Tuesday, March 16, 2010

ಅರಿಕೆ

"ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು"

ಸುಮಾರು ೧೧ ಕಂತುಗಳಲ್ಲಿ ಪ್ರಕಟವಾದ "ಹೋರಾಟದ ಹಾದಿ" ಯನ್ನು ಮಧ್ಯೆ ೨ ಸಲ ಅನಿವಾರ್ಯ ಕಾರಣಗಳಿಂದ ಮುಂದೂಡಬೇಕಾಗಿ ಬಂತು.ಹಾಗೆಯೇ ಅಲ್ಲಲ್ಲಿ ಕೆಲವು ಕನ್ನಡ ಶಬ್ದಗಳು ತಪ್ಪಾಗಿ ಪ್ರಿಂಟ್ ಆಗಿದೆ,ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಲು ಪ್ರಯತ್ನಿಸಿದ್ದೇನೆ.ಅದಕ್ಕಾಗಿ ನಮ್ಮೆಲ್ಲ ಮಿತ್ರರಲ್ಲಿ ಕ್ಷಮೆ ಕೋರುತ್ತೇನೆ."ಹೋರಾಟದ ಹಾದಿ" ಒಟ್ಟಾಗಿ ನಿಮಗೆ ಹೇಗೆ ಅನ್ನಿಸಿತು ಎಂಬುದನ್ನು ದಯಮಾಡಿ ಇಲ್ಲಿ ತಿಳಿಸಿ.ತಪ್ಪು -ಒಪ್ಪು ಗಳೆರಡು ನನಗೆ ಸಮಾನ.ನೀವು ಸೂಚಿಸಿದ ಸಲಹೆಗಳನ್ನು ಮುಂದೆ ಅಳವಡಿಸಲು ಪ್ರಯತ್ನಿಸುತ್ತೇನೆ.
ನಮಸ್ಕಾರ
ನಿಮ್ಮವ
ರವಿ

Sunday, March 14, 2010

ಹೋರಾಟದ ಹಾದಿ

೧೧
ರಾಯರು ನೇರವಾಗಿ ಆಸ್ಪತ್ರೆಗೆ ಬಂದರು.ಬ್ರಹ್ಮರಾಯರಿಗೆ ಮಧ್ಯ ರಾತ್ರಿಯೇ ಪ್ರಜ್ಞೆ ಬಂದಿತ್ತು,ನರ್ಸ್ ಡಾಕ್ಟರ್ ಗೆ ಹೇಳಿ ಡಾಕ್ಟರ್ ಒಮ್ಮೆ ಬಂದು ನೋಡಿ ಹೋಗಿದ್ದಾರೆ.ಇವತ್ತು ಮತ್ತೆ ೧೦ ಘಂಟೆಗೆ ಬರ್ತಾರಂತೆ ಎಂದರು ರಾಯರ ತಾಯಿ.ರಾಯರು ಅಲ್ಲಿಯೇ ಕುಳಿತರು.ಕಿಶೋರ್ ಇವತ್ತು ಊರಿಗೆ ಬರ್ತಾನೆ ಒಂದು ವಾರದ ಹಿಂದೆ ಹೇಳಿದ್ದ,ಒಂದ ನೇರ ಆಸ್ಪತ್ರೆಗೆ ಬಂದರೂ ಬಂದಾನು ಅವನನ್ನು ನಂಬ್ಲಿಕೆ ಸಾಧ್ಯವಿಲ್ಲ ಎಂದರು.ಎಂತ ಈಗ ಊರಿಗೆ?ಎಂದರು ರಾಯರ ತಾಯಿ,ಇಲ್ಲ ಅವನು ಕೆಲಸ ಬಿಟ್ಟ,ಬಹುಶ: ಇನ್ನು ಇಲ್ಲೇ ಇರ್ತಾನೆ ನನ್ನ ತರ ಅನ್ಸುತ್ತೆ ಎಂದರು.

ಸ್ವಲ್ಪ ಹೊತ್ತಿನಲ್ಲೇ ಕಿಶೋರ್,ಗಣೇಶ ಪ್ರಸಾದರು ಇಬ್ಬರು ಬಂದರು.ಅಜ್ಜಿ ಲಾಸ್ಟ್ ಮದುವೆಯಲ್ಲಿ ನೋಡಿದ ಮೇಲೆ ನಾವು ಕಂಡೆ ಇಲ್ಲ,ಇನ್ನು ಯಾವತ್ತು ಇಲ್ಲೇ,ಹೀಗೆ ಮಾತಾಡ್ತಾ ಇರುವುದು,ಅವರು ಅಜ್ಜಿ ,ಮೊಮ್ಮಗ ಮಾತಾಡಲು ಶುರು ಮಾಡಿದರು.ಮತ್ತೆ ಚಿಕ್ಕಪ್ಪ ಹೇಗೆ ನಡೀತಾ ಇದೆ ಕೆಲಸ ಕಾರ್ಯಗಳು,ಬೆಳಗ್ಗೆ ಸೀದಾ ಬರುವ ಅಂತಿದ್ದೆ,ಆಮೇಲೆ ಈ ಲಗೇಜು,ಅವ ಮಗ ಬೇರೆ ಹಠ ಮಾಡ್ಲಿಕೆ ಶುರು ಮಾಡಿದ ಹಾಗೆ ಅವರನ್ನು ಮನೆಗೆ ಬಿಟ್ಟು ಬಂದೆ ಎಂದರು.ಮತ್ತೆ ಅಜ್ಜ ಹೇಗಿದ್ದಾರೆ ಎಂದು ನೋಡಿದ,ಗುರುತು ಸಿಗ್ತಾ ಇದೆ,ಈಗೇನೂ ತೊಂದರೆ ಇಲ್ಲ,ನಿನ್ನೆ ವರೆಗೂ ನಮಗೆ ಸ್ವಲ್ಪ ಮನಸ್ಸಿಗೆ ಹೆದರಿಕೆ ಇತ್ತು ಎಂದರು ರಾಯರು.

ಹಾಗೆಯೆ ಅದು ಇದು ಮಾತಾಡ್ತಾ ಮುಂದಿನ ಕೆಲಸ ಮಾಡಬೇಕಾದ ಕಾರ್ಯಗಳು ಇದರ ಬಗ್ಗೆ ಅಣ್ಣ,ತಮ್ಮ,ಚಿಕ್ಕಪ್ಪ ಮಾತಾಡ್ತಾ ಕಾಲ ಕಳೆದರು.ಡಾಕ್ಟರ್ ಬಂದು ನೋಡಿ ಹೋದರು.ಇನ್ನೇನೂ ಹೆದರಿಕೆ ಇಲ್ಲ,ತಲೆಗೆ ಪೆಟ್ಟಾದ ಕಾರಣ ಮತ್ತು ಸಿಕ್ಕ ಪಟ್ಟೆ ರಕ್ತ ಹೋದ ಕಾರಣ ಪ್ರಜ್ಞೆ ಬರುವುದು ಸ್ವಲ್ಪ ನಿಧಾನವಾಯಿತು,ಇನ್ನೊಂದು ವಾರ ಇಲ್ಲಿದ್ದು ಆಮೇಲೆ ಮನೆಗೆ ಕರೆದುಕೊಂಡು ಹೋಗಬಹುದು ಎಂದರು.೨ ದಿನ ಕಳೆಯಿತು,ಕಿಶೋರ್ ಒಮ್ಮೆ ಎಲ್ಲರನ್ನು ಭೇಟಿ ಮಾಡಿ ಬಂದ.

ಬ್ರಹ್ಮರಾಯರ ಅರೋಗ್ಯ ದಿನೇ ದಿನೇ ಸುಧಾರಿಸತೊಡಗಿತು.ಮುಂದೆ ೪ ದಿನ ಕಳೆದು ರಾಯರು,ಕಿಶೋರ್ ಡಿಸ್ ಚಾರ್ಜ್ ಮಾಡಿ ಕರಕೊಂಡು ಹೋಗಲು ಬಂದಿದ್ದರು.ಬ್ರಹ್ಮರಾಯರು ಕೈ ಸನ್ನೆ ಮಾಡಿ ರಾಯರನ್ನು ಬಳಿ ಕರೆದರು.ಅದೇ ಸಮಯಕ್ಕೆ ಪುತ್ತೂರಿಗೆ ಯಾವುದೊ ಕೆಲಸದ ಮೇಲೆ ಬಂದಿದ್ದ ಶ್ಯಾಮನ್ನನು ಅಲ್ಲಿಗೆ ಬಂದರು.

