Tuesday, December 8, 2009

ಮುಂದಿನ ಒಂದು ತಿಂಗಳ ಕಾಲ "ಲ್ಯಾಬ್ ಮತ್ತು ಸೆಮಿಸ್ಟರ್ ಪರೀಕ್ಷೆಗಳಿರುವುದರಿಂದ" ,"ಹೋರಾಟದ ಹಾದಿ" ಪ್ರಕಟ ಪಡಿಸಲು ಆಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ.
ನಿಮ್ಮವ
ರವಿ

Friday, November 27, 2009

ಹೋರಾಟದ ಹಾದಿ




ಅಮ್ಮ ನೋಡಲ್ಲಿ ಅಪ್ಪ ಕೂತಲ್ಲೇ ತೂಕಡಿಸುತ್ತಿದ್ದಾರೆ,ಶ್ ಮೆಲ್ಲ ಮೆಲ್ಲ ಎಂದು ಅರ್ಜುನ್ ಅಮ್ಮನ ಕೈ ಹಿಡಿದು ರಾಯರ ಪಕ್ಕ ಬಂದ. ಎ ಸುಮ್ಮನಿರು ಕಾಲೇಜಲಿ ಏನು ಕೆಲಸ ಇತ್ತೋ ಏನೋ, ನಿನಗೆ ಎಲ್ಲ ಮಕ್ಕಳಾಟಿಕೆ ಎಂದು ಶ್ರೀಮತಿ ಗದರಿಸಿ ಮೆಲ್ಲ ರಾಯರನ್ನು ಎಬ್ಬಿಸಿದರು.ಏನ್ರೀ ಇಲ್ಲಿ ಚೇರಲ್ಲಿ ಯಾಕೆ ತೂಕಡಿಸುವುದು ಒಳಗೆ ಮಂಚದಲ್ಲಿ ಮಲಗಬಾರದ ಎಂದರು.ಏನೋ ಯೋಚಿಸುತ್ತಿದ್ದ ರಾಯರಿಗೆ ಪಕ್ಕನೆ ಎಚ್ಚರವಾಯಿತು.ಒಂದು ಕ್ಷಣ ಏನಾಗುತ್ತಿದೆ,ಇದು ಕನಸೋ ನನಸೋ ಎಂದು ಗೊತ್ತಾಗಲಿಲ್ಲ,ರಾಯರು ತಮ್ಮ ಕಾಲೇಜಿನ ಜೀವನವನ್ನು ನೆನಪಿಸಿಕೊಂಡು ಕುಳಿತಿದ್ದರು,ಆಮೇಲೆ ನಿಧಾನಕ್ಕೆ ಸಾವರಿಸಿ ಗಂಟೆ ಎಷ್ಟಾಯಿತು ಎಂದರು.ಎಲ್ಲ ಮಾಸ್ತರುಗಳು ಹೀಗೆಯೇ ಕೂತಲ್ಲೇ ನಿದ್ದೆ ಮಾಡುವುದು,ನಾವು ಮಾತ್ರ ಅವರು ಮಾಡುವ, ಅಲ್ಲಲ್ಲ "ಕೊರೆ"ಯುವ ಪಾಠವನ್ನು ಕೇಳಬೇಕು,ಇದ್ಯಾವ ನ್ಯಾಯನಪ್ಪ ಎಂದು ಅರ್ಜುನ್ ಜೋರಾಗಿ ಹೇಳುತ್ತಿದ್ದ.ಗಂಟೆ ೪ ಮುಕ್ಕಾಲು ಆಯಿತು,ದನ ಒಂದೇ ಸಮನೆ ಕೂಗುತ್ತಿದೆ,ಎಂದು ಶ್ರೀಮತಿ ಎದ್ದು ಹೊರಟಳು.

ಹೌದು ಎಲ್ಲಿ ಫ್ರೆಂಡ್ಸ್ ?ಎನಿವತ್ತು ಆಟ ಇಷ್ಟು ಬೇಗ ನಿಲ್ತು ಎಂದು ರಾಯರು ಕೇಳಿದರು.ನೋಡಿ ಎಲ್ಲ ಗೊತಿದ್ದು ಗೊತ್ತಿಲ್ಲದವರ ಹಾಗೆ ನಾಟಕ ಮಾಡುವುದು ಎಂದ ಅರ್ಜುನ್.ನಾನು ನಿದ್ದೆ ಮಾಡುತ್ತಿದ್ದೆ ಎಂದು ನೀನೆ ಮೊದಲು ನೋಡಿದವನು ಇನ್ನು ನೀನು ಏನು ಮಾಡುತ್ತಿದ್ದೆ ಎಂದು ನನಗೆ ಹೇಗೆ ಗೊತ್ತಾಗಬೇಕು? ಎಂದರು.ಮತ್ತೆ ಚೆಂಡು ಬಿಸಾಡಿ ಹೋಯಿತು ಎಂದಾಗ ಅರ್ಜುನ್ ಕಣ್ಣಲ್ಲಿ ನೀರು ತುಂಬಿತ್ತು.ಛೀ ಇದಕ್ಕೆ ಯಾರದ್ರು ಅಳ್ತಾರೇನೋ ಬಾ ಹುಡುಕುವ ನಾನೂ ಬರ್ತೀನಿ ನೋಡೋಣ ಎಂದರು.ಒಳ್ಳೆ ಅಪ್ಪ, ನೋಡು ಅಮ್ಮನ ಹತ್ರ ಹೇಳಿದ್ದಕ್ಕೆ, ಒಳ್ಳೇದಾಯಿತು ಇನ್ನಾದ್ರು ಆಡೋದು ಸ್ವಲ್ಪ ಕಡಿಮೆ ಆಗಬಹುದು ಎಂದರು. ಏನು ಆಡೋದು ಅಷ್ಟು ದೊಡ್ಡ ತಪ್ಪ? ಹೀಗೆ ಅರ್ಜುನ್ ಒಂದರ ಹಿಂದೆ ಒಂದರಂತೆ ಮುದ್ದು ಮುದ್ದಾಗಿ ಪ್ರಶ್ನೆ ಕೇಳುತ್ತಲೇ ಇದ್ದ. ಆಡೋದು ತಪ್ಪಲ್ಲ ಆದರೆ ನೀನು ಮಧ್ಯಾನ್ನ ೩ ಗಂಟೆಗೆ ಅಡ್ತ ಇದ್ದೀಯಲ್ಲ ಅದು ತಪ್ಪು ಅಷ್ಟೆ ,ನೋಡು ಇಷ್ಟು ಹೊತ್ತಿಗೆ ಆಡಲು ಶುರು ಮಾಡಿದ್ದರೆ ಅಮ್ಮನು ಏನು ಹೇಳುತ್ತಿರಲಿಲ್ಲ ಎಂದರು.ಇಷ್ಟೆಲ್ಲಾ ಗಡಿಬಿಡಿ ಆಗುವಾಗ "ಪ್ರೀತಿ"ಯು ಒಳಗಿಂದ ಬಂದಳು.ಮೂವರು ಸೇರಿ ಚೆಂಡು ಹುಡುಕ ತೊಡಗಿದರು.ಪ್ರೀತಿ ಬಲು ಚೂಟಿ, ಅಲ್ಲೇ ಕಾರ್ ಶೆಡ್ಡು ಪಕ್ಕದಲ್ಲೇ ಇರುವ ಪೊದೆಯೊಳಗೆ ಚೆಂಡನ್ನು ಕಂಡಳು.ಕೂಡಲೇ ಅರ್ಜುನ್ ಬ್ಯಾಟಿಂದ ಪೊದೆಗೆ ಹೊಡೆದು ದಾರಿ ಮಾಡಿ ಚೆಂಡನ್ನು ತಂದನು.

ರಾಯರು ಹಾಗೆಯೆ ತೋಟದ ಕಡೆಗೆ ಹೊರಟರು."ಸೀನ" ತೋಟದಲ್ಲಿ ಕುಳಿತು ವೀಳ್ಯದೆಲೆ ತಿನ್ನುತ್ತಿದ್ದ.ರಾಯರನ್ನು ಕಂಡ ಕೂಡಲೇ ಗಡಿಬಿಡಿಯಿಂದ ಎದ್ದ,"ಮಿತ್ತ ತಟ್ಟುಗು ಪೂರ ಸೊಪ್ಪು ಆಂಡು ಅನ್ನೆರೆ"(ಮೇಲಿನ ತಟ್ಟಿಗೆ ಸೊಪ್ಪು ಆಯಿತು)ಎಂದ.
ರಾಯರು ಹಾಗೆ ನೋಡಿದರು,ಏನು ಸೊಪ್ಪು ಎಲ್ಲ ಬಹಳ ಕಡಿಮೆ ಹಾಕಿದ್ದಿ ಎನ್ನಲು ಸೀನ "ಅವು ತೂಲೆ ಅನ್ನೆರೆ ದುಂಬು ಮಾಂತ ಆಂಡ ಮಲ್ಲ ಕಟ್ಟ ಬರೊಂದು ಇತ್ತುಂಡು ಇತ್ತೆತ ಕಟ್ಟಲ ಅಂಚನೆ ಐಟು ಏನು ಎತುಂದು ಪಾದೊಲಿ" ಎಂದ(ಅದು ನೋಡಿ ಧಣಿಗಳೇ ಮೊದಲು ಆದ್ರೆ ಸೊಪ್ಪಿನ ಕಟ್ಟ ಬಹಳ ದೊಡ್ಡದಾಗಿ ಇರುತ್ತಿತು ಆದರೆ ಈಗಿನ ಕಟ್ಟವು ಅಷ್ಟೆ ,ಅದರಲ್ಲಿ ನಾನು ಎಷ್ಟೂಂತ ಹಾಕಲಿ)(ಸಾಮಾನ್ಯವಾಗಿ ದಕ್ಷಿಣ ಕನ್ನಡದ ಕಡೆ ಜನ ತುಳುವಲ್ಲೇ ಸಂಭಾಷಣೆ ನಡೆಸುತ್ತಾರೆ. ಇನ್ನು ಅಡಿಕೆ,ತೆಂಗು ಮುಂತಾದ ಬೆಳೆಗಳಿಗೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಸೊಪ್ಪು ,ಗೊಬ್ಬರ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ,ಮತ್ತೆ ತೋಟವನ್ನು ಮೇಲಿನ ತಟ್ಟು ,ಕೆಳಗಿನ ತಟ್ಟು ,ನಡು ತಟ್ಟು ಹೀಗೆಲ್ಲ ವಿಭಾಗಿಸಿರುತ್ತಾರೆ).ಇವನ ಹತ್ತಿರ ವಾದ ಮಾಡಿ ಪ್ರಯೋಜನವಿಲ್ಲ ಎಂಬುದು ರಾಯರಿಗೆ ಮೊದಲೇ ಗೊತ್ತಿತ್ತು,ಆದರು ಕಂಡಾಗ ಒಮ್ಮೆ ವಿಚಾರಿಸಿ ನೋಡುವುದು,ಆಗ ಅವನು ಹೊಸ ಹೊಸ ಐಡಿಯ ಕೊಡುತ್ತಾನೆ,ತನ್ನನ್ನು ತಾನು ಸಮರ್ಥಿಸುತ್ತಾನೆ,ಎಂದೂ ಬಿಟ್ಟು ಕೊಡುವುದಿಲ್ಲ.ಆಗಲೇ ಸೀನ ತನ್ನ ಹೊಸ ವರಸೆ ಶುರು ಮಾಡಿದ್ದ "ಆಂಡ ಈರು ದಾದೆ ಪನ್ಲೆ, ಬೇಲೆ ಪಂಡ ಈರೆನವೇ ಅಪ್ಪ,ಈರೆನ ದುಂಬು ಮಲ್ಲ ಅನ್ನೆರು ದಾಲ ಯಾರಂದು"(ನೀವೇನೆ ಹೇಳಿ ಕೆಲಸ ಅಂದ್ರೆ ನಿಮ್ಮದೇ ಅಪ್ಪ,ನಿಮ್ಮ ಮುಂದೆ ದೊಡ್ಡ ರಾಯರು ಏನೇನು ಇಲ್ಲ ಎಂಬರ್ತದ ಮಾತುಗಳನ್ನಾಡಿದ).ರಾಯರಿಗೆ ಅಂದಾಜು ಆಗತೊಡಗಿತು,ಇವತ್ತೇನೋ ಇವನ ಕೆಲಸ ಆಗಬೇಕಿದೆ ಅದಕ್ಕೆ ಹೀಗೆ ನೈಸ್ ಮಾಡುತ್ತಿದ್ದಾನೆ.ಏನಿವತ್ತು ಸೀನ ಬಹಳ ಕುಶಿಯಾಗಿರುವ ಹಾಗೆ ಇದೆ ಎಂದ."ದಾಲ ಇಜ್ಜಿ ಅನ್ನೆರೆ ಪಂಡ ಇನಿ ಒಂಜಿ ೫೦೦ ರೂಪಾಯಿ ಕೂಟುತು ಕೊರೋಡು ಮರ್ಮಾಯೇ ಎಲ್ಲೆ ಬರ್ಪೆಗೆ" ಎಂದ(ಏನಿಲ್ಲ ಇವತ್ತು ಒಂದು ೫೦೦ ರೂಪಾಯಿ ಜಾಸ್ತಿ ಸೇರಿಸಿ ಕೊಡಬೇಕು,ಅಳಿಯ ಮಗಳು ನಾಳೆ ಬರ್ತಾರೆ) .ರಾಯರ ಎಣಿಕೆ ನಿಜವಾಗಿತ್ತು.ಈ ಸೀನ ರಾಯರು ಸಣ್ಣವರಾಗಿರುವಾಗಲೇ ಕೆಲಸಕ್ಕೆ ಬರುತ್ತಿದ್ದ.ಹೀಗೆ ಏನಾದರು ಸುಳ್ಳು ಹೇಳಿ ದುಡ್ಡನ್ನು ತೆಗೆದುಕೊಂಡು ಹೋಗಿ ಕುಡಿದು ಹಾಳು ಮಾಡುತ್ತಿದ್ದ.ಆದರು ಅವನು ಹೇಳಿದ್ದಕಿಂತ ಸ್ವಲ್ಪ ಕಡಿಮೆ ಆದರು ರಾಯರು ಕೊಡುತ್ತಿದ್ದರು ಯಾಕೆಂದರೆ ಅವ ಬಿಟ್ಟು ಹೋದರೆ ಅಷ್ಟು ಕೆಲಸಕ್ಕೆ ಬರುವವರು ಇರಲಿಲ್ಲ.ಇದು ತಿಳಿದು ಸೀನನೆ ಬೇಕಾದ್ದಕಿಂತ ಒಂಚೂರು ಜಾಸ್ತಿಯೇ ಕೇಳುತ್ತಿದ್ದ.ಹೀಗೆ ಅವರ ನಡುವೆ ಸೋತವರು ಯಾರು ಗೆದ್ದವರು ಯಾರು ಎಂದು ಗೊತ್ತಾಗುತ್ತಿರಲಿಲ್ಲ.ಸರಿ ಎಂದು ರಾಯರು ೩೦೦ ರೂಪಾಯಿ ಕೊಟ್ಟರು.ಒಮ್ಮೆ ತೋಟಕ್ಕೆ ಎಲ್ಲ ಸುತ್ತು ಬಂದು ಕೆಲಸದ ಪ್ರಗತಿಯನ್ನು ನೋಡಿದರು.

