ್ಮರಾಯರಲ್ಲಿ ಹೇಳಿದರು.ಅದರೂ ಬ್ರಹ್ಮರಾಯರಿಗೆ ಪಕ್ಕಕ್ಕೆ ಹೊರಟಾಗಲಿಲ್ಲ,ಅಂತೂ ತಂದೆಯನ್ನು ಕರೆದುಕೊಂಡು ರಾಯರು ಬ್ಯಾಂಕಿಗೆ ಬರುವಾಗ ಮಧ್ಯಾನ್ನ ೧ ಗಂಟೆ ಆಗಿತ್ತು.ಬೇಕಾದ ಕಡೆ ಎಲ್ಲ ಸಹಿ ಮಾಡಿಸಿ ಲೋನ್ ಅರ್ಜಿ ಕೊಟ್ಟು ಅಲ್ಲಿಂದ ಹೊರಡುವಾಗ ೨ ೩೦.ಹೀಗೆ ಲೋನ್ ಪಾಸು ಅಗುವಸ್ಟರಲ್ಲಿ ರಾಯರು ಮ್ಯಾನೆಜೆರ್ ಮತ್ತು ಬ್ರಹ್ಮರಾಯರ ನಡುವೆ ಸಿಕ್ಕು "ಅಪ್ಪಚ್ಚಿ" ಆಗಿದ್ದರು.

ಮುಂದುವರೆಯುವುದು...

Tuesday, January 19, 2010

ಹೋರಾಟದ ಹಾದಿ



ಅಮ್ಮ ಹೊರಡು ಗಾಬರಿ ಏನು ಇಲ್ಲ ಅಪ್ಪ ತಲೆಸುತ್ತಿ ಬಿದ್ದಿದ್ದಾರಂತೆ,ದಿನೇಶ ಪೈಗಳು ಅಸ್ಪತ್ರೆಗೆ ಕರಕೊಂಡು ಹೋಗ್ತಿದ್ದಾರೆ,ನಾವು ಹೋಗುವ ಎಂದರು.ಸರಿ ಎಂದು ರಾಯರ ತಾಯಿ ಹೊರಟರು.ಆಸ್ಪತ್ರೆಗೆ ತಲುಪುವಾಗ ಅಲ್ಲಿ ಹೊರಗಡೆ ಪೈಗಳು ಕಾಯುತ್ತಿದ್ದರು.ರಾಯರನ್ನು ಪಕ್ಕಕ್ಕೆ ಕರೆದು,ಚವರ್ಕಾಡು ತಿರುವಲ್ಲಿ ಇರುವ ಹೊಂಡಕ್ಕೆ ಬಿದ್ದಿದ್ದರು,ತಲೆಗೆ ಬಹಳ ಪೆಟ್ಟಾಗಿದೆ,ಬಿದ್ದ ಕೂಡಲೇ "ಮೂರ್ತಿ" ಎಂದು ಕರೆದಿದ್ದರು,ಅಲ್ಲೇ ಪಕ್ಕದಲ್ಲಿಯೇ ಹೋಗುತ್ತಿದ್ದ ರಾಮಣ್ಣನಿಗೆ ಕೇಳಿಸಿ ಜನ ಸೇರಿ ಎತ್ತುವುದರ ಒಳಗೆ ಬಹಳ ರಕ್ತ ಹೋಗಿದೆ,ನಾವು ನೋಡುವಾಗಲೇ ಪ್ರಜ್ಞೆ ತಪ್ಪಿತ್ತು,ನಾವು ಕೂಡಲೇ ಜೀಪಲ್ಲಿ ಕರೆದುಕೊಂಡು ಬಂದೆವು,ದಾರಿಯಲ್ಲಿಯೇ ನಿಮಗೆ ಫೋನ್ ಮಾಡಿ ತಿಳಿಸಿದ್ದ್ದು ಎಂದರು.ಈಗ "ತುರ್ತು ನಿಘಾ ಘಟಕ"ದಲ್ಲಿ ಇದ್ದಾರೆ,ಹೋಗಿ ನೋಡಿ ಎಂದರು.