ಬ್ರಹ್ಮರಾಯರು, "ನೀನು ಮೊದಲ ಸಲ ೫ನೆಯ ತರಗತಿಯಲ್ಲಿರುವಾಗ ಅಮ್ಮ ನಿನ್ನ ಬಹುಮಾನವನ್ನು ಬಿಸಾಡಿದಾಗ ನೀನು ತೋರಿದ ಸಮಯ ಪ್ರಜ್ಞೆ,ಅಲ್ಲಿಂದ ಮುಂದೆ ನಿನ್ನಲ್ಲಾದ ಬದಲಾವಣೆಗಳು ಎಲ್ಲವನ್ನು ದೂರದಲ್ಲೇ ನಿಂತು ನಾನು ಗಮನಿಸುತ್ತಿದ್ದೆ.ನೀನು ಎಲ್ಲರಂತಲ್ಲ ನಿನ್ನಲ್ಲಿ ಅಸಾಧಾರಣ ಶಕ್ತಿ,ಏನೇ ಕೆಲಸ ಕೊಟ್ಟರು ಅದನ್ನು ಮಾಡುವ,ಮಾಡಬೇಕೆಂಬ ಛಲವನ್ನು ಕಂಡೆ.ನಿನ್ನ ಈ ಶಕ್ತಿ ವ್ಯರ್ಥವಾಗಬಾರದು,ಅದನ್ನು ಸಮಾಜದ ೪ ಜನರ ಉಪಯೋಗಕ್ಕೆ ಬಳಸುವಂತಾಗಬೇಕೆಂದು ನಾನು ಅಂದೇ ನಿರ್ಧರಿಸಿದೆ,ನಿನಗೆ ಹೊಸ ಹೊಸ ಪುಸ್ತಕ ಓದುವ ಹುಚ್ಚು ಆಗಲೇ ಜೋರಿತ್ತು,ಅದಕ್ಕೆ ನೀನು ಕೇಳಿದ ಹಾಗೆ ಅದನ್ನು ಕೊಡಿಸಿದೆ,ಹಣದ ಹೊಂದಾಣಿಕೆಯಲ್ಲಿ ಒಂದೋ ಎರಡು ದಿನ ಹಿಂದೆ ಮುಂದೆ ಆಗಿರಬಹುದು ಅಷ್ಟೇ."ಎಸ್ ಎಸ್ ಎಲ್ ಸಿ"ಯಲ್ಲಿ "ಎಸ್ ಪಿ ಎಲ್" ಆಗಿ,ಊರವರನ್ನು,ಮ್ಯಾನೇಜ್ಮೆಂಟ್ ಅನ್ನು ವಿಸ್ವಾಸಕ್ಕೆ ತೆಗೆದುಕೊಂಡು ,ಯಶಸ್ವಿಯಾಗಿ ರಾತ್ರಿ ವಾರ್ಷಿಕೋತ್ಸವ ನಡೆಸಿಕೊಟ್ಟಾಗ ನನ್ನ ಇಚ್ಚೆ ಮತ್ತಷ್ಟು ಬಲವಾಯಿತು.ನೀನು ನಾಯಕನಾಗಿ ನಮ್ಮ ಕುಟುಂಬ,ಬಂಧುಗಳು ,ಊರನ್ನು ಚೆನ್ನಾಗಿ ಮುನ್ನಡೆಸಬಹುದು,ಒಂದು ಪ್ರೇಮದ ವಾತಾವರಣ ನಿರ್ಮಿಸಬಹುದು,ಆದರೆ ನೀನು ಪಕ್ವವಾಗಿದ್ದು ಮಾತ್ರ ಸಾಲದು,ಅಲ್ಲಿಯವರೆಗೆ ನಿನಗೆ ದೊಡ್ಡ ಸಮಸ್ಯೆಗಳು ಎದುರಾಗಲಿಲ್ಲ,ಹಾಗಾಗಿ ನಾನು ಹೆದರಿದ್ದು,ಎಲ್ಲಿ ನೀನು ಇಂಜಿನಿಯರ್ ಆಗಿ ಎಲ್ಲರಂತೆ ದುಡ್ಡು ಸಂಪಾದಿಸಿ,ತಾನು,ತನ್ನ ಮನೆ,ಎಂದು ನಿನ್ನ ಕಾರ್ಯಕ್ಷೇತ್ರ ಕುಂಠಿತವಾಗುತ್ತದೋ ಎಂದು.ಅದಕ್ಕೆ ನೀನು ಇಂಜನೀಯರಿಂಗ್ ಗೆ ಹೋಗುವದನ್ನು ವಿರೋಧಿಸಿದೆ,ಅದರಲ್ಲಿ ನಾನು ಗೆದ್ದೇ,ಆದರೆ ವಾಸ್ತವವಾಗಿ ನಾನು ಸೋತೆ,ನೀನು ನನ್ನ ನಿರೀಕ್ಷೆಗೂ ಮೀರಿ ಕಷ್ಟಪಡಬೇಕಾಯಿತು,ಆದರೆ ನೀನು ಅದನ್ನೆಲ್ಲ ಎದುರಿಸಿ ಗೆದ್ದೆ.ಜೊತೆಗೆ ನೀನು ಪಟ್ಟ ಕಷ್ಟ,ಇನ್ನೊಬ್ಬರು ಪಡಬಾರದು ಎಂದು ನೀನು ಶ್ರಮಿಸಿದೆ,ನಿನ್ನ ಅಣ್ಣನ್ದಿರಿಗೆಲ್ಲ ಮುಂದೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನೆರವಾದೆ.ಸಾಮಾನ್ಯವಾಗಿ ನಾನು ನೋಡಿದ ಎಷ್ಟೋ ಒಳ್ಳೆಯ ಮಕ್ಕಳು ಡಾಕ್ಟರ್,ಎಂಜಿನಿಯರ್ ಆಗಿ ದೂರ ಹೊರಟು ಹೋಗಿ,ಸಂಪಾದಿಸಿ ಕೊನೆಗೆ ತಂದೆ,ತಾಯಿಯನ್ನು ಅಲ್ಲಿಗೆ ಕರೆದುಕೊಂಡು ಬಿಡುತ್ತಾರೆ.ಊರಲ್ಲಿ ಇದ್ದ ಅಸ್ತಿ,ಪಾಸ್ತಿ ಮಾರಾಟ ಮಾಡಿ ಬಿಡುತ್ತಾರೆ,ನೆಂಟರು ಬಂಧುಗಳ ಮನೆಗೆ ಹೋಗಲು ಪುರುಸೊತ್ತು ಇರುವುದಿಲ್ಲ,"ದೂರ" ಎಂಬ ಹೆಳೆ ಬೇರೆ.ಹಾಗಾಗಿ ನಿಧಾನವಾಗಿ ಸಂಭಂದಗಳು ಕಡಿಮೆ ಆಗುತ್ತವೆ,ಪರಸ್ಪರ ಕಷ್ಟ ಸುಖಕ್ಕೆ ಸ್ಪಂದಿಸುವ ಮಾತೆ ಇಲ್ಲದಂತಾಗುತ್ತದೆ,ಮತ್ತೆ ಬಂಧುಗಳು ಎಂದು ಹೇಳಿಕೊಂಡು ಏನು ಪ್ರಯೋಜನ? ಆ ನಿಟ್ಟಿನಲ್ಲಿ ನಾನು ಯೋಚಿಸಿದೆ .ಆಮೇಲೆ ನೀನು ದೇವರು,ಪೂಜೆ ಇತ್ಯಾದಿಗಳಿಂದ ಸಮದೂರದಲ್ಲಿ ಇದ್ದೆ.ಹಾಗಾಗಿ ನಾನು ನಮ್ಮ ಸಂಪ್ರದಾಯ,ಆಚರಣೆಗಳು ಎಲ್ಲ ಉಳಿಸಿಕೊಂಡು ಹೋಗಿ ಮನೆ ಬೆಳಗುವಂಥ ಸೊಸೆ ತರಬೇಕೆಂದು ತೀರ್ಮಾನಿಸಿದೆ.ಹಾಗಾಗಿ ನಿನಗೆ ಹುಡುಗಿ ಹುದುಕುವಾಗಲು ನಾನು ಬಹಳ ಆಲೋಚನೆ ಮಾಡಿದೆ,ಎಲ್ಲ ದೇವರ ಕೃಪೆ,ಸ್ವಲ್ಪ ತಡವಾಯಿತು ಆದರು ಅದ್ದದ್ದು ಎಲ್ಲ ಒಳ್ಳೆಯದಾಯಿತು.ಆಮೇಲೆ ನೀನು ಕೃಷಿ ಕೆಲಸದ ಕುರಿತು ಹೇಳುವಾಗಲೆಲ್ಲ ನಿನ್ನನ್ನು ವಿರೋಧಿಸುತ್ತ ಬಂದೆ,ಯಾಕೆಂದರೆ ನೀನು ಸ್ವತಹ: ಬಂದು ಮಾಡಿ ನೋಡಬೇಕು ಎಂಬುದು ನನ್ನ ಅಸೆಯಾಗಿತ್ತು,ಆಗ ನಿನಗೆ ನಮ್ಮ ಕೃಷಿಕರ ಕಷ್ಟ ಗೊತ್ತಾಗುತ್ತೆ,ನೀನು ಮಾಡಿ ನೋಡದ ಹೊರತು ನಾವು ಎಷ್ಟೇ ಹೇಳಿದರು ಪ್ರಯೋಜನವಿಲ್ಲ,ಆಗ ನೀನು ಎಲ್ಲರಿಗು ಉಪಯೋಗವಾಗುವ ಹಾಗೆ ಏನಾದರೊಂದು ಹೊಸ ಪರಿಹಾರ ಕಂಡುಹಿಡಿಯಬಹುದು ಎಂಬ ಆಸೆಯಿಂದ ಹೀಗೆ ಮಾಡಿದೆ.ಆದರೆ ಯಾರೊಬ್ಬರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ,ಎಲ್ಲರು ಮಗನ ಅಭಿವೃದ್ದಿಗೆ ತಂದೆ ಕಲ್ಲು ಹಾಕುತ್ತಿದ್ದಾರೆ ಅಂದರು,ಆಡಿಕೊಂಡರು.ಎಲ್ಲರು ನನ್ನ ಬಗ್ಗೆ ಮಾತಾಡಿದರು, ಆದರೆ ಯಾರೊಬ್ಬರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ"ಬ್ರಹ್ಮರಾಯರು ಕಣ್ಣೀರು ಒರೆಸಿಕೊಂಡರು.