ಮತ್ತೆ ಮನೆ ಕಡೆ ಬಂದಾಗ ಸಂಜೆ ೬ ೪೫.ಆದರು ಬ್ರಹ್ಮರಾಯರ ಪತ್ತೆಯೇ ಇಲ್ಲ.ಅಮ್ಮ ಅಪ್ಪ ಎಲ್ಲಿ ಹೋಗಿದ್ದಾರೆ ಎಂದು ಕೇಳಿದಾಗ,ಗೊತ್ತಿಲ್ಲ ಕಣೋ ಅವರಿಗೆಲ್ಲಿ ಹೇಳಿ ಹೋಗುವ ಅಭ್ಯಾಸ ಇದೆ ಎಂದರು.ಎಲ್ಲೆ ಹೋಗಿರಲಿ ಬರ್ತಾರೆ ಬಿಡು ಎಂದರು.
ರಾಯರು ಸ್ನಾನ ಎಲ್ಲ ಮುಗಿಸಿದರು,ಪೇಪರ್ ತಿರುವಿ ಹಾಕಿದರು,ಗಂಟೆ ೮ ಆಯಿತು,ಅದರೂ ಬ್ರಹ್ಮರಾಯರ ಪತ್ತೆಯೇ ಇಲ್ಲ.ಸಂದ್ಯ ನಿನ್ನ ಹತ್ರ ಏನಾದ್ರು ಹೇಳಿದ್ದಾರ ಎಂದರೆ ಇಲ್ಲಪ್ಪ ಎಂಬ ಉತ್ತರ ಬಂತು.ಮಧ್ಯಾನ್ನ ೨ ೩೦ಗೆ ಹೋಗಿದ್ದಾರೆ ಅದೇ ನೀವು ಬಂದ್ರಲ್ಲ ಆಗಷ್ಟೇ ಹೋದದ್ದು ಎಂದರು.ಇನ್ನ್ನು ಅರ್ದ ಗಂಟೆ ನೋಡುವ ಮತ್ತೆ ಏನಾದ್ರು ಮಾಡುವ ಎಂದರು ರಾಯರು.ಆದ್ರೆ ಏನು ಮಾಡುವುದು ಮೊದಲು ಅಡ್ಯನಡ್ಕಕ್ಕೆ ಒಂದು ಫೋನ್ ಮಾಡುವ ಎಂದು ರಾಯರು ಯೋಚಿಸುತ್ತ ಕುಳಿತರು.

ಆಗಲೇ ಫೋನ್ ರಿಂಗಾಗತೊಡಗಿತು.ರಾಯರು ಫೋನ್ ಅನ್ನು ಎತ್ತಿದರು,ಆ ಕಡೆಯಿಂದ ಏನೋ ಹೇಳತೊಡಗಿದರು.ರಾಯರು ಹೌದ?ಯಾವಾಗ?ಎಲ್ಲಿ? ಎನ್ನುತ್ತಿದ್ದರು ಮೈ ಎಲ್ಲ ಬೆವರಿ ಒದ್ದೆಯಾಯಿತು,ಫೋನ್ ರಿಸಿವರ್ ಹಿಡಿದಿದ್ದ ಕೈ ನಡುಗತೊಡಗಿತು.

ಮುಂದುವರೆಯುವುದು......

Friday, November 20, 2009

ಹೋರಾಟದ ಹಾದಿ




ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಬಂತು.ನಿರೀಕ್ಷೆಯಂತೆ ರಾಯರು ಮತ್ತೆ ಕಾಲೇಜಿಗೆ ಪ್ರಥಮ.ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂತು.ಪ್ರಾಂಶುಪಾಲರು, ಅಧ್ಯಾಪಕರ ಶುಭಾಶಯಗಳನ್ನು ಪಡೆದದ್ದೂ ಆಯಿತು.ತಲೆನೋವಿನ ಕಾಲೇಜು ಜೀವನಕ್ಕೆ ಸ್ವಲ್ಪ ವಿರಾಮ ಸಿಕ್ತ್ತು. "ಸಿ ಇ ಟಿ"ಯ ಪಲಿತಾಂಶ ಇನ್ನೂ ಬಂದಿರಲಿಲ್ಲ. ರಾಯರು ತಮ್ಮ ಬರವಣಿಗೆಗೆ, ಓದುವುದಕ್ಕೆ ಬೇಕಾದಷ್ಟು ಸಮಯ ಸಿಕ್ಕಿತು.ಇನ್ನೇನು ರಾಯರು ಇಂಜಿನಿಯರಿಂಗ್ ಮಾಡುವುದೆಂದು ಊರಲ್ಲೆಲ್ಲ ಸುದ್ದಿಯಾಯಿತು.

ಅಂದು ಮಂಗಳವಾರ ಮಧ್ಯಾನ್ನ ೨.೩೦ ಗಂಟೆಗೆ ಬ್ರಹ್ಮರಾಯರು ಮನೆಗೆ ಬಂದರು.ಉರಿ ಉರಿ ಬಿಸಿಲು ,ಬಂದವರೇ ರಾಯರನ್ನು ಬಳಿ ಕರೆದು ಮಾತಾಡಿಸತೊಡಗಿದರು.ಈ ಮಾಸ್ಟ್ರ ಕೆಲಸದ ಬಗ್ಗೆ ನಿನ್ನ ಅಭಿಪ್ರಾಯ ಏನು?ಎಂದರು.ಹಾ ಪರವಾಗಿಲ್ಲ ಗೊರ್ಮೆಂಟ್ ಸಂಬಳ,ತಲೆ ಬಿಸಿ ಇಲ್ಲ ಎಂದರು ರಾಯರು.ಬ್ರಹ್ಮರಾಯರ ಮುಖ ಅರಳಿತು,ನನ್ನ ದಿಕ್ಕಿನಲ್ಲೇ ಯೋಚನೆ ಮಾಡುತ್ತಿದ್ದಿಯ ಪರವಾಗಿಲ್ಲ ಎಂದರು.ಹೌದು ಈಗ ಈ ವಿಷಯ ಯಾಕೆ ಕೇಳಿದರು ಎಂದು ರಾಯರಿಗೆ ಅರ್ಥವಾಗಲಿಲ್ಲ.ಅದು ಇದು ಮಾತಾಡಿಸಿ ಬ್ರಹ್ಮರಾಯರು ಮೆಲ್ಲ ಜಾಗ ಖಾಲಿ ಮಾಡಿದರು.ರಾಯರು ತಮ್ಮ ಕೆಲಸ ಮುಂದುವರೆಸಿದರು.

ಇದು ನಡೆದು ಸರಿಯಾಗಿ ೩ ದಿನ ಕಳೆದು ೪ನೆ ದಿನ ಅಂದರೆ ಶನಿವಾರ ಮಧ್ಯಾನ್ನ ಮತ್ತೆ ಬ್ರಹ್ಮರಾಯರು ಬಂದರು.ಆದರೆ ಈಗ ಕೈಯಲ್ಲಿ ೪-೫ ಕಾಲೇಜಿನ "ಪ್ರೋಸ್ಪೆ ಟಸ್ ",ರಾಯರನ್ನು ಕರೆದು ನಾನು ಎಲ್ಲ ಕಡೆ ವಿಚಾರಿಸಿದೆ ಈ ಕಾಲೇಜುಗಳಲ್ಲಿ ನಿನಗೆ ಆರಾಮವಾಗಿ ಸೀಟು ಸಿಗಬಹುದು ನೀನು "ಬಿ ಎಸ್ ಸಿ"ಯನ್ನು ಆರಾಮವಾಗಿ ಮಾಡಬಹುದು ಮನೆಯಿಂದಲೇ ಹೋಗಿ ಬಂದು ಮಾಡಬಹುದು ಎಂದರು.ರಾಯರಿಗೆ ಒಂದು ಕ್ಷಣ ಏನು ಆಗುತ್ತಿದೆ ಎಂದೆ ಗೊತ್ತಾಗಲಿಲ್ಲ ನಾನೇನು ಎಲ್ಲರು ಇವನು ಇಂಜಿನಿಯರಿಂಗ್ ಮಾಡಬಹುದು ಎಂದು ಯೋಚಿಸುತ್ತಿರುವಾಗ ಇದು ಯಾವುದೋ "ಕಾಲೇಜಿನ ಪ್ರೋಸ್ಪೆಟಸ್ " "ಬಿ ಎಸ್ ಸಿ" ,"ಮನೆಯಿಂದ ಹೋಗಿ ಬಾ" ಏನಿದು?ರಾಯರು ಅಲ್ಲೇ ಮಂಕು ಬಡಿದವರಂತೆ ನಿಂತು ಬಿಟ್ಟರು.ಆಮೇಲೆ ಸುಧಾರಿಸಿ ನನಗೆ "ಇಂಜಿನೀಯರಿಂಗ್" ಮಾಡಬೇಕೆಂದಿದೆ ಎಂದರು.ಬ್ರಹ್ಮರಾಯರು ಕಿವಿಗೆ ಹಾಕಿಕೊಳ್ಳಲಿಲ್ಲ,ನನಗೆ ಹೇಳಿಯೇ ಇಲ್ಲ ಎಂಬಂತೆ ತೋಟಕ್ಕೆ ಹೊರಟು ಹೋದರು.