ರಾಯರು,ತಾಯಿಯು ಹೊರಗಿಂದಲೇ ನೋಡಿದರು,ಒಳಗಡೆ ಬಿಡುತ್ತಿರಲಿಲ್ಲ,ತಲೆಗೆ ಬ್ಯಾಂಡೇಜು ಮಾಡಿದ್ದರು. ಡಾಕ್ಟರನ್ನು ಕಂಡು ಮಾತಾಡಿದಾಗ,ಈಗಲೇ ಏನು ಹೇಳಲು ಸಾಧ್ಯವಿಲ್ಲ,ರಕ್ತ ತುಂಬಾ ಹೋಗಿದೆ,ನೋಡುವ ಎಂದರು.ಬೇಕಾದ ಮೆಡಿಸಿನ್ ಎಲ್ಲ ತಂದು ಕೊಟ್ಟು ,ಅಮ್ಮನಿಗೆ ಅಲ್ಲಿ ಇರಲು ಎಲ್ಲ ವ್ಯವಸ್ತೆ ಮಾಡಿ,ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿ ರಾಯರು ಮತ್ತು ಪೈಗಳು ಹೊರಟು ಬಂದರು.

ಮನೆಗೆ ಬಂದಾಗ ಮಕ್ಕಳು ನಿದ್ದೆ ಮಾಡಿದ್ದರು,ಸಂದ್ಯ ಮಾತ್ರ ಕಾದು ಕುಳಿತಿದ್ದಳು.ಅವಳಿಗೆ ವಿಷಯ ಎಲ್ಲ ತಿಳಿಸಿದರು.ಊಟ ಎಂದಾಗ ರಾಯರು ಇವತ್ತೇನೋ ಮನಸ್ಸೇ ಸರಿಯಿಲ್ಲ,ನೀನು ಮಾಡು ಎಂದರು.ಸರಿ ಇಬ್ಬರು ಊಟ ಮಾಡಲಿಲ್ಲ.ರಾಯರು ಗಣೇಶನಿಗೆ ಫೋನ್ ಮಾಡಿದರು,ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ತೆ ಕಡೆಗೆ ನೀನೆ ಗಮನ ಕೊಡಬೇಕು ನಾಳೆ ನಾನು ಸಿಗುವುದು ಕಷ್ಟ ಆದರೆ ಸಂಜೆ ಬರುತ್ತೇನೆ ಎಂದು ವಿಷಯ ಎಲ್ಲ ತಿಳಿಸಿದರು.ಪ್ರಸನ್ನನಿಗೆ ಫೋನ್ ಮಾಡಿ ಈ ಸಲದ ಪ್ರವಾಸದ ಸಂಪೂರ್ಣ ಜವಾಬ್ದಾರಿ ನಿನಗೆ ಕೊಡುತ್ತಿದೇನೆ ನಾನು ಬರಲು ಆಗುವುದಿಲ್ಲ ಎಂದರು.ಅಮೇಲೆ ಒಂದೆರಡು ಕಾಲ್ ಮಾಡಿ ಮಲಗಿದರು.

ಬೆಳಗ್ಗೆ ೪ ಗಂಟೆಗೆ ಎದ್ದು ಸ್ನಾನ "ಸಂಧ್ಯಾವಂದನೆ", "ನಿತ್ಯ ಪೂಜೆ" ಎಲ್ಲ ಮುಗಿಸಿ,ತಮ್ಮ ಕ್ಲಾಸಿಗೆ ಬೇಕಾದ ತಯಾರಿ ಮಾಡಿದರು.ರಾಯರು ನಿತ್ಯವೂ ಕ್ಲಾಸಿಗೆ ಪೂರ್ಣ ತಯಾರಿ ನಡೆಸಿಯೇ ಹೋಗುತ್ತಿದ್ದರು.ವಿದ್ಯಾರ್ಥಿಗಳಿಗೆ ಯಾವುದೇ ಕೆಲಸ ಹೇಳುವ ಮೊದಲು ತಾವು ಅದನ್ನು ಮಾಡಿ ನೋಡುತ್ತಿದ್ದರು.ಬೇಗ ತಿಂಡಿ ಕಾಫಿ ಮುಗಿಸಿ,೬ ಗಂಟೆಗೆ ಮನೆಯಿಂದ ಹೊರಟರು.ಮಧ್ಯಾನ್ನ ಮೇಲೆ ಮಕ್ಕಳು ಬಂದ ಮೇಲೆ ನಾನು ಆಸ್ಪತ್ರೆಗೆ ಬರ್ತೇನೆ ಎಂದಳು ಸಂಧ್ಯಾ .