" ಅಭಿವೃದ್ದಿಯ ಕುರಿತು ಮಾತಾಡುವಾಗ ಅರ್ಥಿಕ ಬಲವು ಬೇಕು ಎಂಬುದನ್ನು ನಾನು ಮರೆತಿದ್ದೆ ಮತ್ತು ಎಲ್ಲ ರೀತಿಯಿಂದಲೂ ನಾನು ಬರಿ ನನ್ನ ದೃಷ್ಟಿಕೋನದಿಂದಲೇ ನೋಡಿದೆ,ನಿನ್ನ ಮನಸ್ಸಲ್ಲೇನಿದೆ ಎಂಬುದನ್ನು ನೋಡುವ ಪ್ರಯತ್ನ ಮಾಡಲಿಲ್ಲ.ಆದರೆ ನೀನು ಮಾತ್ರ ಪ್ರತಿ ಹಂತದಲ್ಲಿಯೂ ನನ್ನನ್ನು ಎಲ್ಲ ವಿಧದಲ್ಲಿಯೂ ಗೆದ್ದೆ,ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಗುಣದಿಂದ ಎಲ್ಲರ ಮನವ ಗೆದ್ದೆ.ಹೀಗೆ ಎಲ್ಲರು ನಿನ್ನಂತೆಯೇ ಕಲಿತು,ಕೆಲಸ ಮಾಡಿ,ಸಂಪಾದಿಸಿ ಜೀವನವನ್ನು ಆನಂದಿಸಿ,ತನ್ನ ಊರಿಗೆ ಬಂದು,ಮನೆಯವರ,ಬಂಧುಗಳ,ನೆಂಟರಿಷ್ಟರ,ಊರವರ ಸಹಾಯ ಮಾಡಿದರೆ,ಬಂಧವು ಉಳಿಯುತ್ತದೆ ಎಲ್ಲೆಡೆ ಒಂದು ಪ್ರೇಮದ ವಾತಾವರಣ ನಿರ್ಮಾಣವಾಗುತ್ತದೆ .ನಾನು ಕನಸಲ್ಲೂ ಯೋಚನೆ ಮಾಡದಷ್ಟನ್ನು ನೀನು ಮಾಡಿ ತೋರಿಸಿದೆ,ನೀನೊಬ್ಬನೇ ಅಲ್ಲ ಒಂದು ಒಳ್ಳೆಯ ತಂಡವನ್ನೇ ರೂಪಿಸಿದೆ,ಇಂದು ನಾವು ಎಲ್ಲ ಮನೆಯವರು,ಬಂಧುಗಳು ಎಲ್ಲರು ಹಿಂದೆಂದೂ ಇರದಷ್ಟು ಅನ್ಯೋನ್ಯವಾಗಿ ಇದ್ದೇವೆ.ಯುವ ಪೀಳಿಗೆಯ ಮಕ್ಕಳಂತೂ ಒಬ್ಬರನ್ನ್ನು ಬಿಟ್ಟು ಇನ್ನೊಬ್ಬರಿಲ್ಲ ಎಂಬುದನ್ನು ನೋಡಿದಾಗ ಮನಸ್ಸಿಗೆ ಆನಂದವಾಗುತ್ತದೆ .ನೀನು ಆರಂಭ ಮಾಡಿದ್ದು,ಒಳ್ಳೆಯ ಅಡಿಪಾಯ ಹಾಕಿ ಕೊಟ್ಟಿದ್ದೀಯ,ಪಂಚಾಂಗ ಗಟ್ಟಿಯಾಗಿದೆ,ಮುಂದೆ ಮಕ್ಕಳು ಇದನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ .ಒಬ್ಬ ತಂದೆಯಾಗಿ ನನಗೆ ಇನ್ನೇನು ಬೇಕು ?ನೀನು ನನ್ನ ಮಗ ಅಂತ ಹೇಳಲು ಹೆಮ್ಮೆ ಆಗ್ತಾ ಇದೆ."

ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು.ರಾಯರು,ಬ್ರಹ್ಮರಾಯರನ್ನು ತಬ್ಬಿಕೊಂಡರು.ಇಬ್ಬರು ಜೋರಾಗಿ ಅತ್ತರು.ಬ್ರಹ್ಮರಾಯರ ಮನಸ್ಸು ನಿರಾಳವಾಗಿತ್ತು.ಸುಮಾರು ೨೫ ವರ್ಷಗಳಿಗೂ ಮೀರಿ ಯಾರಿಗೂ ಹೇಳದೆ ತನ್ನೊಳಗೆ ಇಟ್ಟು,ತಾನೊಬ್ಬನೇ ಎಲ್ಲ ಸಂಕಟವನ್ನು ಅನುಭವಿಸಿದ್ದರು.ಇಂದು ಎಲ್ಲ ಬಿಡಿಸಿ ಹೇಳಿದ್ದರು,ಮನಸ್ಸು ಹಗುರವಾಯಿತು.ರಾಯರಿಗೂ ಅಪ್ಪ ಯಾಕೆ ಹೀಗೆ ಮಾಡ್ತಾ ಇದ್ದಾರೆ ಎಂದು ಮನದಲ್ಲೇ ಅನಿಸುತ್ತಿತ್ತು,ಇಂದು ಎಲ್ಲ ಬಗೆಹರಿಯಿತು.ಆ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿ ರಾಯರ ತಾಯಿ,ಕಿಶೋರ್,ಶ್ಯಾಮಣ್ಣ ನಿಂತಿದ್ದರು.

ಬ್ರಹ್ಮರಾಯರನ್ನು ಮನೆಗೆ ಕರೆದುಕೊಂಡು ಬಂದರು.೧೫ ದಿನ ನೋವಿತ್ತು,ಹೊರಗಡೆ ಎಲ್ಲೂ ಹೋಗಲಿಲ್ಲ.ಮತ್ತೆಂದೂ ಬ್ರಹ್ಮರಾಯರು,ರಾಯರಿಗೆ ಅಡ್ಡಿ ಮಾಡಲಿಲ್ಲ,ಎಲ್ಲವನ್ನು ರಾಯರಿಗೆ ಒಪ್ಪಿಸಿ, ನಿವೃತ್ತಿ ಜೀವನದಲ್ಲಿ ತಮ್ಮ ಉಳಿದ ಪ್ರತಿ ಕ್ಷಣವನ್ನು ಅನಂದಿಸತೊದಗಿದರು.