ಇದೆಲ್ಲವನ್ನೂ ದೂರದಲ್ಲೇ ನಿಂತು ರಾಯರ ತಾಯಿ ನೋಡುತ್ತಿದ್ದರು,ಏನು ಹೇಳಲಿಲ್ಲ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದರು.ಬ್ರಹ್ಮರಾಯರು ಇವರ ಹತ್ತಿರ ಹೇಗೆ ನಮ್ಮ ಮೂರ್ತಿಗೆ ಪುತ್ತೂರಲ್ಲೇ ಸೀಟು ಸಿಗಬಹುದು ಎಂದಾಗ ಕೋಪ ತಡೆಯದೆ ಅಲ್ಲ ಅವನಿಗೆ "ಇಂಜಿನೀಯರಿಂಗ್" ಮಾಡಬೇಕೆಂದಿದೆ ನೀವ್ಯಾಕೆ ಏನೇನೋ ಹೇಳಿ ಅವನ ತಲೆ ಕೆಡಿಸುತ್ತಿದ್ದೀರಿ ಎಂದು ಆಕ್ಷೇಪಿಸಿದಾಗ, ಎಲ್ಲಿಗೆ "ಇಂಜಿನೀಯರಿಂಗ್"? ಇರುವುದು ಒಬ್ಬ ಅವನು ದೂರಕ್ಕೆ ಕಲಿಯಲು ಹೋದರೆ ಇಲ್ಲಿ ನಮಗ್ಯಾರಿದ್ದರೆ ಎಂದರು.ರಾಯರ ತಾಯಿಯು ಬಿಟ್ಟು ಕೊಡಲಿಲ್ಲ,ನಮ್ಮ ಸ್ವಾರ್ಥಕ್ಕೆ ಅವನು ಯಾಕೆ ಬಲಿಯಾಗಬೇಕು ಅವನು ಹೋಗಲಿ, ಅವನಿಗೆ ಇಷ್ಟ ಇದ್ದದ್ದನ್ನು ಕಲಿಯಲಿ ಸುಮ್ಮನೆ ಯಾಕೆ ಹಠ ಎಂದರು.ಹೀಗೆ ರಾತ್ರಿಯೆಲ್ಲಾ ವಾದ ವಿವಾದದಲ್ಲೇ ಕಳೆಯಿತು.

ಬ್ರಹ್ಮರಾಯರಿಗೆ ಮಗ ತನ್ನಂತೆ ಅಧ್ಯಾಪಕನಾಗಬೇಕು ಎಂಬ ಬಯಕೆ.ಇತ್ತ ರಾಯರಿಗೆ ನಾನು ಕಂಪನಿಗೆ ಹೋಗಬೇಕು, ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು ಎಂಬಾಸೆ.ಅಮ್ಮನದು ತಟಸ್ತ ಧೋರಣೆ,ಮಗನಿಗೆ ಏನಾಗಬೇಕೋ ಅದಕ್ಕೆ ಹೋಗಲಿ ಒಟ್ಟು ಮಕ್ಕಳ ಮನಸ್ಸಿಗೆ ನೋವಾಗಬರದು ಎನ್ನುವ ನೀತಿ.ಬ್ರಹ್ಮರಾಯರಿಗೆ ಒಮ್ಮೆ ಒಂದು ಆಗಬೇಕು ಎಂದು ಎನಿಸಿದರೆ ಅದನ್ನು ಏನಾದರು ಮಾಡದೇ ಬಿಡುವವರಲ್ಲ.ಅವರ ಪತ್ನಿಯು ಹಾಗೆ,ಒಮ್ಮೆ ಹಟಕ್ಕೆ ಬಿದ್ದರೆ ಸಾಧಿಸದೆ ಬಿಡುವವರಲ್ಲ.ಆಮೇಲೆ ಬ್ರಹ್ಮರಾಯರ ಮಾತು ನಡೆಯುವುದಿಲ್ಲ.ಆದರೆ ರಾಯರು ಹಾಗಲ್ಲ,ಯಾವುದೇ ಒಂದು ಬೇಕೇ ಬೇಕು ಎಂದು ಹಠ ಮಾಡಿದವರಲ್ಲ.

ಬ್ರಹ್ಮರಾಯರಿಗೆ ಮಗ ದೂರಕ್ಕೆ ಹೋಗುವುದು ಒಂಚೂರು ಇಷ್ಟ ಇಲ್ಲ.ಅವನು ದೂರ ಹೋದರೆ ಇಲ್ಲಿ ನಮಗೆ ಯಾರಿದ್ದಾರೆ,ಏನಾದರು ಆದರೆ ಅಥವಾ ಅವನಿಗೆ ಅಲ್ಲಿ ಏನಾದರು ಆದರೆ ಯಾರಿದ್ದಾರೆ,ಪ್ರಾಣದ ಭಯ.ಒಟ್ಟಲ್ಲಿ ಮಗ ಕಣ್ಣ ಮುಂದೆ ಬೇಕು.ಇತ್ತ ರಾಯರೋ ನವಯುವಕ ಹೊಸ ಹೊಸ ಆಸೆ ಮನದಲ್ಲಿ ಮೂಡುವ ಸಮಯ.ರಾಯರಿಗೆ ಅಧ್ಯಾಪನ ವೃತ್ತಿಯಲ್ಲಿ ಏನೇನೂ ಆಸಕ್ತಿ ಇಲ್ಲ ಅದು ಏನಿದ್ದರು ೪೦ ವರ್ಷ ಕಳೆದ ಮೇಲೆ ಎಂಬುದು ಅವರ ಯೋಚನೆ.ಅದೂ ಅಲ್ಲದೆ ಆಗಲೇ ಗೊರ್ಮೆಂಟ್ ಉದ್ಯೋಗ ಸಿಗುತ್ತದೆ ಎಂದು ಯಾವುದೇ ಭರವಸೆ ಇಲ್ಲ.ಉದ್ಯೋಗವಾಗದಿದ್ದರೆ ಖರ್ಚಿಗೆ ಸಾಕಗುವಸ್ಟು ತೋಟವು ಇಲ್ಲ.ಅಲ್ಲಿ ಇಲ್ಲಿ ಒಂದೋ ಇಲ್ಲವೇ ಎರಡು ಸಾವಿರಕ್ಕೆ ಕಾಲೇಜಿಗೆ ಗೌರವ ಅಧ್ಯಾಪಕರಾಗಿ ಕೆಲಸ ಮಾಡಬೇಕು.ಯಾರಿಗೆ ಬೇಕು ಈ ತಾಪತ್ರಯ,ಚೆನ್ನಾಗಿ ಕಲಿತು ಒಂದು ಒಳ್ಳೆ ಕಂಪೆನಿಗೆ ಸೇರಿದರೆ ಆಯಿತು ಮುಂದೆ ಹೇಗಿದ್ದರೂ ಮನೆ ಮಠ ನೋಡುವುದು ಇದ್ದೆ ಇದೆ,ಈಗ ತಂದೆ ತಾಯಿ ಗಟ್ಟಿ ಇದ್ದಾರೆ,ಅವರಿಗೆ ಬೇಕಾದ ಹಾಗೆ ಮನೆ ತೋಟ ನೋಡಿಕೊಳ್ಳಲಿ ಎಂದು ರಾಯರು ಯೋಚಿಸಿದ್ದರು.

ಆದರೆ ಯಾವಾಗ ಬ್ರಹ್ಮರಾಯರಿಗೆ ತಾಯಿಯ ಪೂರ್ಣ ಬೆಂಬಲ ಮಗನಿಗೆ ಇದೆ ಎಂದು ಗೊತ್ತಾಯಿತೋ,ಅಂದಿನಿಂದ ಅವರು ಬಹಳ ಜಾಗ್ರತರಾದರು.ಏನೇ ಆದರು ಅವ ಇಂಜಿನೀಯರಿಂಗ್ ಮಾಡುವುದು ಬೇಡ,ಎಂದು ಮನದಲ್ಲೇ ನಿರ್ಧರಿಸಿದರು.ಬಹಳ ಜಾಗರೂಕತೆಯಿಂದ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಿದರು.ಮಗನನ್ನು ತೋಟಕ್ಕೆ ಕರೆಯುವುದು ಅಲ್ಲಿ ಟೀಚಿಂಗ್ ಬಗ್ಗೆ ಮಾತಾಡುವುದು,ಭಾಷಣ ಮಾಡುವುದು ಇವೆಲ್ಲವೂ ತಾಯಿಯ ಗಮನಕ್ಕೆ ಬಾರದಂತೆ ನಡೆಯಿತು.ರಾಯರಿಗೂ ಕೇಳಿ ಕೇಳಿ ಬೇಸತ್ತಿತು.ಅವರು ಮನದಲ್ಲೇ ಏನೋ ಒಂದು ಲೆಕ್ಕಾಚಾರ ಹಾಕಿದರು.ಆದರೆ ತಮ್ಮ ಅಭಿಪ್ರಾಯ ತಿಳಿಸಲಿಲ್ಲ,ಇತ್ತ "ಸಿ ಇ ಟಿ" ರಿಸಲ್ಟ್ ಬಂತು.ರಾಯರು ಎಷ್ಟು ಬೇಸತ್ತಿದರೆಂದರೆ ತಮ್ಮ ರಿಸಲ್ಟ್ ನ್ನು ನೋಡಲೇ ಹೋಗಲಿಲ್ಲ.

ಬ್ರಹ್ಮರಾಯರು ಹೋಗಿ ನೋಡಿ ಬಂದರು.ಈಗ ಅವರ ಹ್ರದಯದ ಬಡಿತ ಮತ್ತಷ್ಟು ಹೆಚ್ಚಾಯಿತು.ಒಳ್ಳೆ ಯ ರಾಂಕಿಂಗ್ ಪಡೆದಿದ್ದ ಕಾರಣ ಈಗ ಬೇರೆಯವರು ನನ್ನ ಮೇಲೆ ಒತ್ತಡ ತರಬಹುದು,ಏನಪ್ಪಾ ಮಾಡುವುದು? ನಾನು ಕಳಿಸದಿದ್ದರೆ ಹೇಗೆ? ಹೀಗೆ ಯೋಚನೆಯಲ್ಲೇ ೩ ದಿನ ಕಳೆದರು.ಏನೇ ಆದರು ಮೊದಲು ಮೂರ್ತಿಯ ಬಾಯಿಂದಲೇ ನನಗೆ ಇಂಜಿನೀಯರಿಂಗ್ ಬೇಡ ಎಂದು ಹೇಳಿಸಬೇಕೆಂದು ತೀರ್ಮಾನಿಸಿದರು.ಆಗ ನನ್ನ ಕೆಲಸವೂ ಸುಲಭ ಎಂಬ ತೀರ್ಮಾನಕ್ಕೆ ಬಂದರು.ಬ್ರಹ್ಮರಾಯರು ತಮ್ಮ ಕೊನೆಯ ಪ್ರಯತ್ನವೆಂಬಂತೆ ಮಗನನ್ನು ಕರೆದುಕೊಂಡು ವಿಟ್ಲದ "ಪಂಚಮಿ" ಹೋಟೆಲಿಗೆ ಹೋದರು.೨ ಟೀ ಎಂದರು.