ಅಮ್ಮ ಏನಾದರು ಬೆಳವಣಿಗೆ ಆಯ್ತಾ ಎನ್ನಲು,ಏನು ಇಲ್ಲ ರಾತ್ರೆ ಎಲ್ಲ ಒಬ್ಬ ಡಾಕ್ಟರ್ ಮತ್ತು ನರ್ಸ್ ನೋಡ್ತಾ ಇದ್ದರು,ಗಂಟೆ ಗಂಟೆಗೆ ಚೆಕ್ಅಪ್ ಮಾಡ್ತಿದ್ದರು ಎಂದರು.ಸರಿ ನೀನು ಫ್ರೆಶ್ ಆಗಿ ಬಾ, ನಾನು ಇಲ್ಲೇ ಇರ್ತೇನೆ ಎಂದರು ರಾಯರು.ಮನೆಯಿಂದ ತಂದ ತಿಂಡಿ ತಿಂದು, ನಾನು ಹೇಗೂ ಇಲ್ಲಿ ಇರ್ತೇನೆ,ನೀನು ಕಾಲೇಜಿಗೆ ಹೋಗುವುದಾದರೆ ಹೋಗು,ತಲೆಗೆ ಒಳ್ಳೆ ಪೆಟ್ಟಾಗಿದೆ ಅಂತ ಕಾಣಿಸುತ್ತೆ ಪಕ್ಕಕ್ಕೆ ಏನೂ ಗೊತ್ತಾಗುವ ಲಕ್ಷನ ಕಾಣುವುದಿಲ್ಲ ಎಂದರು.ಆ ನಾನು ೮ ೩೦ವರೆಗೂ ಇರ್ತೇನೆ.೯ರಿಂದ ೨ ಗಂಟೆ ಕ್ಲಾಸ್ ಇದೆ ಆಮೇಲೆ ಬರ್ತೇನೆ ಎಂದರು.

ವಾರ್ಡ್ ಡಾಕ್ಟರ್ ಮಾತ್ರ ಇದ್ದರು, ಪಶುಪತಿರಾಯರು ಬರುವಾಗ ೧೦ ಗಂಟೆ ಆಗುತ್ತದೆ ಎಂದರು.ರಾಯರು ೮ ೩೦ಗೆ ಹೊರಟರು.ಕಾಲೇಜಿನ ಪಾಠ ಎಲ್ಲ ಮುಗಿಸಿ,ಆಮೇಲೆ ಅರ್ಧ ಗಂಟೆ ಸ್ಟಾಫು ರೂಮಲ್ಲಿ ಇದ್ದು,ಸೀದಾ ಆಸ್ಪತ್ರೆಗೆ ಬಂದರು. ಡಾಕ್ಟರ್ ಪ್ರಜ್ಞೆ ಬಾರದೆ ಏನೂ ಹೇಳುವಂತಿಲ್ಲ ಒಂದ ೨, ೩ ದಿನ ಆದರು ಆದೀತು ಎಂದರು.ಗಣೇಶ , ಪ್ರಸನ್ನ ಇಬ್ಬರು ಬಂದರು.ವಿಷಯ ತಿಳಿದು ನೆಂಟರಿಸ್ತರು ಒಬ್ಬೊಬ್ಬರಾಗಿ ಬರತೊಡಗಿದರು.ಸಂಜೆ ಸಂಧ್ಯಾ ,ಮಕ್ಕಳು ಬಂದು ನೋಡಿ ಹೋದರು.