ರಾಯರು "ಹೋರಾಟದ ಹಾದಿ"ಯಲ್ಲಿ ಹೊಸ ಬದಲಾವಣೆಯನ್ನು ತಂದರು.ಈಗ ಕಿಶೋರ್ ಬಂದುದರಿಂದ ಹೊಣೆ ಸ್ವಲ್ಪ ಕಡಿಮೆಯಾಯಿತು.ಜೀವನ ಚಕ್ರದ ೨ ಹಂತಗಳು ಮುಗಿದು ೩ನೆಯ ಹಂತಕ್ಕೆ ಕಾಲಿಟ್ಟರು."ಆಳ್ವಿಕೆಯ ಯುಗ" ಪ್ರಾರಂಭವಾಯಿತು.ಇಲ್ಲಿ ರಾಯರ ಮಾತನ್ನು ಕೇಳುವ,ಅವರ ಯೋಚನೆಗೆ ಒಂದು ಹೊಸ ರೂಪು ಕೊಡುವ ತಂಡ ನಿರ್ಮಾಣವಾಗಿತ್ತು.ವಿದ್ಯಾಗಿರಿಯಲ್ಲಿ ಎಲ್ಲರ ಮನೆ,ಮನ ಸುಖ,ಸಂತೋಷದಿಂದ ತುಂಬಿ ತುಳುಕುತ್ತಿತ್ತು.

|ಶುಭಂ|

Friday, March 12, 2010

ಹೋರಾಟದ ಹಾದಿ

೧೦
ಕೃಷಿ ಕಾರ್ಯಗಳು ಭರದಿಂದ ಸಾಗಬೇಕೆಂದು ರಾಯರು ಬಯಸಿದ್ದರು.ಯೋಚನೆ,ಯೋಜನೆಯೇನೋ ಸರಿಯಾಗಿಯೇ ಇತ್ತು.ಆದರೆ ಮತ್ತೆ ಬ್ರಹ್ಮರಾಯರು ತಮ್ಮ ಹಳೆಯ ಚಾಳಿ ಮುಂದುವರೆಸಿದರು.ನೀನು ಹಾಗೆ ಆಗಬೇಕು,ಹೀಗೆ ಆಗಬೇಕು ಎಂದರೆ ಆಗುವುದಿಲ್ಲ,ನಿನಗೆ ಬೇಕಾದ ಹಾಗೆ ಆಗಬೇಕಿದ್ದರೆ ಇಲ್ಲಿ ಬಂದು ನಿಂದು ಮಾಡಿಸು,ನನಗೆ ವಯಸ್ಸಾಯಿತು ಈಗ ಇರುವ ತೋಟವನ್ನೇ ನೋಡಲು ಆಗುವುದಿಲ್ಲ,ಇನ್ನು ಜಾಗ ಮಾಡಿದರೆ ನನ್ನಿಂದ ನೋಡಲು ಸಾಧ್ಯವಿಲ್ಲ,ನಿಮಗೆ ಪೇಟೆಯಲ್ಲಿರುವವರಿಗೆ ಕೂತು ಹೇಳುವುದು ಸುಲಭ,ನೀವು ಪುಸ್ತಕದಲ್ಲಿ ಓದಿದ ಹಾಗೆ ಇಲ್ಲಿ ಮಾಡಲು ಆಗುವುದಿಲ್ಲ ಎಂದು ಬ್ರಹ್ಮರಾಯರು ಪ್ರಾರಂಭದಲ್ಲಿಯೇ ಹೇಳಿದ್ದರು.ಹಾಗೆ ಇಂದು ಕೆಲಸ ಕಾರ್ಯದಲ್ಲಿಯೂ ತಮ್ಮ ನಿರಾಸಕ್ತಿಯನ್ನು ವ್ಯಕ್ತಪಡಿಸಿದ್ದರು.ಆದರೆ ರಾಯರು ಇದನ್ನು ಯಾವುದನ್ನೂ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ.ಊರಿಗೆ ಬಂದಾಗ "ಸೀನ"ನಲ್ಲಿ ಹಾಗೆ,ಹೀಗೆ ಹೇಳಿ ಹೋಗುತ್ತಿದ್ದರು.ಅವನು ರಾಯರ ಐದಿಯವನ್ನು ಸ್ವಲ್ಪ ಮಟ್ಟಿಗೆ ಗ್ರಹಿಸುತ್ತಿದ್ದ,ಇನ್ನು ಸ್ವಲ್ಪ ಅವನ ಐದಿಯವನ್ನು ಸೇರಿಸಿ ಕೆಲಸ ಮಾಡುತ್ತಿದ್ದ.ಒಟ್ಟಾಗಿ ಮೊದಲ ೧,೨ ವರ್ಷ ಕೆಲಸ ಕಾರ್ಯಗಳು ಬಹಳ ಮಂದ ಗತಿಯಲ್ಲಿಯೇ ಸಾಗಿದವು.

ರಾಯರು ಎಂದರೆ ಅವರ ಎಲ್ಲ ಅಣ್ಣಂದಿರ ಮಕ್ಕಳಿಗೂ ಬಹಳ ಪ್ರೀತಿ,"ಅಪ್ಪಚ್ಚಿ,ಅಪ್ಪಚಿ " ಎಂದು ಅವರ ಹಿಂದೆ ಮುಂದೆ ಸುಳಿದಾಡುವರು.ಕಿಶೋರ್,ಗಣೇಶ ಪ್ರಸಾದ ಇವರಿಗೆ ಮತ್ತಷ್ಟು ಹತ್ತಿರ,ಯಾಕೆಂದರೆ ವಯಸ್ಸಲ್ಲಿ ಬಹಳ ಅಂತರವಿಲ್ಲ ೮,೧೦ ವರ್ಷ ವ್ಯತ್ಯಾಸ ಅಷ್ಟೇ.ರಾಯರ ಯೋಚನೆಗಳು,ಕನಸುಗಳು ಇವರಿಗೆ ಬಹಳ ಬೇಗ ಗೊತ್ತಾಗುತ್ತಿತ್ತು.ಉಳಿದವರೆಲ್ಲ ತುಂಬಾ ಸಣ್ಣ.ಅದೊಂದು ದಿನ ರಾಯರು ನಮ್ಮ ಮನೆ,ಕುಟುಂಬ ಇದರ ಹಿನ್ನಲೆ,ಹಿಂದೆ ಇದ್ದ ಘನತೆ,ಗೌರವ ಇದರ ಕುರಿತು ಕಿಶೋರ್,ಗಣೇಶ ಪ್ರಸಾದರಲ್ಲಿ ಮಾತಾಡುತ್ತಿದ್ದರು.ನಾನು ಇನ್ನು ೧,೨ ವರ್ಷದಲ್ಲಿ ಊರಿಗೆ ಬಂದು ಬಿಡುತ್ತೇನೆ.ಆಮೇಲೆ ನಾವು ಪೂರ್ಣ ಪ್ರಮಾಣದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸುವುದರ ಜೊತೆಗೆ ೪ ಜನರಿಗೆ ಉಪಯೋಗವಾಗುವ ಹಾಗೆ ಏನಾದರು ಮಾಡಬೇಕು ಎಂದರು."ವೇದಪಾಠಶಾಲೆ " ಶುರು ಮಾಡಿದರೆ ಹೇಗೆ ಹಿಂದಿನಿಂದಲೂ ಒಂದು ಒಳ್ಳೆ ಪರಂಪರೆ ಇದೆ ಎಂದು ಗಣೇಶ ಪ್ರಸಾದರು ಕೇಳಿದರು.ಆಗದೆ ಇಲ್ಲ,ಆದರೆ ಇಲ್ಲಿ ಬರಿ ವೇದ ಕಲಿಸುವ ಬದಲು ವೇದದ ಜೊತೆ ಜೊತೆಗೆ ಸಂಸ್ಕೃತ,ಜ್ಯೋಥಿಶ್ಯವು ಕಲಿಸಿದರೆ ಒಳ್ಳೆಯದು ಎಂದು ಕಿಶೋರ್ ಹೇಳಿದ.ರಾಯರು ಹಾಗೆಯೇ ಯೋಚಿಸುತ್ತಿದ್ದರು.ಕಿಶೋರ್,ಗಣೇಶ ನಿಮ್ಮ ಆಲೋಚನೆ ಚೆನ್ನಾಗಿದೆ, ವೈಧಿಕರಿಗೆ ದೇಶ,ವಿದೇಶದಲ್ಲಿ ಬೇಡಿಕೆಯಿದೆ,ಹಾಗಿರುವಾಗ ನಾವು ಅವರಿಗೆ ಇಂದಿನ ಕಾಲದಲ್ಲಿ ನೀವು ಹೇಳಿದ ವಿಷಯಗಳಷ್ಟನ್ನೇ ಕಲಿಸಿದರೆ ಸಾಕಾಗುವುದಿಲ್ಲ,ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನ ಬಹಳ ಅಗತ್ಯ,ಕಂಪ್ಯೂಟರ್,ನೆಟ್,ಇವುಗಳ ಬಗ್ಗೆ ಗೊತ್ತಿರುವುದು ತೀರ ಅವಶ್ಯ.ಹಾಗಾಗಿ ನಾವು ಇದೆಲ್ಲವನ್ನು ಒದಗಿಸೋಣ,ಏನಂತೀರಿ ಎಂದರು?ರಾಯರು ಹೇಳಿದ ವಿಷಯಗಳೆಲ್ಲವೂ ಸರಿಯಾಗಿಯೇ ಇದ್ದವು.ಗಣೇಶ,ಕಿಶೋರ್ ಇಬ್ಬರು ಒಪ್ಪಿದರು.