ಬ್ರಹ್ಮರಾಯರು "ಇಮೊಶನಲ್ ಬ್ಲಾಕ್ಮೇಲ್" ಪ್ರಾರಂಭಿಸಿದರು.ನೋಡು ನನ್ನಲ್ಲಿರುವ ದುಡ್ಡು ಇಂಜಿನೀಯರಿಂಗ್ ಗೆ ಎಲ್ಲ ಸಾಕಾಗಲ್ಲ,ಅಮ್ಮನಿಗೆ ಅಸ್ಟು ಹುಷಾರಿಲ್ಲ,ನನಗು ವಯಸ್ಸಾಗುತ್ತ ಬಂತು,ಈಗ ನೀನು "ಬಿ ಎಸ್ ಸಿ" ಮಾಡಿದರೆ ಉಪಕಾರವಾಗುತ್ತಿತ್ತು.ಮತ್ತೆ ನಿನಗೆ ಇಂಜಿನೀಯರಿಂಗ್ ಮಾಡಲೇಬೇಕೆಂದಿದ್ದರೆ ಮಾಡಬಹುದು,ಆತ್ಮಹತ್ಯೆ ಎಲ್ಲ ಮಾಡೋಕೆ ಹೋಗಬೇಡ, ಮತ್ತೆ ನನಗೆ ಬೇರೆ ದಾರಿ ಇಲ್ಲ,ಸಾಲವ ಮೂಲವ ಹೇಗಾದರೂ ಕಳಿಸುತ್ತೇನೆ,ನೋಡು ಏನೂಂತ ಆಲೋಚನೆ ಮಾಡು ಎಂದರು.ಹೀಗೆ ಬ್ರಹ್ಮರಾಯರು ಒಂದೊಂದೇ ಮನೆ ಸಂಕಟವನ್ನು ಮಗನ ಮುಂದೆ ಹೇಳಿದರು,ಅತ್ತರು,ದುಖಿ:ಸಿದರು.
ಸುಮಾರು ೨ ಗಂಟೆಗಳ ಕಾಲ ನಡೆದ ನಾಟಕದಲ್ಲಿ ಕೊನೆಗೆ ಬ್ರಹ್ಮರಾಯರು ಗೆದ್ದರು.ವಿಟ್ಲದ ಹೋಟೆಲಿನಲ್ಲಿ ನಡೆದ ಈ ಘಟನೆ ಇಂದಿಗೂ ಯಾರಿಗೂ ಗೊತ್ತಿಲ್ಲ.ಅದು ಒಂದು ನಿಘೂಡ ಕತೆಯಾಗಿಯೇ ಉಳಿದಿದೆ.

ಜೂನ್ ೧೨ನೆ ತಾರೀಕಿನಂದು ರಾಯರು ಪುತ್ತೂರಿನ ಮಹಾರಾಜ ಕಾಲೇಜಿನಲ್ಲಿ "ಬಿ ಎಸ್ ಸಿ"ಗೆ ಸೇರಿದರು. "ಇಲೆಕ್ಟ್ರೋನಿಕ್ಸ್ ಅಂಡ್ ಕಮ್ಯುನಿಕೆಶನ್" ವಿಷಯವನ್ನು ಆಯ್ದುಕೊಂಡರು.ಅಮ್ಮ ಕೇಳಿದಾಗ ಎಂಜಿನಿಯರಿಂಗ್ ಗೆ ಎಲ್ಲ ತುಂಬ ದುಡ್ಡು ಬೇಕಲ್ಲ,ನಂಗೆ "ಬಿ ಎಸ್ ಸಿ" ಆದೀತು ಎಂದರು.ಎಲ್ಲಿಯೂ ತಂದೆ ಅತ್ತದ್ದು, ಪೀಡಿಸಿದ್ದು ಹೇಳಲಿಲ್ಲ.ಅಮ್ಮನು ಏನೋಪ್ಪ ನಿನ್ನಿಸ್ಟ ಎಂದರು.ಊರಲ್ಲಿ ಬ್ರಹ್ಮರಾಯರು ದುಡ್ಡಿಲ್ಲ ಎಂದರಂತೆ ಎಂದು ಸುದ್ದಿಯಾಯಿತು.ಬಿಸಿ ಬಿಸಿಗೆ ೪ ದಿನ ಊರಲ್ಲಿ ಆಡಿಕೊಂಡರು,ಛೆ ಒಳ್ಳೆ ಹುಡುಗ ಎಂಜಿನಿಯರಿಂಗ್ ಗೆ ಕಳಿಸಬಹುದಿತ್ತು ಎಂದರು.ಮತ್ತೆ ಎಲ್ಲರಿಗು ಅವರವರ ಪಾಡು.

ಆದದ್ದಕ್ಕೆ ರಾಯರು ಮರುಗಲಿಲ್ಲ,ಮುಂದಿನ ಹೆಜ್ಜೆಯ ಕುರಿತು ಯೋಚಿಸತೊಡಗಿದರು.ಹಾಗಾದರೂ ತಂದೆಗೆ ಸಮಾಧಾನವಾಯಿತಲ್ಲ ಎಂಬ ತೃಪ್ತಿ ಅವರದು.ತಂದೆಯ ಮಾತನ್ನು ನಡೆಸಿದ ಆ ಶ್ರೀರಾಮನೆ ಇವರೇನೋ ಎಂಬಂತಿತ್ತು ಅವರ ನಡೆ ನುಡಿ."ಬಿ ಎಸ್ ಸಿ" ತರಗತಿಗಳು ಪ್ರಾರಂಭವಾದವು.ಬೆಳಿಗ್ಗೆ ೯ ರಿಂದ ಸಂಜೆ ೩ರವರೆಗೆ ಕ್ಲಾಸ್ ಇತ್ತು.ಆದರೆ ಈಗ ಮಾತ್ರ ರಾಯರಿಗೆ ಸ್ವಲ್ಪ ತೊಂದರೆ ಆಗಲು ಸುರುವಾಯಿತು.

ರಾಯರ ಬೆಳಗ್ಗಿನ ಸುಖ ನಿದ್ದೆಗೆ ಬಂಘ ಬಂದಿತ್ತು.೭.೩೦ಗೆ ಅಡ್ಯನಡ್ಕದಿಂದ ಬಸ್ ಇತ್ತು,ಅಲ್ಲಿಗೆ ತಲುಪಲು ಕನಿಸ್ತ್ತ ಎಂದರು ೨೦ ನಿಮಿಷ ಬೇಕಿತ್ತು,ಹಾಗಾಗಿ ರಾಯರು ೭ ಗಂಟೆಗೆ ಮನೆ ಬಿಡಬೇಕಿತ್ತು.ಸ್ಟೂಡೆಂಟ್ ಗಳು ಬಸ್ ಲ್ಲಿ ಹೋಗುವ ಗಮ್ಮತ್ತೆ ಬೇರೆ,ಸ್ಟೆಪ್ ಮೇಲೆ ನಿಂತುಕೊಂಡು ಬ್ಯಾಗನ್ನು ಇನ್ಯಾರೋ ಕುಳಿತವರ ಮೇಲೆ ಹಾಕಿ ರೈಟ್ ರೈಟ್ ಪೋಯಿ ಪೋಯಿ(ಹೋಗುವ) ಎಂದು ಕಿರುಚುತ್ತ ಹೋಗುತ್ತಿದ್ದರು.ಸುಮಾರು ೧ ಗಂಟೆ ಬಸ್ ಲ್ಲಿ ಪ್ರಯಾಣ ೮.೩೦ ಗೆ ಪುತ್ತೂರು,ಅಲ್ಲಿಂದ ೧೦ ನಿಮಿಷದ ದಾರಿ ಕಾಲೇಜಿಗೆ. ಇದು ನಿತ್ಯದ ರೂಢಿ.ಸಂಜೆ ಮನೆಗೆ ತಲುಪುವಾಗ ೫.೩೦ ಆಗುತ್ತಿತ್ತು.

ರಾಯರು ಕಾಲೇಜಿನಲ್ಲಿ ಬಹಳ ಬೇಗನೆ ಪ್ರವರ್ಧಮಾನಕ್ಕೆ ಬಂದರು.ರಾಯರ ಕವನ,ಕತೆಗಳು ಇಂಗ್ಲಿಷ್,ಹಿಂದಿ ಭಾಷೆಗಳಲ್ಲೂ ಬಂದವು.ಕಾಲೇಜಿನ "ಚಿಗುರು" ಎಂಬ ಸಾಹಿತ್ಯ ಸಂಘ ವನ್ನು ಸೇರಿದರು."ಎಡಿಟೋರಿಯಲ್ ಬೋರ್ಡ್"ನ ಮೆಂಬರ್ ಆದರು.
ಕಾಲೇಜಿನ ಸ್ಪರ್ಧೆಗಳಲ್ಲಿ ಎಲ್ಲ ರಾಯರ ಸಾಧನೆ ಮೊದಲಿನ ಹಾಗೆಯೆ ಮುಂದುವರೆದಿತ್ತು.ನಾಯಕತ್ವ ಗುಣವು ಎಲ್ಲರ ಮೆಚ್ಚುಗೆ ಗಳಿಸಿತ್ತು .ಆದರೆ ರಾಯರು ಯಾವುದೇ "ಸಿ ಆರ್" ಹುದ್ದೆಗೆ ನಿಲ್ಲಲಿಲ್ಲ.ರಾಯರದು ಏನಿದ್ದರು ಸಾಂಸ್ಕೃತಿಕ ವಿಚಾರಗಳಲ್ಲಿ ಬಹಳ ಆಸಕ್ತಿ."ಸಿ ಅರ್", "ವಿ ಪಿ" ಮುಂತಾದ ರಾಜಕೀಯಗಳಿಂದ ರಾಯರು ದೂರವೇ ಉಳಿದಿದ್ದರು.ಕಾಲೇಜಿನಲ್ಲಿ ನಡೆಯುವ ರಾಜಕೀಯದಿಂದ ರಾಯರು ಬೇಸತ್ತಿದ್ದರು.ಆದರೆ ಏನು ಮಾಡಲು ಆಗುವುದಿಲ್ಲ,ಇದೆಲ್ಲ ಜೀವನದ ಒಂದು ಭಾಗ ಎಂದು ನಂಬಿದ್ದರು.