"ವಿದ್ಯಾಗಿರಿ"ಯ "ವೇದವಿಜ್ಞಾನ ಸಂಗಮ"ದಲ್ಲಿ ಕಿಕ್ಕಿರಿದು ಜನ ಸೇರಿತ್ತು.ವೇದಿಕೆಯ ಮೇಲೆ ಪಲ್ಲತಡಕ,ಪರಕ್ಕಜೆ,ಮಿತ್ತೂರು ಹೀಗೆ ವೈದಿಕ ವಿದ್ವಾಂಸರ ದಂಡೇ ನೆರೆದಿತ್ತು.೭ ವರ್ಷಗಳ ಕಾಲ ವೇದ,ಸಂಸ್ಕೃತ ,ಜ್ಯೋತಿಷ್ಯ ಅಧ್ಯಯನ ಮುಗಿಸಿ ಮೊದಲ ಬ್ಯಾಚ್ ಇಂದು ಹೊರ ಬರುತ್ತದೆ.ಆ ಪ್ರಯುಕ್ತ ಏರ್ಪಡಿಸಿದ ಸಮಾರಂಭದ ಘನ ಅದ್ಯಕ್ಷತೆಯನ್ನು ಪರಕ್ಕಜೆ ಬಟ್ಟರು ವಹಿಸಿದ್ದರು.ಮಂತ್ರೋಪದೇಶ,,ಪ್ರತಿಜ್ಞಾ ವಿಧಿಯನ್ನು ಮುಖ್ಯ ಗುರುಗಳಾದ ಗಣೇಶ ಪ್ರಸಾದರು ನೆರವೇರಿಸಿದರು.ಮುಖ್ಯವಾಗಿ ಗಮನ ಸೆಳೆದದ್ದು ವಿಧ್ಯಾರ್ಥಿಗಳೆಲ್ಲರ ಪರವಾಗಿ ಮಾತಾಡಿದ ಅನೂಪ್ ಭಟ್.ತನ್ನ ಸರಳ ಸುಂದರ ಮಾತಲ್ಲಿ ಅವನು "೩೦ನೆಯ ವಯಸಲ್ಲಿ ರುದ್ರ ಕಲಿತ ಮೂರ್ತಿರಾಯರು ತಮ್ಮ ಪರಂಪರೆಯ ಮೇಲಿನ ಗೌರವದಿಂದ ಗುರುಕುಲ ವ್ಯವಸ್ತೆಯ ಈ ವೇದ ಶಿಕ್ಷಣಕ್ಕೆ ಕೈ ಹಾಕಿದ್ದು ಎಲ್ಲ ವ್ಯವಸ್ತೆ,ಸೌಲಭ್ಯ ದೊರೆಯುವಂತೆ ಮಾಡಿದ್ದು,ಒಳ್ಳೆ ತಿರುಗಾಟ ,ವಿದೇಶದಲ್ಲೂ ಬೇಡಿಕೆ ಇರುವಾಗ ನಮ್ಮ ಗುರುಗಳಾದ ಗಣೇಶ ಪ್ರಸಾದರು ಅವನ್ನೆಲ್ಲ ಬದಿಗಿರಿಸಿ ಇಲ್ಲೇ ಗುರುಗಳಾಗಿ ನಿಂತದ್ದು,ಇವರೀರ್ವರ ಅಪೂರ್ವ ಸಂಗಮದಿಂದ ವಿದ್ಯಾಗಿರಿ ನಿಜವಾಗಿಯೂ ವಿದ್ಯೆಯ ಕಲೆಯ ಅಗರವಾದದ್ದು."ಇವರು ಹಾಕಿಕೊಟ್ಟ ಈ ಉತ್ತಮ ವೇದಿಕೆಯ ಬೆಳವಣಿಗೆಯಲ್ಲಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಭಾವಾವೇಶದಿಂದ ಮಾತಾಡಿದ ಅನೂಪ್.ಇದನ್ನು ಹುಟ್ಟುಹಾಕಿ,ಮೊದಲ ಬ್ಯಾಚ್ ಹೊರಬರುವಾಗ ರಾಯರಿಗೂ ಗಣೇಶರಿಗೂ ಆದ ಸಂತೋಷ ಅಷ್ತಿಸ್ತಲ್ಲ.ಏನೋ ಒಂದು ಸಾಧಿಸಿದ ಸಮಾಧಾನ ಮನದಲ್ಲಿತ್ತು,ಅದೇ ಮುಖದ ಮೇಲೆ ಪ್ರಕಟವಾಗಿತ್ತು.