ಕಿಶೋರ್ ಬೆಂಗಳೂರಲ್ಲಿ ಕೆಲಸದಲ್ಲಿದ್ದ.ಗಣೇಶ ಪ್ರಸಾದರಿಗೆ ಊರಲ್ಲಿ ಒಳ್ಳೆಯ ಬೇಡಿಕೆ ಇತ್ತು.ಪೂಜೆ,ಹೋಮ,ಮದುವೆ,ಉಪನಯನ ಹೀಗೆ ೩ ಹೊತ್ತು ಹೋದರು ಸಾಕಾಗುತಿರಲಿಲ್ಲ.ಇವರು ಇಬ್ಬರು ಅಣ್ಣ ತಮ್ಮಂದಿರು ಮತ್ತು ಚಿಕ್ಕಪ್ಪ ರಾಯರದು ಅದೊಂದು ಅಪರೂಪದ ಸಂಭಂದ.ರಾಯರ ಬಾಯಿಂದ ವೇದ ಪಾಠಶಾಲೆ ಮಾಡುವ ಎಂದು ಬಿದ್ದದ್ದೇ ತಡ,ಗಣೇಶ ಪ್ರಸಾದರು ಅದಕ್ಕೆ ಬೇಕಾದ ಸಿದ್ದತೆ,ಯೋಜನೆ ರೂಪಿಸಿದರು.ವೇದವನ್ನು ಸ್ವತಃ ಗಣೇಶ ಪ್ರಸಾದರೆ ಮಾಡುವುದು,ಸಂಸ್ಕೃತವನ್ನು ವಿದ್ವಾಂಸ ರಾಮಜೋಶಿಯವರು,ಮತ್ತು ಜ್ಯೋತಿಷ್ಯಕ್ಕೆ ಸತ್ಯನಾರಾಯಣ ಭಟ್ಟರು ಎಂದು ಗಣೇಶ ಪ್ರಸಾದರು ನಿರ್ಧರಿಸಿದರು.ಇನ್ನು ಉಳಿದ ವಿಷಯಗಳ ರೂಪುರೇಷೆಯನ್ನು ಕಿಶೋರ್ ಮಾಡಿದ.ವಾರದಲ್ಲಿ ೨ ದಿನ ಸಂಜೆ ೧ ಗಂಟೆ ಇಂಗ್ಲಿಷ್ ವಿಧ್ಯಾಭ್ಯಾಸ,ಇನ್ನೆರಡು ದಿನ ಗಣಿತಕ್ಕೆ,ಸಾಮಾನ್ಯ ಜ್ಞಾನಕ್ಕೆ ಸಂಭಂದ ಪಟ್ಟ ವಿಷಯಗಳು,ಉಳಿದ ೨ ದಿನ ಕಂಪ್ಯೂಟರ್ ,ರವಿವಾರ ಫ್ರೀ.ಇಂಗ್ಲಿಷ್ ಮತ್ತು ಗಣಿತವನ್ನು ರಾಯರು ಮತ್ತು ಕಂಪ್ಯೂಟರ್ ಸಂಭಂದಪಟ್ಟ ವಿಷಯಗಳನ್ನೂ ಸಂಧ್ಯಾ ಮಾಡುವುದಾಗಿ ನಿರ್ಧರಿಸಿದರು.ಕಿಶೋರ್,ಗಣೇಶರಿಂದ ನೀಲ ನಕ್ಷೆ ಪಡೆದ ರಾಯರು ನೋಡಿ ಅಲ್ಲಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅದಕ್ಕೆ ಒಂದು ಅಂತಿಮ ರೂಪು ಕೊಟ್ಟರು.ರಾಯರ ೨ ಎಕರೆ ಗುಡ್ಡ ಕಡಿದು ವಿಶಾಲ ಮೈದಾನ ನಿರ್ಮಾಣವಾಯಿತು.ಅಲ್ಲಿ ಸಕಲ ವ್ಯವಸ್ತೆ ಇರುವ "ವೇದ ವಿಜ್ಞಾನ ಸಂಗಮ" ದ ಕಟ್ಟಡ ತಲೆ ಎತ್ತಿತು.ಇವಿಷ್ಟು ನಡೆಯುವಷ್ಟರಲ್ಲಿ ೨ ವರ್ಷ ಕಳೆಯಿತು.ರಾಯರು ಊರಿಗೆ ಬರುವ ಸಮಯ ಸನ್ನಿಹಿತವಾಯಿತು.

ರಾಯರು ತಾವು ಇರುವ ಹುದ್ದೆಗಳಿಗೆ ರಾಜೀನಾಮೆ ನೀಡಿ ಊರಿನತ್ತ ತಮ್ಮ ಪಯಣ ಬೆಳೆಸಿದರು.ಕಂಪನಿ ಬಹಳ ಒತ್ತಾಯ ಮಾಡಿ ರಾಯರನ್ನು ನೀವು ಕಂಪೆನಿಗೆ ಆಗಾಗ ಮಾರ್ಗದರ್ಶನ ನೀಡಬೇಕೆಂದು ಕೇಳಿಕೊಂಡಿತು.ಹಾಗೆಯೆ ರಾಯರು ಊರಲ್ಲೇ ಇದ್ದು ಕೆಲಸ ಮಾಡುವಂತೆ ಮನವಿ ಮಾಡಿತು.ರಾಯರು ಕೆಲವನ್ನು ಒಪ್ಪಿದರು.ಊರತ್ತ ಮುಖ ಬೆಳೆಸಿದರು.ರಾಯರಿಗೆ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ತೊಂದರೆ ಆದದ್ದು ಕಿಶೋರ್ ನ ಗೈರುಹಾಜರಿ.ಕಿಶೋರ್ ಕಂಪೆನಿಯಿಂದ "ಯು ಎಸ್ ಎ" ಗೆ ಹೋಗಿದ್ದ.ಹಾಗಾಗಿ ಈಗ ಎಲ್ಲದರ ಹೊಣೆ ರಾಯರು ಮತ್ತು ಗಣೇಶ ಪ್ರಸಾದರ ಹೆಗಲ ಮೇಲೆ ಬಿತ್ತು.

ರಾಯರು ಮನೆಗೆ ಬಂದ ಕೂಡಲೇ "ಬ್ರಹ್ಮರಾಯರ " ಮುಖ ಅರಳಿತು.ಮತ್ತೆ ಮಗ ಪೇಟೆ ಬಿಟ್ಟು ಮನೆ ಕಡೆಗೆ ಬರುತ್ತಾನೆ ಎಂದು ಬ್ರಹ್ಮರಾಯರು ಕನಸ್ಸಲ್ಲು ಯೋಚಿಸಿರಲಿಲ್ಲ.ಮಗನ ಆಗಮನವಾಗುತ್ತಿದ್ದಂತೆಯೇ ಬ್ರಹ್ಮರಾಯರ ಅಸೌಖ್ಯ,ಆಯಾಸಗಳು ಒಂದೊಂದಾಗಿ ಮಾಯವಾಗತೊದಗಿದವು.ರಾಯರು ಬಂದವರೇ ಸುಮ್ಮನೆ ಕೂರಲಿಲ್ಲ.ಪುತ್ತೂರಿನ ಇಂಜಿನಿಯರಿಂಗ್ ಕಾಲೇಜಿಗೆ ಗೌರವ ಅಧ್ಯಾಪಕರಾಗಿ ಸೇರಿದರು.ವಾರದಲ್ಲಿ ೪ ರಿಂದ ೬ ಗಂಟೆ ಪಾಠಕ್ಕೆ ಹೋಗಬೇಕಾಗಿತ್ತು.