ರಾಯರು ನನಗೊಂದು ಕ್ಯಾಮರ ಬೇಕೆಂಬ ಬೇಡಿಕೆಯನ್ನು ಬಹಳ ದಿನದ ಹಿಂದೆಯೇ ಇಟ್ಟಿದ್ದರು.ಆದರೆ ಇದೆಲ್ಲ ಒಂದೆರಡು ದಿನದಲ್ಲಿ ಆಗುವುದಲ್ಲ,ದಿನ ಕೇಳಿ,ಕೇಳಿ ಕೊನೆಗೆ ಒಂದು ತಿಂಗಳ ನಂತರ ಕ್ಯಾಮೆರ ದೊರೆಯಿತು.ಮುಂದೆ ರಾಯರಿಗೆ ಕ್ಯಾಮೆರ ಹಿಡಿದುಕೊಂಡು "ಕಲ್ಲಪದವು" ಗುಡ್ಡದಲ್ಲಿ ತಿರುಗುವುದೇ ಕೆಲಸ.ಭಾನುವಾರವಂತೂ ಕಾಣಲೇ ಸಿಗುತ್ತಿರಲಿಲ್ಲ,ತಲೆಯಲ್ಲಿ ಒಂದು ಕ್ಯಾಪು,ಕೈಯಲ್ಲಿ ಕ್ಯಾಮರ ಹಿಡಿದು ಪಕ್ಕದಲ್ಲೇ ಇದ್ದ ಕಾಡಿನಲ್ಲಿ ಸುತ್ತಲು ಹೋಗುತ್ತಿದ್ದರು.ನಿಸರ್ಗದ ರಮಣೀಯ ನೋಟವನ್ನು ತನ್ನ ಕ್ಯಾಮೆರದಲ್ಲಿ ಸೆರೆ ಹಿಡಿದರು.ಹೀಗೆ ನಡೆಯುತ್ತಿರಬೇಕಾದರೆ ಕಾಲೇಜಿನಲ್ಲಿ ಒಂದು ಛಾಯಾಗ್ರಹಣ ಸ್ಪರ್ಧೆ ಏರ್ಪಟ್ಟಿತು,ಅದಕ್ಕೆ ರಾಯರು ಸಿದ್ದವಾದರು.ಮನೆಯ ಮುಂದೆ ಇದ್ದ ಹೂವಿನ ಮೇಲೆ ತೆಳುವಾಗಿ ಪೆವಿಕಾಲ್ ಗಮ್ ಹಾಕಿ ಕಾದು ಕುಳಿತರು.ಹೂವಿನ ಮೇಲೆ ವಿವಿಧ ಭಂಗಿಗಳಲ್ಲಿ ಕುಳಿತ ದುಂಬಿಯ ಫೋಟೋ ತೆಗೆದರು.ಸ್ಪರ್ಧೆಗೆ ಕಳಿಸಿದರು,ಪ್ರಥಮ ಬಹುಮಾನ ಬಂದದ್ದೂ ಆಯಿತು.ಹೀಗೆ ರಾಯರು ನೋಡನೋಡುತ್ತಿದ್ದಂತೆಯೇ ಫೋಟೋಗ್ರಾಫರ್ ಆಗಿ ಹೋದರು.

ಆಗ ಅಡ್ಯನಡ್ಕದಲ್ಲಿ "ಕರಾಟೆ ಕ್ಲಾಸ್" ಭಾರಿ ಪ್ರಚಾರ ಪಡೆಯಿತು.ರಾಯರಿಗೂ ಇಂಟರೆಸ್ಟ್ ಬಂತು.ರಾಯರು ಅದರ ಬಗ್ಗೆ ಕೇಳಲು ಹೋದರು.ಮೊದಲು ಒಂದು ಜೊತೆ ಬಿಳಿ ಪ್ಯಾಂಟು ಅಂಗಿ ರೆಡಿ ಮಾಡಿ ಬನ್ನಿ ಎಂದರು.ಪ್ಯಾಂಟು ಅಂಗಿ ಹೋಲಿಸಿದ್ದು ಆಯಿತು.೨೫೦೦ ಫೀಸ್ ನೀಡಿ ರಾಯರು ಸೇರಿದರು.ಬರುವ ಭಾನುವಾರದಿಂದ ಕ್ಲಾಸ್ ಪ್ರಾರಂಭ.ಈಗ ರಾಯರು ಮನೆಯಲ್ಲಿ ಬಿಳಿ ಬಟ್ಟೆ ಹಾಕಿ ಏನೋ ಮೊದಲೇ ಗೊತ್ತಿದ್ದವರ ಹಾಗೆ ಅಭ್ಯಾಸ ಮಾಡುತ್ತಿದ್ದರು.ಉತ್ಸಾಹದ ಭರದಲ್ಲಿ ಅರ್ಧ ಗಂಟೆ ಮೊದಲೇ ಹೋಗಿ ಕಾದು ಕುಳಿತರು.ರಾಯರಂತೆ ಇನ್ನು ಹತ್ತು ಇಪ್ಪತ್ತು ಜನ ಬಂದಿದ್ದರು,ಎಲ್ಲರೂ ಕಾದರು,೧ ಗಂಟೆ ಕಳೆಯಿತು,ಆದರು ಮಾಸ್ತರ ಪತ್ತೆಯೇ ಇಲ್ಲ.ಇನ್ನು ಕಾದು ಪ್ರಯೋಜನವಿಲ್ಲ ಎಂದು ರಾಯರು ಮನೆಗೆ ಬಂದರು.ಮುಂದಿನ ವಾರವೂ ಇದೆ ಪರಿಸ್ತಿತಿ.ಈಗ ಎಲ್ಲರಿಗೂ ನಿಧಾನವಾಗಿ ಅರ್ಥವಾಗತೊಡಗಿತು,ನಾವೆಲ್ಲ ಟೊಪ್ಪಿ ಹಾಕಿಸಿಕೊಂಡಿದ್ದೇವೆ ಎಂದು.ರಾಯರ ಕರಾಟೆ ಕಲಿಯಬೇಕೆಂಬ ಅಸೆ ಹೀಗೆ ಅರ್ಧಕ್ಕೆ ನಿಂತುಹೋಯಿತು.ಹೋಲಿಸಿದ ಅಂಗಿ ಹಾಕಲು ಆಗದೆ ಬಿಟ್ಟು ಬಿಡಲು ಆಗದ ಪರಿಸ್ತಿತಿ ರಾಯರದು.ಇನ್ನು ಎಷ್ಟು ಯೋಚನೆ ಮಾಡಿಯೂ ಪ್ರಯೋಜನವಿಲ್ಲ,ಒಂದೆರಡು ದಿನ ತಲೆಬಿಸಿ ಮಾಡಿ ಮತ್ತೆ ಮರೆತು ಬಿಟ್ಟರು.
ಇದು ರಾಯರನ್ನು ಜೀವನದಲ್ಲಿ ಮುಂದೆಂದೂ ಟೊಪ್ಪಿ ಹಾಕಿಸದಸ್ಟು ಜಾಗೃತರನ್ನಾಗಿ ಮಾಡಿತ್ತು.

ಕಾಲೇಜಿನ ಭಾಗವಾಗಿ "ಪ್ರಾಣ ಚೈತನ್ಯ ಚಿಕಿತ್ಸೆ " ಶಿಬಿರ ನಡೆಯಿತು.ರಾಯರು ಉತ್ಸಾಹದಿಂದ ಪಾಲ್ಗೊಂಡರು.ಇದನ್ನು ಕಲಿತರು.ಹೀಗೆ ಏನೆಲ್ಲಾ ಕಲಿಯಲು ಸಾಧ್ಯವೂ ಅದನ್ನೆಲ್ಲ ಕಲಿಯುತ್ತ ಸಾಗಿದರು."ಪ್ರವಾಸ" ರಾಯರ ಅಚ್ಚುಮೆಚ್ಚಿನ ಚಟುವಟಿಕೆಗಳಲ್ಲೊಂದು.ಸಹಪಾಠಿಗಳ ಜೊತೆ ಸೇರಿ ಪ್ರವಾಸವನ್ನು ಆಯೋಜಿಸಿದರು."ಕುಮಾರ ಪರ್ವತ"ವೇರಿದರು.ಊರೆಲ್ಲ ಸುತ್ತಿದರು.ಒಳ್ಳೆಯ ಸಂಘಟನೆ ಮಾಡಿದರು.ಫೋಟೋ ತೆಗೆದರು.ಪ್ರವಾಸ ಕಥನ ಬರೆದರು.ಹೀಗೆ ೩ ವರುಷಗಳ ಈ ಕಾಲೇಜು ಜೀವನದ ಪ್ರತಿ ಕ್ಷಣವನ್ನು ಆನಂದಿಸಿದರು.ಎಂದು ಹಿಂದಿನದನ್ನು ಯೋಚಿಸಿ ಮರುಗಲಿಲ್ಲ,ಬದಲಾಗಿ ಮುಂದೆ ಒಳ್ಳೆ ದಿನ ಬರುತ್ತವೆ ಎಂದೆ ಕನಸು ಕಂಡರು."ಕುಮಾರ ಪರ್ವತ ಚಾರಣ ಪುರಾಣಂ" ಲೇಖನ "ಪ್ರಜಾವಾಣಿ"ಯಲ್ಲಿ ಪ್ರಕಟವಾಯಿತು. ಜನಮನ್ನಣೆ ಗಳಿಸಿತು.ಹೀಗೆ ರಾಯರು ಕವಿ,ಲೇಖಕ ,ಫೋಟೋಗ್ರಾಫರ್ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಅದ ಒಂದು ಹೊಸ ಛಾಪನ್ನು ಮೂಡಿಸಿದರು.

ರಾಯರು ಎಂದೂ ಮರೆಯದ ಒಬ್ಬ ಗೆಳೆಯನೆಂದರೆ ಅದು "ವಿಜಯ್".ವಿಜಯ್ ರಾಯರ ಜೊತೆಗೆ ಪಿ ಯು ಸಿ ಓದಿದವನು. ಪಿ ಯು ಸಿ ಯಲ್ಲಿ ನಾಚಿಕೆಯ ಮುದ್ದೆಯಂತಿದ್ದ "ವಿಜಯ್" ಡಿಗ್ರೀಯಲ್ಲಾದ ಬದಲಾವಣೆ ರಾಯರಿಗೆ ಇಂದಿಗೂ ಕಲ್ಪಿಸಲು ಆಗುವುದಿಲ್ಲ.ಅದು ಎಲ್ಲಿಂದ ಹಿಡಿಯಿತೋ ಗೊತ್ತಿಲ್ಲ ಚೆಸ್ಸ್ ಆಡುವ ಹುಚ್ಚು, ಕ್ಲಾಸಿಗೆ ಅಟೆಂಡ್ ಆಗುವುದೇ ಬಿಟ್ಟು ಬಿಟ್ಟಿದ್ದ.ಮೊದಲ ವರ್ಷ ೪೫೦೦ ರೂ ದಂಡ ತೆತ್ತು ಹೇಗೋ ಪರೀಕ್ಷೆಗೆ ಕೂತಿದ್ದ.೨ನೆ ವರ್ಷದಲ್ಲಿರಬೇಕಾದರೆ ಒಮ್ಮೆ ರಾಯರು ಕೇಳಿದ್ದರು,ನೀನು ಹೀಗೆ ಮಾಡಿದರೆ ಮುಂದೆ ಜೀವನಕ್ಕೆ ಏನು ಮಾಡುವಿ ಎಂದು?ಆಗ "ವಿಜಯ್"ದು ಸರಳ ಉತ್ತರ "ಚೆಸ್ಸ್"ಕೋಟಾದಡಿ ಬ್ಯಾಂಕ್ ಗೆ ಕೆಲಸಕ್ಕೆ ಸೇರುವುದು.ಮತ್ತೆ ಹೀಗೆ ಮ್ಯಾಚ್ ಇದೆ ಎಂದು ಹೇಳಿ ಊರು ಸುತ್ತುವುದು.ವಾರಕ್ಕೆ ಒಂದೋ ಎರಡೋ ದಿನ ಕೆಲಸಕ್ಕೆ ಹೋಗುವುದು ಎಂದಿದ್ದ.ಹೀಗೆ ಜೀವನದ ಕಟು ಸತ್ಯದ ಕಲ್ಪನೆಯೇ ಇಲ್ಲದ ಒಬ್ಬ ವ್ಯಕ್ತಿಯಾಗಿ ತನ್ನದೇ ಪ್ರಪಂಚದಲ್ಲಿ ಸುತ್ತುತ್ತಿದ್ದ ವಿಜಯ್ ಗೆ ರಾಯರ ಬುದ್ದಿಮಾತು ರುಚಿಸಲಿಲ್ಲ.ರಾಯರು ತನ್ನಿಂದ ಆದಷ್ಟು ಹೇಳಿ ನೋಡಿದರು.ಏನೇನು ಪ್ರಯೋಜನವಾಗಲಿಲ್ಲ.ಕೊನೆಗೆ ರಾಯರು ಹೇಳುವುದನ್ನೇ ಬಿಟ್ಟರು.