"ವಿದ್ಯಾಗಿರಿ"ಯಿಂದ ಹೋರಾಟ ೧೦ನೆ ಪ್ರವಾಸವದು ಮತ್ತು ರಾಯರ ಅನುಪಸ್ತಿತಿಯಲ್ಲಿ ಮೊದಲನೆಯದು.ಈ ಹಿಂದೆ ನಡೆದ ಎಲ್ಲ ಪ್ರವಾಸಗಳಲ್ಲೂ ರಾಯರೇ ಮುಂದೆ ನಿಂತು ಎಲ್ಲ ವ್ಯವಸ್ತೆ ಮಾಡಿದ್ದರು.ರಾಯರಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಾಯ ಮಾಡುತ್ತಿದ್ದ "ಪ್ರಸನ್ನ"ರೇ ಈ ಸಲದ ಪ್ರವಾಸದ ಸಂಪೂರ್ಣ ಉಸ್ತುವಾರಿ ಹೊತ್ತರು.ಇಡೀ ಉತ್ತರ ಭಾರತ ಪ್ರವಾಸವದು,ಮತ್ತು ಈವರೆಗೂ ಹಮ್ಮಿಕೊಂಡ ಪ್ರವಾಸಗಳಲ್ಲೇ ಅತ್ಯಂತ ದೊಡ್ಡ ಪ್ರವಾಸವದು.

ಹೀಗೆ ಬೇರೆ ಬೇರೆ ಕಾರ್ಯಗಳನ್ನು ಸರಿಯಾಗಿ ವಿಭಾಗಿಸಿ,ಅದಕ್ಕೆ ಬೇಕಾದ ಎಲ್ಲ ವ್ಯವಸ್ತೆಗಳನ್ನೂ ಒದಗಿಸಿ,ಮತ್ತೆ ಕಾಲೇಜಿನ ಪಾಠವನ್ನು ಮುಗಿಸಿ ಆಸ್ಪತ್ರೆ ಅಲ್ಲಿಂದ ಮನೆ ಹೀಗೆ ೧೦ ದಿನಗಳೇ ಕಳೆದವು."ಬ್ರಹ್ಮರಾಯರ" ಆರೋಗ್ಯದಲ್ಲಿ ಏನೂ ಪ್ರಗತಿ ಕಾಣಿಸಲಿಲ್ಲ.

ಮುಂದೆ ಕೆಲವೇ ದಿನಗಳಲಿ ನಡೆಯಬೇಕಾಗಿದ್ದ ಕೃಷಿ ಸಮ್ಮೇಳನದ ಬಗ್ಗೆ "ಅಚ್ಯುತ ಭಟ್ಟ್"ರಲ್ಲಿ ಮಾತಾಡಿ, ಅದಕ್ಕೆ ಬೇಕಾದ ವ್ಯವಸ್ತೆಗೆ ಜನರನ್ನು ನೇಮಿಸಿ,ಸ್ವಯಂಸೇವಕರಿಗೆ ಕೆಲಸ ಹಂಚಿ,ರಾಯರು ಸಂಜೆ ಮತ್ತೊಮ್ಮೆ ಆಸ್ಪತ್ರೆಗೆ ಹೋಗಿ ಬಂದರು.ದಿನವಿಡೀ ಓಡಾಡಿ ಬಂದ ರಾಯರಿಗೆ ಸ್ನಾನ ಊಟ ಮುಗಿಸುವಾಗ ಸಾಕಸ್ಟು ಸುಸ್ತು ಆಗಿತ್ತು.ಅಲ್ಲಿಯೇ ನಿದ್ದೆಗೆ ಜಾರಿದರು.ಮನಸ್ಸು ಬೇಡ ಬೇಡ ಎಂದರೂ ತಮ್ಮ ಹಳೆಯ ಜೀವನ ಮೆಲುಕು ಹಾಕುತ್ತಿತ್ತು.