ಮೊದಲಿಗೆ ರಾಯರ ವೇದವಿಜ್ಞಾನದ ಕಲ್ಪನೆ ಯಾರಿಗೂ ಹಿಡಿಸಲಿಲ್ಲ.ಎಲ್ಲರು ವಿರೋಧಿಸಿದರು.ಲೌಕಿಕ ಶಿಕ್ಷಣ ಬೇಕಾದರೆ ಮುಂದೆ ಕಲೀತಾರೆ,ಅದನ್ನು ವೇದ ದ ಜೊತೆಗೆ ಸೇರಿಸಿ ಅದರ ಸೌಂದರ್ಯ ಹಾಳುಮಾಡಬೇಡಿ ಎಂದರು.ರಾಯರ ಎಲ್ಲ ಹಿರಿಯ ಮುಖಂಡರನ್ನು,ವಿದ್ವಾಂಸರನ್ನು ಕರೆದು ಒಂದು ಚರ್ಚೆಯ ಏರ್ಪಾಟು ಮಾಡಿದರು.ಅಲ್ಲಿ ರಾಯರು ಹೇಳಿದ ಮಾತುಗಳು "ನಮ್ಮಲ್ಲಿ ಎಷ್ಟೋ ಜನ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸಣ್ಣ ಪ್ರಾಯದಲ್ಲೇ ವೇದ ಕಲಿಕೆಗೆ ಕಳುಹಿಸುತ್ತಾರೆ,ಕಾರಣಗಳು ಹಲವಿರಬಹುದು ಆದರೆ ೭ ನೆಯ ತರಗತಿ ಆಗಿ ವೇಧಾಭ್ಯಾಸಕ್ಕೆ ಹೋದರೆ ಬಹಳ ಸಣ್ಣ ಪ್ರಾಯದಲ್ಲೇ ನಮ್ಮ ಮಾಮೂಲಿ ಶಿಕ್ಷಣದ ಜೊತೆಗಿನ ನಂಟು ಕಳೆದು ಹೋಗುತ್ತದೆ,ಮುಂದೊಂದು ದಿನ ಅವನು ಪ್ರೈವೇಟ್ ಆಗಿ "ಎಸ್ ಎಸ್ ಎಲ್ ಲಿ " ಮಾಡುತ್ತೇನೆ ಎಂದರೂ ಆಗ ಅವನಿಗೆ ಕಷ್ಟವಾಗುತ್ತದೆ ಯಾಕೆಂದರೆ ಪ್ರಾಥಮಿಕ ಕೂಡುವುದು,ಕಳೆಯುವುದು ಬಿಟ್ಟರೆ ಬೇರೇನೂ ಗೊತ್ತಿರುವುದಿಲ್ಲ,ಹಾಗಾಗಿ ವಿಷಯಗಳು ಸರಿಯಾಗಿ ಅರ್ಥವಾಗುವುದಿಲ್ಲ ಮತ್ತೆ ಕೋಚಿಂಗ್ ಮುಂತಾದ ಕಡೆ ಹೋದರು,ಹೇಳಿದ ವಿಷಯಗಳು ಅರ್ಥವಾಗದಾಗ ನಿರಾಸಕ್ತಿ ಬಂದು ಸಾಕು ಇನ್ನು ನಾನು "ಎಸ್ ಎಸ್ ಎಲ್ ಸಿ " ಮಾಡಿ ಏನು ಆಗಬೇಕಾಗಿದೆ ಎಂದು ಬಿಟ್ಟು ಬಿಡುತ್ತಾರೆ.ಇನ್ನು ಜ್ಯೋತಿಷ್ಯ ಶಾಸ್ತ್ರ ದ ಅಧ್ಯಯನಕ್ಕೂ ಗಣಿತ ಬಹಳ ಅಗತ್ಯ,ಆದರೆ ಹಿಂದಿನವರು ಕಲಿತಿಲ್ಲವೇ ಎಂದು ನೀವು ಪ್ರಶ್ನಿಸಬಹುದು ಆದರೆ ಹಿಂದೆ ಆದದ್ದು ಆಗಿ ಹೋಯಿತು,ಅಂದಿನ ಶಿಕ್ಷಣದ ಬಗ್ಗೆ ಇಂದು ನಾವು ಮಾತಾಡುವುದು ಬೇಡ.ಮುಂದೆ ಹೊರಗಡೆ ಹೋದಾಗ ಎಲ್ಲಿಯೂ ನಮ್ಮ ಮಕ್ಕಳು ಹಿಂದೆ ಬೀಳಬಾರದು,ನನಗೆ ಇಂಗ್ಲಿಷ್ ಗೊತ್ತಿಲ್ಲ,ಗಣಿತ ಬರಲ್ಲ,ಅಂದು ಅಪ್ಪ ನನ್ನನ್ನು "ಎಸ್ ಎಸ್ ಎಲ್ ಸಿ"ವರೆಗಾದರೂ ಓದಿಸಿದ್ದರೆ ನಾನು ಏನಾದರು ಮಾಡುತ್ತಿದ್ದೆ ಎಂದು ನಮ್ಮ ಮಕ್ಕಳು ಮುಂದೆ ಅಡಿಕೊಳ್ಳಬಾರದು."ಎಸ್ ಎಸ್ ಎಲ್ ಸಿ " ಆಗಿದ್ದರೆ ಮುಂದೆ ಅವರು ಇಷ್ಟವಿದ್ದರೆ ಸಂಸ್ಕೃತದಲ್ಲಿ ಖಾಸಗಿಯಾಗಿ "ಬಿಎ ","ಎಂ ಎ " ಮಾಡಬಹುದು, ಹಾಗಾಗಿ ಒಂದನೆಯದಾಗಿ ವೇಧ ಅಧ್ಯಯನಕ್ಕೆ "ಎಸ್ ಎಸ್ ಎಲ್ ಸಿ " ಕಡ್ಡಾಯವಾಗಿ ಇರಬೇಕು ಮತ್ತು ನಾನು ಹೇಳಿದ ಹಾಗೆ ವೇಧದ ಜೊತೆ ಜೊತೆಯಲ್ಲಿ ಮಾಮೂಲಿ ಶಿಕ್ಷಣದ ಅಂಶಗಳು ಯಾವುದು ಪ್ರಧಾನವಾಗಿ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ ಅವನ್ನು ಕೊಡಬೇಕು.ಇದೆ ನನ್ನ ಆಶಯ,ಇದಕ್ಕಾಗಿಯೇ ಈ ವೇದವಿಜ್ಞಾನ ಸ್ಥಾಪನೆ ಎಂದರು".ಎಲ್ಲರು ಮುಖ ಮುಖ ನೋಡಿದರು,ವಯಸ್ಸಿನಲ್ಲಿ ಸಣ್ಣವನಾದರೂ ಹೇಳುವ ಮಾತಿನಲ್ಲಿ ಅರ್ಥವಿದೆ ಎನಿಸಿತು.ಪರಸ್ಪರ ಮಾತಾಡಿ ವಿದ್ವಾಂಸರು ಒಂದು ತೀರ್ಮಾನಕ್ಕೆ ಬಂದರು.ನಿಮ್ಮ ಯೋಜನೆಯ ಪೂರ್ಣ ಅರಿವಿರಲಿಲ್ಲ,ನೀವು ಇಷ್ಟು ಹೇಳಿದ ಮೇಲೆ ಗೊತ್ತಾಯಿತು,ಈ ವಿಷಯವನ್ನು ಖಂಡಿತವಾಗಿಯೂ ಮುಂದೆ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ,ನಿಮ್ಮ ಕಾರ್ಯಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲವಿದೆ,ಏನೇ ಸಹಾಯ ಬೇಕಾದರೂ ಸಂಕೋಚ ಬಿಟ್ಟು ಕೇಳಿ,ಒಳ್ಳೆಯ ಶುಭ ಮುಹೂರ್ತದಲ್ಲಿ ತರಗತಿ ಪ್ರಾರಂಭವಾಗಲಿ ಎಂದು ಶುಭ ಹಾರೈಸಿ ಹೋದರು.

ರಾಯರ ಯೋಜನೆಗಳು ದಿನೇ ದಿನೇ ವಿಸ್ತರಿಸತೊದಗಿದವು.ಶ್ಯಾಮಣ್ಣನ ಜೊತೆ ಸೇರಿ ಇಂಗು ಗುಂಡಿ ಅಭಿಯಾನ ಹಮ್ಮಿಕೊಂಡರು.ನೆಲ ಜಲ ಸಂರಕ್ಷಣೆಯ ಕುರಿತು ಹಳ್ಳಿಯಲ್ಲಿ ಜಾಗೃತಿ ಮೂಡಿಸಿದರು.ಗುರುಗಳಾದ ಅಚ್ಯುತ ಭಟ್ಟರು ಮತ್ತು ಶ್ಯಾಮಣ್ಣರ ಜೊತೆ ಸೇರಿ ಕೃಷಿಯಲ್ಲಿ ಹೊಸತು ಏನೇನು ಅಳವಡಿಸಬಹುದು,ಅದಕ್ಕೆ ಸರಕಾರದ ಸಹಾಯ ಏನೇನು ಸಿಗುತ್ತದೆ,ಈಗ ಎಲ್ಲೆಡೆ ಇರುವ ಪದ್ಧತಿಯ ಲೋಪಧೋಶಗಲೇನು,ಎಂಬುದನ್ನು ಚರ್ಚಿಸಿ ಅದನ್ನು ನಮ್ಮ ಸುತ್ತಲಿನ ಜನಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ಮಾಡಿದರು.ಅದಕ್ಕಾಗಿ ಹಳ್ಳಿಯ ಜನರನ್ನೆಲ್ಲ ಒಂದೆಡೆ ಸೇರಿಸಿ ಪರಸ್ಪರರ ಕುಂದು ಕೊರತೆಗಳನ್ನೂ ಚರ್ಚಿಸಿ ಎಲ್ಲರು ಬೆರೆತು,ಕಲೆತು ಒಂದು ಸಮಾಧಾನ,ಪರಿಹಾರ ಕಂಡು ಹಿಡಿಯುವ ಕೆಲಸ ಮಾಡಿದರು.ಕೃಷಿ ಪಂಡಿತರಿಂದ ಸಮ್ಮೇಳನದ ವ್ಯವಸ್ತೆ ಮಾಡಿದರು.