ರಾಯರ ಮತ್ತಿಬ್ಬರು ಸ್ನೇಹಿತರೆಂದರೆ ಕಾರ್ತಿಕ್ ಮತ್ತು ಪ್ರಸಾದ.ಅವರಿಗಾದ ಅನ್ಯಾಯ ನೆನೆಸಿದರೆ ರಾಯರಿಗೆ ಇಂದಿಗೂ ಮೈಯುರಿಯುತ್ತದೆ.ರಾಯರಿಗೆ ಬರುತ್ತಿದ್ದ ಒಬ್ಬರು ಲೆಕ್ಚುರ್ ಮೇಲೆ ಒಳ್ಳೆ ಅಭಿಮಾನವಿತ್ತು.ಪಾಠ ಚೆನ್ನಾಗಿ ಮಾಡುತ್ತಿದ್ದರು.ಆದರೆ ಅವರು ದಿನ ಕ್ಲಾಸ್ಸಲ್ಲಿ ಬೇರೆ ಲೆಕ್ಚುರ್ ರನ್ನು ತಮಾಷೆ ಮಾಡುವುದು ಹೀಗೆಲ್ಲ ಮಾಡಿ ತರಗತಿ ಬೋರ್ ಆಗದ ಹಾಗೆ ನೋಡಿಕೊಳ್ಳುತ್ತಿದ್ದರು.ಆದರೆ ದಿನ ಕಳೆದಂತೆ ಇದೆ ಕೇಳಿ ಕೇಳಿ ಬೋರ್ ಅನಿಸತೊಡಗಿತು.ಇವರ ಸಹಪಾಠಿಗಳ ಆನ್ಸರ್ ಶೀಟ್ ಕಳೆದು ಹಾಕಿ ಕೊನೆಗೆ ಇಂಟರ್ನಲ್ ಮಾರ್ಕ್ಸ್ ಕೊಡದೆ ತುಂಬ ಸಥಾಯಿಸಿದ್ದರು.ಹೀಗೆಲ್ಲ ಮಾಡಿ ಲೆಕ್ಚೆರ್ ತಮ್ಮ
ಸ್ಥಾನದ ಗೌರವ ತಾವೇ ಹಾಳು ಮಾಡಿದ್ದರು.ಇವೆಲ್ಲ ರಾಯರಿಗೆ ಮರೆಯಲಾಗದ ಘಟನೆಗಳು.

ರಾಯರು ಎಲ್ಲ ವರ್ಷದಲ್ಲಿಯೂ "ವಿಶಿಷ್ಟ ದರ್ಜೆ"ಯಲ್ಲಿಯೇ ಉತ್ತೀರ್ಣರಾಗಿದ್ದರು.ಮುಂದೆ "ಎಂ ಎಸ್ ಸಿ" ಮಾಡುವ ಗುರಿ ಹೊಂದಿದ್ದರು.ಎಲ್ಲವು ಅಂದು ಕೊಂಡಂತೆ ನಡೆದರೆ ಮುಂದೆ ಕೊಣಾಜೆಯಲ್ಲಿ "ಎಂ ಎಸ್ ಸಿ ".ಅಂದು ಮಂಗಳವಾರ ಮತ್ತೆ ಬ್ರಹ್ಮರಾಯರು ಬಂದರು.ಈ ಸಲ ಇನ್ನು ಅದಾವ ಬೇಡಿಕೆ ಇರುತ್ತೋ ಏನೋ ಎಂದು ರಾಯರ ಹೃದಯ ಜೋರಾಗಿ ಬಡಿಯತೊಡಗಿತು.

ಮುಂದುವರೆಯುವುದು......

Sunday, November 8, 2009

ಹೋರಾಟದ ಹಾದಿ

-೨-

ರಾಯರು ಏನೋ ಹೇಳಬೇಕೆಂದು ಬಾಯಿ ತೆರೆದರು, ದ್ವನಿಯೇ ಹೊರಡಲಿಲ್ಲ ಮಾತು ಅರ್ದಕ್ಕೇ ನಿಂತಿತು, ಮೌನವೇ ಮಾತಾಯಿತು,ಕಣ್ಣುಗಳು ತುಂಬಿದವು.ಏನು ಹೇಳಲಿಲ್ಲ,ಹಾಗೆಯೆ ಒಳಗೆ ಹೊರಟು ಹೋದರು.ಆದರೆ ಈ ಘಟನೆ ರಾಯರ ಜೀವನದಲ್ಲಿ ಒಂದು ಮಹತ್ತರ ಬದಲಾವಣೆಗೆ ನಾಂದಿ ಹಾಡಿತು.

ಆವತ್ತು ರಾಯರು ಮೊದಲ ಬಾರಿಗೆ "ಕಲ್ಲಪದವು ಚಾಲೆಂಜರ್ಸ್" ತಂಡವನ್ನು ಪ್ರತಿನಿಧಿಸಿದ್ದರು.ಅಂದು ನಡೆದ ರೋಚಕ ಹೋರಾಟದಲ್ಲಿ ರಾಯರ ತಂಡ ಚಾಂಪಿಯನ್ ಆಗಿತ್ತು.ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರಾಯರಿಗೆ ಸಿಕ್ಕಿದ ಬಹುಮಾನ ಈಗ ಕಣ್ಣೆದುರು ಪುಡಿ ಪುಡಿಯಾಗಿ ಬಿದ್ದಿದೆ.

ಎಲ್ಲವನ್ನು ಹೇಳುತ್ತಿದ್ದ ರಾಯರು ಮೌನಿಯಾದರು.ಸದ್ದಿಲ್ಲದೆ ತಮ್ಮ ಕೆಲಸ ಮಾಡತೊಡಗಿದರು.ಹಾಗಾಗಿ ಈಗ ಅಮ್ಮನಿಗೆ ಏನು ಆಗುತ್ತಿದೆ, ಎಂಬ ಪೂರ್ಣ ವಿವರ ಸಿಗುತ್ತಿಲ್ಲ.ಅವರ ಅಮ್ಮನು ತಾನಾಗಿ ಏನು ಕೇಳುತ್ತಿರಲಿಲ್ಲ,ರಾಯರು ಏನು ಹೇಳುತ್ತಿರಲಿಲ್ಲ.ಆದರೆ ಅಮ್ಮನಿಗೆ ರಾಯರ ಮೇಲೆ ಪೂರ್ಣ ವಿಶ್ವಾಸ, ಆ ವಿಶ್ವಾಸವನ್ನು ರಾಯರು ಉಳಿಸಿದ್ದರು.ರಾಯರು ದಿನ ಬೆಳಿಗ್ಗೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಇಂಗ್ಲಿಷ್ ಹಾಗು ಹಿಂದಿ ವಾರ್ತೆ ಕೇಳುತ್ತಾ ತಿಂಡಿ ತಿನ್ನುತ್ತಿದ್ದರು.ರಾಯರಿಗೆ ಚಿತ್ರಗೀತೆ ಕೇಳುವ ಹುಚ್ಚು , ಹಿಂದಿ ,ಕನ್ನಡ,ಮಲಯಾಳ ಹೀಗೆ ಹಾಡಿಗೆ ಭಾಷೆಯ ಮಿತಿ ಇರಲಿಲ್ಲ ಯಾವದಾದರು ಆಗುತ್ತಿತ್ತು ,ಫುಲ್ ಸೌಂಡ್ ನೀಡಿ ಕೇಳುತ್ತಿದ್ದರು.ಅದೊಂದು ವಿಶೇಷ ರೇಡಿಯೋ ಬೇರೆ ಯಾರೇ ಇಟ್ಟರು ಕೇಳುತ್ತಿರಲಿಲ್ಲ, ರಾಯರ ಕೈಯಲ್ಲಿ ಮಾತ್ರ ಅದು ಕೇಳುತ್ತಿತ್ತು.ರಾಯರು ಅದನ್ನು ತಟ್ಟಿ ,ಕುಟ್ಟಿ ಕೇಳಿಸುತ್ತಿದ್ದರು,ಮನೆ ಮಂದಿ ಆ ರೇಡಿಯೋದ ಅಸೆ ಬಿಟ್ಟಿದ್ದರಿಂದ ರಾಯರಿಗೆ ತಮ್ಮ ಕಾರ್ಯಕ್ರಮ ಹಾಕಲು ಏನು ತೊಂದರೆ ಆಗುತ್ತಿರಲಿಲ್ಲ.