*******

ಅಂದು ಮಧ್ಯಾನ್ನ ಬಂದ ಬ್ರಹ್ಮರಾಯರು ಮತ್ತೆ "ಬಿ ಎಡ್" ಬಗ್ಗೆ ಹೇಳಲು ಶುರು ಮಾಡಿದರು.ಆದರೆ ಈ ಸಲ ಎಚ್ಚರ ತಪ್ಪಿದರೆ ಇದು ನನ್ನ ಭವಿಷ್ಯದ ಪ್ರಶ್ನೆ ,ನನ್ನ ಕನಸು ಶಾಶ್ವತವಾಗಿ ಕನಸಾಗಿಯೇ ಉಳಿಯಬೇಕಾದೀತು ಎಂದು ರಾಯರು ಬಹಳ ಜಾಗ್ರತರಾಗಿದ್ದರು.ರಾಯರು ಮನಸ್ಸನ್ನು ಗಟ್ಟಿ ಮಾಡಿ ಕುಳಿತಿದ್ದರು,ಏನೇ ಆಗಲಿ ನಾ "ಎಂ ಎಸ್ ಸಿ" ಮಾಡುವುದೆಂದು ನಿರ್ಧರಿಸಿದ್ದರು.ಹೀಗಾಗಿ ಈ ಸಲ ಬ್ರಹ್ಮರಾಯರ ಆಟ ನಡೆಯಲಿಲ್ಲ,ಅದರೂ ಬ್ರಹ್ಮರಾಯರು ಶತಪ್ರಯತ್ನ ಮಾಡಿದರು.ಕೊನೆಗೂ ಬ್ರಹ್ಮರಾಯರು ಸೋತರು,ಅದರೂ ಮನದಲ್ಲಿ ಹೊಸತೊಂದು ಲೆಕ್ಕಾಚಾರ ಹಾಕಿ "ಎಂ ಎಸ್ ಸಿ"ಗೆ ಒಪ್ಪಿದರು.ಆದರೆ ಇವೆಲ್ಲ ನಡೆಯುವಷ್ಟರಲ್ಲಿ ಎದ್ಮಿಷನ್ ಟೈಮ್ ಕಳೆದಿತ್ತು.ಹೀಗಾಗಿ ಬ್ರಹ್ಮರಾಯರು ಡೊನೇಶನ್ ಕೊಡಬೇಕಾಗಿ ಬಂತು.

ರಾಯರು ಕೊಣಾಜೆಯಲ್ಲಿ "ಎಂ ಎಸ್ ಸಿ"ಗೆ ಸೇರಿದರು.ಇತ್ತ ವಿಜಯ್ ಮನೆ ಸೇರಿದ.ಕಾರ್ತಿಕ್ ಮೈಸೂರ್ ವಿಶ್ವವಿದ್ಯಾಲಯದಲ್ಲಿ "ಎಂ ಎಸ್ ಸಿ " ಸೇರಿದ. ಪ್ರಸಾದ್ ಬೆಂಗಳೂರ್ ಗೆ ಹೋದ,ಅಲ್ಲೇ "ಎಂ ಎಸ್ ಸಿ "ಗೆ ಸೇರಿದ.ಹೀಗೆ ಬಾಳ ದಾರಿಯಲ್ಲಿ ಗೆಳೆಯರು ಬಿನ್ನ ಬಿನ್ನ ದಿಕ್ಕಲ್ಲಿ ಸಾಗಿದರು.

ರಾಯರು ಒಂದು ರೂಂ ಮಾಡಿ,ತಾವೇ ಸ್ವತಹ: ಅಡುಗೆ ಮಾಡುತ್ತಿದ್ದರು.ಒಂದೊಂದೇ ಹೊಸ ಹೊಸ ಪಾಕ ಮಾಡಿ ಎಂ ಎಸ್ ಸಿ ಮುಗಿಯುವಸ್ಟರಲ್ಲಿ ಪಾಕಶಾಸ್ತ್ರ ಪ್ರವೀಣರು ಆಗಿದ್ದರು.ದಿನ ಸಂಜೆ ೫, ೫ ೩೦ ಸುಮಾರಿಗೆ ರಾಯರು ಲ್ಯಾಬ್ಗೆ ಹೋಗುತ್ತಿದ್ದರು.ರಾಯರು ಹೋಗುವಾಗ "ಬಿಸ್ಕತ್ತು,ರಸ್ಕು " ಮುಂತಾದ ತಿಂಡಿ ತೆಗೆದುಕೊಂಡು ಹೋಗುತ್ತಿದ್ದರು.ರಾಯರ ಕೆಲವು ಮಿತ್ರರು ತಿಂಡಿಗಾಗಿಯೇ ಸಂಜೆ ಲ್ಯಾಬ್ಗೆ ಬರುತ್ತಿದ್ದರು ಎಂದರೂ ತಪ್ಪಾಗಲಾರದು ಅನ್ನಿಸುತ್ತೆ.ರಾಯರು ಯಾರು ಬಂದರೂ, ತಾವು ತಿನ್ನುವುದನ್ನು ,ಆಗ ಜೊತೆಯಲ್ಲಿದ್ದವರಿಗೆ ಕೊಡುವುದನ್ನ ಬಿಡಲಿಲ್ಲ.