ಅದೇ ಸಮಯಕ್ಕೆ ಪ್ರಸನ್ನರು ಊರಿಗೆ ಬಂದರು.ಮಿತ್ರರಿಬ್ಬರು ಸೇರಿ ನಮ್ಮ ಊರಿಂದ ವರ್ಷಕ್ಕೊಂದು ಪ್ರವಾಸದ ವ್ಯವಸ್ತೆ ಮಾಡುವುದು ಎಂದು ಯೋಜನೆ ಹಾಕಿದರು.ಆದರೆ ಅಲ್ಲಿಯವರೆಗೆ ಈ ತರ ವ್ಯವಸ್ತೆ ಯಾರೂ ಮಾಡದೇ ಇದ್ದುದರಿಂದ ಜನರಿಂದ ಅದ್ಹುತ ಪ್ರತಿಕ್ರಿಯೆ ದೊರೆಯಿತು.

ನಮ್ಮ ಊರಲ್ಲಿ ಎಷ್ಟೋ ಜನ ವಿದ್ಯಾರ್ಥಿಗಳು ಪ್ರತಿಭಾವಂತರು ಇದ್ದಾರೆ,ಆದರೆ ಹಣಕಾಸಿನ ಕೊರತೆ ಎಷ್ಟೋ ಪ್ರತಿಭೆಗಳನ್ನು ಸನ್ನಂದಿನಲ್ಲಿಯೇ ಹೊಸಕಿ ಹಾಕುತ್ತದೆ ಎಂಬುದನ್ನು ಮನಗಂಡ ರಾಯರು ಸೂಕ್ತ ಸ್ಕಾಲರ್ಷಿಪ್ ದೊರೆಯುವ ವ್ಯವಸ್ತೆ ಮಾಡಿದರು.ಹಾಗೆಯೆ ಎಷ್ಟೋ ಗ್ರಾಮೀಣ ಪ್ರತಿಭೆಗಳು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬಳಲುತ್ತಿರುವುದನ್ನು ಕಂಡರು.ಅದಕ್ಕಾಗಿಯೇ ಅಡ್ಯನಡ್ಕ ಶಾಲೆಯಲ್ಲಿ ಆಟೋಟದಲ್ಲಿ ಆಸಕ್ತಿ ಇರುವವರಿಗೆ ಒಂದು ತರಬೇತಿ ಕೊಡುವ ವ್ಯವಸ್ತೆ ಮಾಡಿದರು.

೨೦೦೮ ಬಹಳ ಚಾಲೆಂಜಿಂಗ್ ಇಯರ್.ಒಮ್ಮೆಲೇ ಎಲ್ಲರ ಮನೆಯಲ್ಲೂ ಚಿಕೂನ್ ಗುನ್ಯ ಬಂದು ಎಲ್ಲರು ಮಲಗುವಂತಾದರು.ಎಲ್ಲೆಲ್ಲೂ ಮೈ,ಕೈ ನೋವು,ಗಂಟು ನೋವು.ರಾಯರು ಡಾಕ್ಟರ್ "ಸತ್ಯ ಪ್ರಕಾಶ್" ರನ್ನು ಕರೆಸಿಕೊಂಡರು.ಇವರು ರಾಯರ ಫ್ರೆಂಡ್,ಸುಮಾರು ಒಂದು ೨,೩ ತಿಂಗಳುಗಳ ಕಾಲ ಇಡೀ ಹಳ್ಳಿಯಲ್ಲಿ ಸಂಚರಿಸಿ,ಎಲ್ಲರಿಗೂ ಸಮಾಧಾನ ಹೇಳಿ ಬಂದರು.ಕೆಲವರಿಗೆ ಮಾತ್ರೆಯ ಮೇಲೆ ನಂಬಿಕೆ,ಅಂತವರಿಗೆ ಔಷದ,ಇನ್ನು ಚಿಕೂನ್ ಗುನ್ಯಕ್ಕೆ ಮದ್ದಿಲ್ಲ,ನೋವಿಗೆ ಪೈನ್ ಕಿಲ್ಲರ್ ಕೊಡಬಹುದಷ್ಟೇ,ಹಾಗಾಗಿ ನೀವು ನಿಮ್ಮ ಕಷಾಯ,ಹಳ್ಳಿ ಮದ್ದು ಮಾಡಿದರು ಏನು ಅಪಾಯವಿಲ್ಲ ಎಂದು ಒಬ್ಬರು ಡಾಕ್ಟರ್ ಹೇಳಿದಾಗ ಎಷ್ಟೋ ಜನರಿಗೆ ಸಮಾಧಾನವಾಯಿತು.

ಆ ಸಂದರ್ಭದಲ್ಲೇ ಹಳ್ಳಿಯಲ್ಲಿ ಶ್ರಮಧಾನ ಕಾರ್ಯಕ್ರಮ ಸುರುವಾಯಿತು.ಎಲ್ಲರು ಸೇರಿ ಸಾಮಾನ್ಯವಾಗಿ ಎಲ್ಲರಿಗು ಉಪಯೋಗವಾಗುವಂತಹ ಕೆಲಸ ಮಾಡುತ್ತಿದ್ದರು.ರಸ್ತೆ ರಿಪೇರಿ,ಕುಡಿಯುವ ನೀರಿನ ವ್ಯವಸ್ತೆ ಗ್ರಾಮ ನೈರ್ಮಲ್ಯ ಕಾಪಾಡುವುದು ಇತ್ಯಾದಿ.

ರಾಯರ ಮಾತಿಂದ,ಮಾಡಿದ ಕಾರ್ಯದಿಂದ ಪ್ರೇರಣೆಗೊಂಡು ಅವರ ಅಣ್ಣಂದಿರ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಬಂದು ಸೇರತೊದಗಿದರು.ಒಬ್ಬ ಅಣ್ಣನ ಮಗ "ಡಾಕ್ಟರ್ ಕೈಲಾಸ್ " ಅಂತೂ ವಾರಕ್ಕೆ ೨ ದಿನ ವಿದ್ಯಾಗಿರಿಯಲ್ಲಿರುತ್ತಿದ್ದ,ಉಳಿದ ದಿನ ಅವನ ಬೆಳೆದ ಊರಲ್ಲಿ ಜನರ ಯೋಗ ಕ್ಷೇಮ ವಿಚಾರಿಸುತ್ತಿದ್ದ,ಅಲ್ಲೂ,ಇಲ್ಲೂ ಎರಡು ಕಡೆ ಒಂದೇ ಮಾತು ಡಾಕ್ಟರ್ ಕೈಗುಣ ಒಮ್ಮೆ ಔಷದ ತೆಗೆದುಕೊಂದರೆ ಸಾಕು ರೋಗ ಎಲ್ಲ ಹೊರಟು ಹೋಗುತ್ತೆ ,ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರ್ ಮಾತಾಡಿಸುವ ರೀತಿಯೇ ಹಾಗೆ ಬೇರೆ ಕಡೆ ಆದರೆ ಹೇಳಬಹುದಿತ್ತು ಇನ್ನೊಮ್ಮೆ ಬರಬೇಕೂಂತ ಕಾಣಿಸುತ್ತದೆ ಅಂತ."ದಿ ಯಂಗ್ ಅಂಡ್ ಡೈನಮಿಕ್ ಡಿ ಸಿ ಆಫೀಸರ್ " ಗೌತಮ್ ಮಂಗಳೂರಿಗೆ ಬಂದ ಮೇಲೆ ಕಾನೂನು ವ್ಯವಸ್ತೆಗೆ ಹೊಸ ಆಯಾಮ ಬಂತು.ನಿಜವಾಗಿಯೂ ಇದ್ದರೆ ಅವರಂಥ ಆಫೀಸೆರ್ ಇರಬೇಕು ಇಂದು ಯಾವುದೇ ಕೆಲಸಕ್ಕಾದರೂ ಬಹಳ ಕಷ್ಟ ಪಡಬೇಕಾಗುವುದಿಲ್ಲ,ಎಲ್ಲ ಇಲಾಖೆಯನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಂಡು ಜನರಿಗೆ ಉಪಯೋಗವಾಗುವ ಹಾಗೆ ವ್ಯವಸ್ತೆ ಮಾಡಿದ್ದಾರೆ.ಗೌತಮ್ ಬೇರಾರು ಅಲ್ಲ,ಸಣ್ಣದಾಗಿರುವಾಗ "ಅಪ್ಪುಚ ಅಪ್ಪುಚ" ಎಂದು ರಾಯರನ್ನು ಕರೆಯುತ್ತಿದ್ದ,ಇನ್ನೊಬ್ಬ ಅಣ್ಣನ ಮಗ.