ರಾಯರು ಹೈಸ್ಕೂಲಿಗೆ ಬಂದ ಮೇಲಂತೂ ಜ್ಞಾನ ಸಂಗ್ರಹದ ಕಡೆಗೆ ತುಂಬಾ ಗಮನ ಹರಿಸಿದರು.ಬೇರೆ ಬೇರೆ ಪುಸ್ತಕ ಕೊಂಡು ಓದಿದರು,ಗ್ರಂಥಾಲಯದಲ್ಲಂತೂ ರಾಯರು ಕಾಯಂ ಆಗಿ ಬಿಟ್ಟಿದ್ದರು. ಪೇಟೆಯಲ್ಲಿಯೇ ಇದ್ದ "ಮೈತ್ರಿ ಬುಕ್ ಸೆಂಟರ್"ನಲ್ಲಿ ರಾಯರಿಗೆ ಬೇಕಾದ ಪುಸ್ತಕಗಳು ದೊರೆಯುತ್ತಿದ್ದವು,ಅಲ್ಲಿ ಇಲ್ಲದವನ್ನು ರಾಯರು ಬೇರೆ ಕಡೆಯಿಂದ ತರಿಸುತ್ತಿದ್ದರು.ರಾಯರು ಬರೆಯಲು ಪ್ರಾರಂಭಿಸಿದರು,ಕವನಗಳು ಕತೆಗಳು ಒಂದೊಂದಾಗಿ ಹೊರ ಬಂದವು. "ವಿ ಜಿ ನಾಯಕ " ,"ರಾಮ ಭಟ್ಟರು " ಇವರ ಕವನವನ್ನು ತಿದ್ದಿದರು, ಇವರ ಬೆಳವಣಿಗೆಗೆ ಶ್ರಮಿಸಿದರು."ನಾಯಕರು ಮತ್ತು ಭಟ್ಟರು" ಕನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಅಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ರಾಯರು ಬೆಳೆದರು.ಅಪಾರವಾದ ಜ್ಞಾನವನ್ನು ತ್ರಿಪದಿಗಳಲ್ಲಿ ಸೆರೆಹಿಡಿದ ಸರ್ವಜ್ಞನಿಂದ ಪ್ರೇರಣೆಗೊಂಡ ರಾಯರು ಅದೇ ಹಾದಿಯಲ್ಲಿ ಕವನ ರಚಿಸಿದರು.ಶಾಲೆಯಲ್ಲಿ ಇದಂತೂ "ಕರ್ಮಜ್ಞನ ತ್ರಿಪದಿಗಳು" ಎಂದೇ ಪ್ರಸಿದ್ದಿಯನ್ನು ಪಡೆಯಿತು.ರಾಯರ "ಪ್ರೇಮ ಕಹಾನಿ" ಕವನ ಸಂಕಲನ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಯಿತು.ಹೀಗೆ ರಾಯರು ನೋಡ ನೋಡುತ್ತಿದ ಹಾಗೆಯೆ ಕವಿಯಾದರು,ಯಾವುದೇ ವಿಷಯದ ಬಗ್ಗೆಯೇ ಅಗಲಿ ಪೂರ್ಣ ತಿಳಿದುಕೊಂಡು ಮಾತಾಡುತ್ತಿದ್ದರು,ವಾದದಲ್ಲಿ ಎಲ್ಲರನ್ನು ಸೋಲಿಸಿದರು.ಉತ್ತಮ ವಾಗ್ಮಿ ಎನಿಸಿಕೊಂಡರು.ಆದರೆ ಇಸ್ಟೆಲ್ಲಾ ಸಾಧನೆ ಮಾಡಿದರೂ,ಏನನ್ನೂ ಮನೆಯಲ್ಲಿ ಹೇಳಲಿಲ್ಲ ,ಬೇರೆ ಮಕ್ಕಳು ಹೇಳುವುದನ್ನು ಕೇಳಿ ರಾಯರ ಅಮ್ಮ ತಿಳಿದುಕೊಂಡರು.ಈ ಬಗ್ಗೆ ಕೇಳಿದಾಗ ರಾಯರು ಏನೋ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದರು.ಅವರಿಗೆ ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುವ ಅಭ್ಯಾಸವೇ ಬಿಟ್ಟುಹೋಗಿ,ಎಸ್ಟೋ ವರ್ಷಗಳೇ ಆಗಿತ್ತು . ಬಾಲ್ಯದಲ್ಲಿ ಏನೋ ಸಾಧಿಸಿದೆ ಎಂದು ಹೇಳಲೆಂದು ಓಡೋಡಿ ಬಂದಾಗ ನಡೆದ ಅನಿರೀಕ್ಷಿತ ಘಟನೆ ಮುಂದೆ ಅವರು ಎಂದೂ ಅವರ ಬಗ್ಗೆ ಹೇಳಿಕೊಳ್ಳದಂತೆ ಮಾಡಿತ್ತು.ರಾಯರಿಗೆ ಒಂದು "ಟೇಪು ರೆಕಾರ್ಡರ್" ಬೇಕು ಎಂಬ ಅಸೆ ಬಹುಕಾಲದಿಂದ ಇತ್ತು. "ಬ್ರಹ್ಮರಾಯರ" ಅನುಮತಿಗಾಗಿ ಕಾದರು.ಕೊನೆಗೆ ಒಂದು ದಿನ "ಬ್ರಹ್ಮರಾಯರಿಂದ" ಅನುಮತಿಯು ದೊರೆಯಿತು.ಆಮೇಲೆ ಒಂದರ ಹಿಂದೆ ಒಂದರಂತೆ "ಕ್ಯಾಸೆಟ್ಟು"ಗಳು ಬಂದವು.ಮನೆಯಿಡಿ ಇದರ ಶಬ್ದವೇ ಕೇಳಿಸುತ್ತಿತ್ತು.ರಾಯರು ಓದುವಾಗ, ಬರೆಯುವಾಗ ತಿಂಡಿ ತಿನ್ನುವಾಗ ಎಲ್ಲ ಒಟ್ಟಲ್ಲಿ ರಾಯರು ಮನೆಯಲ್ಲಿರುವಾಗ "ರೇಡಿಯೋ" , "ಟೇಪು ರೆಕಾರ್ಡರ್ " ಎಲ್ಲವೂ ಕೇಳಿಸುತ್ತಿತ್ತು.ಯಾರು ರಾಯರನ್ನು ಏನು ಹೇಳುತ್ತಿರಲಿಲ್ಲ,ಅಮ್ಮನಂತೂ ಅಂದು ಮಾಡಿದ ತಪ್ಪಿಗೆ ಇಂದೂ ಪಶ್ಚಾತ್ತಾಪ ಪಡುತ್ತಿದ್ದಾರೆ.ಮಗನ ಮನಸ್ಸನ್ನು ಅರಿಯದೇ ಸೋತೆ ಎಂಬತ್ತಾಗಿತ್ತು ಅವರ ಪರಿಸ್ಥಿತಿ.

ರಾಯರು "ಎಸ್ ಎಸ್ ಎಲ್ ಸಿ"ಯಲ್ಲಿರುವಾಗ "ಎಸ್ ಪಿ ಎಲ್ "(ಸ್ಕೂಲ್ ಪೀಪಲ್ ಲೀಡರ್) ಆದರು.ದೊರೆತ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು,ಎಲ್ಲರ ಪ್ರಶಂಸೆಗೆ ಪಾತ್ರರಾದರು.ಆ ವರ್ಷ ಎಂದಿನಂತೆ ಹಗಲು "ಸ್ಕೂಲ್ ಡೇ" ಎಂದಾಗ ರಾಯರು ವಿರೋಧಿಸಿದರು,"ಸ್ಕೂಲ್ ಡೇ " ಏನಿದ್ದರೂ ರಾತ್ರಿಯೇ ಚೆಂದ,ಹಾಗಾಗಿ ರಾತ್ರಿಯೇ ಮಾಡುವ ಎಂದರು.ಅದರೆ ಹಿಂದೆ ಅದ ಕಹಿ ಘಟನೆಗಳು,ರಾತ್ರಿ ಸ್ಕೂಲ್ ಡೇಗೆ ಮಂಗಳ ಹಾಡಿದ್ದವು.ಅದರೆ ರಾಯರು ಎಲ್ಲ ಜವಾಬ್ದಾರಿಯನ್ನು ವಹಿಸಿ,ಏನು ತೊಂದರೆ ಆಗದ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಮೇಲೆ ಸಂಚಾಲಕರು ಒಂದು ಅವಕಾಶ ನೀಡಿಯೇ ಬಿಟ್ಟರು.ರಾಯರು ಮೊದಲು ಹಳೆವಿದ್ಯಾರ್ಥಿಗಳನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು,ಸ್ವಯಂಸೇವಕರ ತಂಡವನ್ನು ಮಾಡಿದರು,ಹೀಗೆ ಊರವರ ಮತ್ತು ವಿದ್ಯಾರ್ಥಿಗಳ ಎಲ್ಲರ ಸಹಕಾರ ಸಹಯೋಗದಿಂದ "ಸ್ಕೂಲ್ ಡೇ"ಯಂತು ಗ್ರ್ಯಾಂಡ್ ಆಗಿ ನಡೆಯಿತು.ರಾಯರ ಶ್ರಮ ಫಲ ನೀಡಿತು.ಎಲ್ಲೆಡೆ ರಾಯರು ಸುದ್ದಿಯಾದರು.ಪ್ರಾಯಶ: ಆ ಶಾಲೆಯಲ್ಲಿ ರಾತ್ರಿ ನಡೆದ "ಸ್ಕೂಲ್ ಡೇ"ಯಲ್ಲಿ ಅದೇ ಕೊನೆಯದು.ಮುಂದೆ ಯಾರು ರಾಯರಂತವರು ಬರಲಿಲ್ಲ ಎಂದು ಇಂದಿಗೂ ಆ ಶಾಲೆಯ ಅಧ್ಯಾಪಕರು ನೆನಪಿಸಿಕೊಳ್ಳುತ್ತಾರೆ.

ರಾಯರು "ಎಸ್ ಎಸ್ ಎಲ್ ಸಿ" ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದರು.ಹೇಗೂ ಅಲ್ಲೇ "ಪಿ ಯು ಸಿ" ಇದ್ದುದರಿಂದ ಹೆಚ್ಚೇನು ಯೋಚನೆ ಮಾಡಬೇಕಾಗಿ ಬರಲಿಲ್ಲ.ಅಲ್ಲೇ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡರು.ಈಗ ರಾಯರು ಪೇಪರು, ಸುಧಾ,ತರಂಗ,ಮಯೂರ,ತುಷಾರಗಳಿಗೆ ಕವನ ಲೇಖನಗಳನ್ನು ಕಳಿಸಲು ಪ್ರಾರಂಭಿಸಿದರು. ಇವುಗಳನ್ನು ಪತ್ರಿಕೆಯಲ್ಲಿ ನೋಡಿ ಅಮ್ಮ ತಿಳಿದರು, ಕೇಳಿದಾಗ ರಾಯರು ಹಾ ಹೀಗೆ ಸುಮ್ಮನೆ ಕಳಿಸಿದ್ದೆ ಅವರು ಅದನ್ನು ಪ್ರಕಟಿಸಬೇಕೆ ಎಂದರು.ರಾಯರು "ಪಿ ಯು ಸಿ"ಯಲ್ಲಿದ್ದಾಗ ಅವರ ಮನದಲ್ಲಿ "ಎಂಜಿನಿಯರಿಂಗ್" ಮಾಡಬೇಕೆಂಬ ಮಹತ್ವಾ ಕಾಂಕ್ಷೆಯಿತ್ತು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದರು.ಅಮ್ಮ ಕೇಳಿದ್ದಕ್ಕೂ ಹಾಗೆ ಅಂದರು."ಪಿ ಯು ಸಿ "ಯಲ್ಲಿಯೂ ರಾಯರನ್ನೇ "ಸಿ ಪಿ ಎಲ್ " ಮಾಡಬೇಕೆಂದು ಪ್ರಿನ್ಸಿಪಾಲರಿಗೆ ಬಹಳ ಅಸೆ ಇತ್ತು.ಆದರೆ ರಾಯರು ವಿಜ್ಞಾನ ವಿಭಾಗದಲ್ಲಿದ್ದರು,"ವಾಣಿಜ್ಯ" ಮತ್ತು "ಕಲಾ"ವಿಭಾಗದಲ್ಲಿ ಅತ್ಯಧಿಕ ವಿಧ್ಯಾರ್ಥಿಗಳು ಇದ್ದದ್ದರಿಂದ,ಮತ್ತು ಅವರು ನಮ್ಮ ವಿಭಾಗದಿಂದಲೇ "ಸಿ ಪಿ ಎಲ್ " ಆಗಬೇಕೆಂದು ಹಠಹಿಡಿದದ್ದರಿಂದ ರಾಯರಿಗೆ "ಸಿ ಪಿ ಎಲ್ " ಆಗಲು ಸಾಧ್ಯವಾಗಲಿಲ್ಲ.ರಾಯರು "ಸಿ ಇ ಟಿ" ಪರೀಕ್ಷೆಯನ್ನು ಬರೆದರು.ಎಲ್ಲ ಪರೀಕ್ಷೆ ಮುಗಿಸಿ ಅರಾಮವಾಗಿದ್ದರು,ಇನ್ನೇನು ರಿಸಲ್ಟ್ ಬಂದ ಮೇಲೆ "ಎಂಜಿನಿಯರಿಂಗ್ "ಗೆ ಹೋಗುವುದು ಎಂಬುದು ರಾಯರ ಯೋಚನೆಯಾಗಿತ್ತು.ಅಮ್ಮನ ಪೂರ್ಣ ಬೆಂಬಲವೂ ಇತ್ತು .ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ,ಅಲ್ಲಿಯವರೆಗೆ ಮಗನ ವಿದ್ಯಾ ಭ್ಯಾಸದಲ್ಲಿ ವಿಶೇಷ ಆಸಕ್ತಿ ತೋರಿರದ "ಬ್ರಹ್ಮರಾಯರು" ಮಗನ ಬಾಳಲ್ಲಿ ಬಿರುಗಾಳಿಯಾಗಿ ಬಂದರು.