ಎಷ್ಟೋ ವರುಷದ ಹಿಂದೆ ಬೇರೆಯಾಗಿದ್ದ ಗೆಳೆಯ ರಾಯರಿಗೆ ಇಲ್ಲಿ ಮತ್ತೆ ಸಿಕ್ಕಿದ.ಹಿಂದೆ ರಾಯರ ಜೊತೆಯಲ್ಲಿಯೇ ೫ ನೆ ವರೆಗೂ ಓದಿದ್ದ.ಆಮೇಲೆ "ನವೋದಯ","ಉಜಿರೆ"ಯಲ್ಲಿ ಶಿಕ್ಷಣ ಪಡೆದು ಮತ್ತೆ "ಎಂ ಎಸ್ ಸಿ"ಗೆ ಕೊಣಾಜೆಗೆ ಬಂದಿದ್ದ.ಅವನೇ "ಪ್ರಸನ್ನ" .ರಾಯರಂತೆಯೇ ಹಾವ ಭಾವ.ಟೂರಿಸಂ ಸಾಹಿತ್ಯ ಆಸಕ್ತಿಯ ಕ್ಷೇತ್ರ.ಇವರೀರ್ವರು ಸೇರಿ ಕಾಲೇಜು ಜೀವನವನ್ನು "ಹ್ಯಾಪಿ ಡೇಸ್"ಆಗಿ ಮಾಡಿದರು.ಯಾವುದೇ ಟೂರ್ ಇದ್ದರೂ ಇವರೇ ಮುಂದೆ ನಿಂತು ಎಲ್ಲ ವ್ಯವಸ್ತೆ ಮಾಡುತ್ತಿದ್ದರು.ಕಾಲೇಜಲ್ಲಿ ಎಲ್ಲರು ಇವರನ್ನು "ಪ್ರಸನ್ನ ಮೂರ್ತಿ"ಎನ್ನುತ್ತಿದ್ದರು.

ರಾಯರು ತಮ್ಮ ಮಾತುಗಳನ್ನು "ಬ್ಲಾಗಿಸಲು" ಶುರು ಮಾಡಿದರು.ರಾಯರ "ಸುಂದರ ಜೀವನ "ಕಲ್ಪನೆ ಪ್ರಾರಂಭವಾದದ್ದೇ ಇಲ್ಲಿಂದ.ಹೀಗೆ ರಾಯರು ಇಂಟರ್ನೆಟ್ ಲ್ಲಿ ಬ್ಲಾಗ್ ಶುರು ಮಾಡಿದರು. ತಮ್ಮ ಕಥೆ ,ಕವನ,ಪ್ರವಾಸ ಕಥನ ಎಲ್ಲವನ್ನು ಬ್ಲಾಗ್ ಲ್ಲಿ ಪ್ರಕಟಿಸಿದರು.

ಕಾಲೇಜಿನ ಕೊನೆಯ ೬ ತಿಂಗಳು ಪ್ರಾಜೆಕ್ಟ್ ನ್ನು ರಾಯರು ಬೆಂಗಳೂರಲ್ಲಿ ಮಾಡಿದರು.ಇತ್ತ ಮೈಸೂರಲ್ಲಿದ್ದ ಕಾರ್ತಿಕ್ ನಿಗೆ ಕೆಲಸವಾಯಿತು.ಪ್ರಸಾದ್ ಕಲಿಯುವಿಕೆ ಮುಗಿಸಿ ತಂದೆಯ ಬಿಸಿನೆಸ್ಸ್ ಲ್ಲಿ ಸಹಾಯ ಮಾಡುತ್ತ ಬೆಂಗಳೂರಲ್ಲಿ ಇದ್ದ.ಅದರೆ ರಾಯರಿಗೆ ಮತ್ತೆ ಅದೃಷ್ಟ ಕೈಕೊಟ್ಟಿತು.

ಮುಂದುವರೆಯುವುದು...