ಎಲ್ಲರು ಒಂದೆಡೆ ಸೇರಿ ಮುಂದಿನ ಯೋಜನೆಗಳನ್ನು ಚರ್ಚಿಸುತ್ತಿದ್ದರು.ಮಕ್ಕಳೆಲ್ಲ ಪರಸ್ಪರ ಒಂದು ಪ್ರೀತಿಯ ವಾತಾವರಣ ನಿರ್ಮಿಸಿರುವುದನ್ನು ಕಂಡು ಶ್ಯಾಮಣ್ಣನ ಕಣ್ಣು ತುಂಬಿ ಬಂತು.ಯಾವುದಕ್ಕಾಗಿ ನನ್ನ ಜೀವನದುದ್ದಕ್ಕೂ ಪ್ರಯತ್ನ ಪಟ್ಟರೋ ಅದು ಇಂದು ಸಾಕಾರವಾಗಿತ್ತು.ಮಕ್ಕಳೆಲ್ಲ ಒಂದಾಗಿ,ಒಟ್ಟಾಗಿ ಸಮಾಜಕ್ಕೆ ಉಪಯೋಗವಾಗುವಂಥ ಕೆಲಸ ಮಾಡುತ್ತಿರುವುದು ಮನಸ್ಸಿಗೆ ಬಹಳ ಆನಂದ ಉಂಟುಮಾಡಿತ್ತು.ಕಿಶೋರ್ ನಿತ್ಯವೂ ಬೆಳವಣಿಗೆ ಕುರಿತು ಫೋನಲ್ಲಿ ಚರ್ಚಿಸುತ್ತಿದ್ದ.ರಾಯರ ವೆಬ್ ಸೈಟ್ ನಿತ್ಯ ಅಪ್ಡೇಟ್ ಆಗುತ್ತಿತ್ತು.ಆ ಮೂಲಕ ಎಲ್ಲ ವಿಷಯಗಳು ಗೊತ್ತಾಗುತ್ತಿದ್ದವು.ಎಷ್ಟೋ ಅಮೂಲ್ಯ ಸಲಹೆಗಳನ್ನು,ತನ್ನ ಅಭಿಪ್ರಾಯವನ್ನು ಅಲ್ಲಿ ಮಂಡಿಸುತ್ತಿದ್ದ.ರಾಯರು ಫೈನಲ್ ಡಿಸಿಸನ್ ತೆಗೆದುಕೊಳ್ಳುವ ಮುಂಚೆ ಕಿಶೋರ್,ಗಣೇಶ ಪ್ರಸಾದರ ಜೊತೆ ಚರ್ಚಿಸುತ್ತಿದ್ದರು.ಈ ೩ ಜನರ ಕೋರ್ ಕಮಿಟಿಯಲ್ಲಿ ಯಾವುದೇ ವಿಷಯವಾದರೂ ಅಂತಿಮ ತೀರ್ಮಾನ ಪಡೆಯುತ್ತಿತ್ತು.

ಅಂದು ಕೈಲಾಸನ ಮದುವೆ,ಗ್ರಹಪ್ರವೇಶ ಕಾರ್ಯಕ್ರಮ ವಿದ್ಯಾಗಿರಿಯಲ್ಲೇ ನಡೆಯಿತು.ಎಲ್ಲ ಗೌಜಿ,ಸಂಭ್ರಮ.ಮಧ್ಯಾನ್ನ ಎಲ್ಲ ಮುಗಿಸಿ ರಾಯರು ಹಾಗೆಯೇ ಸೋಫಾಕ್ಕೆ ಒರಗಿ ಕುಳಿತಿದ್ದರು.ಬಂದಿದ್ದ ಸಂಭಂದಿಕರು ಒಬ್ಬೊಬ್ಬರಾಗಿ ಹೊರಟಿದ್ದರು.ಈಗ ರಾಯರ ಪಕ್ಕದಲ್ಲಿ ಭರತನು ಇದ್ದಾನೆ.ಅಲ್ಲೇ ಎದುರುಗಡೆ ಸೊಸೆ ಭವ್ಯಳು ಕೂತಿದ್ದಾಳೆ.ಹಾಗೆಯೆ ಹಿಂದಿನ ಘಟನೆಗಳನ್ನೂ ಹರಟೆ ಹೊಡೆಯುತ್ತಿದ್ದಾರೆ.ಎಲ್ಲರ ಮಕ್ಕಳು ಅಲ್ಲೇ ಆಕಡೆ,ಈಕಡೆ ಓಡಿ ಆಟವಾಡುತ್ತಿದ್ದಾರೆ.

ಅವರು ಹಾಗೆಯೆ ರಾಯರೆಡೆಗೆ ಬರುತ್ತಿದ್ದಾರೆ. "ಮೂರ್ತಿ ನಿನ್ನಂಥ ಸಾಧನೆ ಮಾಡಿದ ವ್ಯಕ್ತಿಯನ್ನು ನಾನು ಜೀವನದಲ್ಲೇ ನೋಡಿಲ್ಲಪ್ಪ,ಜೀವನದ್ದುದ್ದಕ್ಕು ನಿನಗೆ ಎದುರಾದದ್ದು ಬರಿಯ ಸಮಸ್ಯೆಗಳೇ,ಆದರೆ ಅದನ್ನೆಲ್ಲ ನೀನು ಎದುರಿಸಿದ ರೀತಿ,ನೀನು ಈಗ ಇಲ್ಲುಂಟು ಮಾಡಿದ ಒಂದು ಪ್ರೇಮದ ವಾತಾವರಣ,ಹಳ್ಳಿಗೆ ಮಾಡಿದ ಉಪಕಾರ,ಇಂದು ಈ ಊರಿನ ಜನ ನಿನ್ನ ಹೆಸರನ್ನು ಕೇಳಿದರೆ ಅಷ್ಟು ದೂರದಿಂದ ಕೈ ಮುಗಿಯುತ್ತಾರೆ,ನಿನ್ನ ಮೇಲೆ ಅದೆಂಥ ಪ್ರೀತಿ,ಗೌರವ,ಇಂದು ನಾನು ನನ್ನ ಮೊಮ್ಮಕ್ಕಳಿಗೆ ನಿನ್ನ ಕಥೆ ಹೇಳ್ತಾ ಇದ್ದೆನಪ್ಪ" ಎಂದರು.ರಾಯರ ಮುಖದಲ್ಲಿ ಅದೇ ಪ್ರಸನ್ನತೆ,ಅದೇ ನಿರ್ಲಿಪ್ತ ಭಾವ."ಎಲ್ಲ ನಿಮ್ಮಂತಹ ಹಿರಿಯರ ಆಶೀರ್ವಾದ"ಎಂದರು.ಎಲ್ಲ ನಡೆದುದು ಕೈಲಾಸನ ಉಪನಯನದಿಂದ ಮದುವೆಯ ನಡುವೆ ಅಂತರ ೧೭ ವರ್ಷ.ಅಂದು "ಎಂ ಟೆಕ್ " ಎಂದಾಗ ಸ್ವಲ್ಪ ಯೋಚಿಸು,ಇಂದು ನನ್ನ ಮೊಮ್ಮಕ್ಕಳಿಗೆ ನಿನ್ನ ಕಥೆ ಹೇಳ್ತಾ ಇದ್ದೇನೆ.ಬೆಳವಣಿಗೆ,ಕಾಲ ಎಷ್ಟು ಸಂಕುಚಿತ,ರಾಯರು ಹಾಗೆಯೇ ಯೋಚಿಸುತ್ತಿದ್ದರು.

***************

ಅಲಾರಂ ಹೊಡೆಯಲು ಸುರುವಾಯಿತು.ರಾಯರು ಧೀರ್ಘ ಕನಸಿಂದ ಎದ್ದರು.ಎದ್ದು ಸ್ನಾನ,ಕಾರ್ಯಕ್ರಮ ಎಲ್ಲ ಮುಗಿಸಿ ಹೊರಡಲು ಸಿದ್ದರಾದರು.ಫೋನ್ ರಿಂಗಾಯಿತು."ಬ್ರಹ್ಮರಾಯರಿಗೆ" ಪ್ರಜ್ಞೆ ಬಂದಿದೆ.ಸರಿ ರಾಯರು ಸಂಧ್ಯಾಳಿಗೆ ವಿಷಯ ತಿಳಿಸಿ ನೇರವಾಗಿ ಆಸ್ಪತ್ರೆಗೆ ಹೋದರು.

ಮುಂದುವರೆಯುವುದು ...........