ಮುಂದುವರೆಯುವುದು ................

Saturday, November 7, 2009

ಹೋರಾಟದ ಹಾದಿ

--

ನಮ್ಮ ರಾಯರು ಇಂದು ತುಸು ಬೇಗನೆ ಮನೆಗೆ ಬಂದರು.ವರಾಂಡದಲ್ಲಿರುವ ಕುರ್ಚಿಯಲ್ಲಿ ಕುಳಿತು ಆಗಸದತ್ತ ನೋಡಿ ಏನೋ ಯೋಚಿಸುತ್ತಿದ್ದ ರಾಯರಿಗೆ "ಚಾ " ಎಂದು ಶ್ರೀಮತಿ ಕರೆದಾಗ ಪಕ್ಕನೆ ಎಚ್ಚರವಾಯಿತು. ಚಾ ಹೀರುತ್ತಾ ಅಂಗಳದತ್ತ ನೋಡಿದರೆ ಅಲ್ಲಿ "ಅರ್ಜುನ್ "ಕ್ರಿಕೆಟ್ ಆಡುತ್ತಿದ್ದ .ಒಳಗಡೆ ರೂಮಲ್ಲಿ "ಪ್ರೀತಿ" ಏನೋ ಕಂಠಪಾಟ ಮಾಡುವುದು ಕೇಳಿಸುತ್ತಿತ್ತು. ಶ್ರೀಮತಿಯವರು ಆಡಿದ್ದು ಸಾಕು ಪುಸ್ತಕ ಬಿಡಿಸದೆ ತಿಂಗಳುಗಳೇ ಕಳೆದವು ನೋಡು ಅಕ್ಕನನ್ನು ನೋಡಿ ಸ್ವಲ್ಪ ಕಲಿ,ಎಂದು ಮಗನನ್ನು ಗದರಿಸುತ್ತಿದ್ದರು ಆದರೆ ಮಗ ನನಗೆ ಹೇಳಿದ್ದೆ ಅಲ್ಲ ಎಂಬಂತೆ ತನ್ನ ಪಾಡಿಗೆ ತಾನು ಆಡುತ್ತಿದ್ದ.ಇದೆಲ್ಲ ರಾಯರಿಗೆ ಹೊಸದೇನು ಅಲ್ಲ,ಎಲ್ಲ ಮಾಮೂಲಿ.ಕುರ್ಚಿಗೆ ಒರಗಿ ಕೂತ ರಾಯರು ಅಲ್ಲೇ ತೂಕಡಿಸುತ್ತಿದ್ದರು,"ಗುಡ್ ಕೀಪಿಂಗ್ " ಅರ್ಜುನ್ "ವೆಲ್ ಡನ್" ಎಂದೆಲ್ಲ ಅರ್ಜುನ್ ಫ್ರೆಂಡ್ಸ್ ಕೂಗುತ್ತಿದ್ದರು.ಅರೆ ಮಂಪರಿನಲ್ಲಿದ್ದ ರಾಯರಿಗೆ ತಮ್ಮ ಕಾಲದ ನೆನಪಾಯಿತು.

"ಗುಡ್ ಕ್ಯಾಚ್" ಮೂರ್ತಿ ,"ವೆಲ್ ಡನ್" "ಕೀಪ್ ಇಟ್ ಅಪ್" ಎಂದು ನಮ್ಮ ರಾಯರನ್ನು ಎಂಟನೆಯ ವಯಸ್ಸಿನಲ್ಲಿಯೇ "ಕಲ್ಲಪದವಿನಲ್ಲಿ" ಹುರಿದುಂಬಿಸುತ್ತಿದ್ದರು.ರಾಯರು ಕಲ್ಲಪದವಿನ ಅತ್ಯಂತ ಕಿರಿಯ "ವಿಕೆಟ್ ಕೀಪರು",ಆ ಸಾಧನೆಯನ್ನ ಪ್ರಾಯಶ: ಇಂದಿಗೂ ಯಾರೂ ಮುರಿದಿಲ್ಲ.ರಾಯರು ಜನಿಸಿದುದು ತುಂಬು ಕುಟುಂಬದಲ್ಲಿ,ರಾಯರ ತಂದೆ ಟಿ ಸಿ ಹೆಚ್ ಕಾಲೇಜಿನ ಪ್ರಾಧ್ಯಾಪಕರು, ಅವರು ಮಾಸ್ಟ್ರ ಮಾಸ್ಟ್ರು ಅದ್ದರಿಂದ ಅವರು ಊರಲ್ಲೆಲ್ಲ "ಬ್ರಹ್ಮರಾಯರೆಂದೆ" ಪ್ರಸಿದ್ದಿ. ಪುತ್ತೂರಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ "ವಿದ್ಯಾಗಿರಿ" ರಾಯರ ಹುಟ್ಟೂರು.ಬ್ರಹ್ಮರಾಯರದು ಮದ್ಯಮ ವರ್ಗದ ಕುಟುಂಬ,ಕರಾವಳಿ ತೀರ,ಅಡಿಕೆ, ತೆಂಗು ಪ್ರಧಾನ ಬೆಳೆ,ಅಲ್ಲಲ್ಲಿ ಹೂ ಮುಡಿಸಿದಂತೆ ಬಾಳೆಯ ಗಿಡ ,ಹೆಚ್ಚೇನು ಉತ್ಪತ್ತಿ ಇಲ್ಲ,ಗೊರ್ಮೆಂಟ್ ಕೆಲಸ ಇದ್ದಿದ್ದರಿಂದ ಪರವಾಗಿಲ್ಲ ಎಂಬ ಪರಿಸ್ತಿತಿ.ನಮ್ಮ ರಾಯರ ನಾಮಧೇಯ "ಕೇಶವ ಮೂರ್ತಿ " ಎಂದು,ಅವರ ಅಮ್ಮನೇ ಮನೆಗೆಲಸ, ಕೃಷಿ ಕಾರ್ಯ ನೋಡಿದ್ದರಿಂದ ಬ್ರಹ್ಮರಾಯರು ತಮ್ಮ ಹೆಚ್ಚಿನ ಸಮಯವನ್ನು ಕಾಲೇಜಿಗೆ ಮುಡಿಪಾಗಿಟ್ಟಿದ್ದರು.ಹಾಗಾಗಿ ನಮ್ಮ ರಾಯರಿಗೆ ಅಪ್ಪನಿಗಿಂತಲೂ ಅಮ್ಮನೇ ಸ್ವಲ್ಪ ಹತ್ತಿರ.ರಾಯರು ತುಂಬ ಚೂಟಿ,ಆಟ ಪಾಠಗಳಲಿ ಎಲ್ಲದರಲ್ಲೂ ಮುಂದು.ಮನೆಯಲ್ಲಿರುವ ಅಣ್ಣ,ಅಕ್ಕಂದಿರು ದೊಡ್ಡಪ್ಪ ದೊಡ್ದಮ್ಮಂದಿರು ಎಲ್ಲರ ಮುದ್ದಿನ ಕಣ್ಮಣಿ.ಅಕ್ಕ ಮಾಡಿ ಕೊಡುವ ಗೋಧಿ ದೋಸೆ ಎಂದರಂತೂ ರಾಯರಿಗೆ ಪಂಚಪ್ರಾಣ. ರಾಯರು ಏನೇ ಅದರೂ ಚಾಚು ತಪ್ಪದೆ ಎಲ್ಲವನ್ನು ಅಮ್ಮನಿಗೆ ಬಂದು ಹೇಳುವ ಅಭ್ಯಾಸ ಬೆಳೆಸಿದ್ದರು.ಹಾಗಾಗಿ ಅಮ್ಮನಿಗೆ ಶಾಲೆಯಲ್ಲಿ ಏನೇನು ನಡೆಯುತ್ತವೆ,ರಾಯರ ಪ್ರಗತಿ ಎಲ್ಲ ವಿಚಾರಗಳು ಗೊತ್ತಾಗುತ್ತಿದ್ದವು. ರಾಯರು ತಮ್ಮ ಎಂಟನೆಯ ವಯಸ್ಸಿನಿಂದಲೇ ಮನೆಯ ಪಕ್ಕದಲ್ಲಿಯೇ ಇರುವ "ಕಲ್ಲಪದವಿನಲ್ಲಿ" ಕ್ರಿಕೆಟ್ ಆಡಲು ಶುರು ಮಾಡಿದರು. ಶೀಘ್ರದಲ್ಲಿಯೇ ವಿಕೆಟ್ ಕೀಪಿಂಗ್ ನಲ್ಲಿ ಪರಿಣತಿ ಹೊಂದಿದರು. ರಾಯರು ಒಂದೋ ಕ್ರಿಕೆಟ್ ಆಡಲು ಕಲ್ಲಪದವಿಗೆ ಹೋಗುತ್ತಿದ್ದರು ಇಲ್ಲವೇ ದೊಡ್ಡಪ್ಪನ ಮನೆಯಲ್ಲಿ ಟಿವಿ ನೋಡುತ್ತಿದ್ದರು.

ರಾಯರು ಐದನೇ ತರಗತಿಯಲ್ಲಿರುವಾಗ ಒಂದು ನಡೆಯಬಾರದ ಘಟನೆ ನಡೆದೇ ಹೋಯ್ತು. ರಾಯರ ತಾಯಿಗೆ, ಈ ರಾಯರು ದಿನಾ ಹೋಗಿ ಯಾರ್ಯಾರೋ ಜೊತೆ ಸೇರಿ ಕ್ರಿಕೆಟ್ ಆಡುವುದು ಅಸ್ಟು ಇಷ್ಟವಿರಲಿಲ್ಲ.ಅದೊಂದು ಭಾನುವಾರ ರಾಯರು ಬೆಳಗ್ಗೆ ಎದ್ದು ಕ್ರಿಕೆಟ್ ಆಡಲು ಹೋಗಿದ್ದರು.ಸಂಜೆಯಾದರೂ ರಾಯರ ಪತ್ತೆಯೇ ಇಲ್ಲ,ತಾಯಿಯ ಕೋಪ ನೆತ್ತಿಗೇರಿತ್ತು.ಇಂದು ತಕ್ಕ ಶಾಸ್ತಿ ಮಾಡಲೇ ಬೇಕೆಂದು ಬಯಸಿದ್ದರು.ಕೊನೆಗೆ ರಾತ್ರಿ ಏಳುವರೆಗೆ ರಾಯರು ಮನೆಗೆ ಬಂದರು,ಕೈಯಲ್ಲೊಂದು ಕಪ್,ಮತ್ತೊಂದು ಗಾಜಿನ ಲೋಟ ಇತ್ತು ,ರಾಯರ ಮುಖ ಮಂದಹಾಸದಿಂದ ಅರಳುತ್ತಿತ್ತು.ಏನೋ ಸಾಧಿಸಿದ ತೃಪ್ತಿ ಮುಖದಲ್ಲಿ ಪ್ರಕಟಗೊಂಡಿತ್ತು.ಮಗನ ಮುಖ ನೋಡಿದ ಕೂಡಲೇ ಅಮ್ಮನ ಕೋಪವೆಲ್ಲ ಕರಗಿತು.ಆದರೆ ಕೈಯಲ್ಲಿ ಇದ್ದ ಲೋಟ ನೋಡಿದ ಕೂಡಲೇ ಏನೋ ಮನದಲ್ಲಿಯೇ ಹೇಸಿಗೆಯಾಯಿತು.ಹಿಂದೆಮುಂದೆ ನೋಡದೆ ಮಗನ ಕೈಯಲ್ಲಿದ್ದ ಲೋಟವನ್ನು ಎತ್ತಿ ಎಸೆದೇ ಬಿಟ್ಟರು.


ಮುಂದುವರೆಯುವುದು ..........